ಮಂಗಳೂರು ಕಾರಾಗೃಹಕ್ಕೆ‌ ಗಾಂಜಾ ಪೂರೈಕೆ ಯತ್ನ, ಮೂವರ ಬಂಧನ

ಮಂಗಳೂರು, ಆಗಸ್ಟ್ 27: ಮಂಗಳೂರು‌‌ ಜಿಲ್ಲಾ ಕಾರಾಗೃಹಕ್ಕೆ‌ ಗಾಂಜಾ ಪೂರೈಕೆ ಮಾಡಲು ಯತ್ನಿಸುತಿದ್ದ 3 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಶೋಕ ನಗರ‌ ಗುರುಂಪೆ‌ ನಿವಾಸಿ ರಿತೇಶ್ (21), ಪುತ್ತೂರು ಕೆಮ್ಮಿಂಜೆ‌ ನಿವಾಸಿ ರವಿ ಪೂಜಾರಿ (23), ಕುಂಜತ್ತೂರು‌ ನಿವಾಸಿ ರಾಜೇಶ್ (29) ಎಂದು ಗುರ‍ುತಿಸಲಾಗಿದೆ.

Three held for trying to supply ganja to Mangaluru Jail

ಬಂಧಿತರು ಜೈಲಿನ ಹೊರಬದಿಯಿಂದ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಜೈಲಿನ ಗೋಡೆಯ ಮೂಲಕ ಬಿಸಾಕಿ ಗಾಂಜಾ ಪೂರೈಕೆಗೆ‌ ಸ್ಕೆಚ್ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಗಾಂಜಾ ಹಿಡಿದುಕೊಂಡು ಹೊರಗೆ ಅಂಗಡಿಯೊಂದರ ಬಳಿ‌ ನಿಂತಿದ್ದ ಆರೋಪಿಗಳನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕದ್ರಿ ಠಾಣಾ ಪೊಲೀಸರು ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 3500ರೂ. ಮೌಲ್ಯದ 250 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಈ‌ ಹಿಂದೆ ಜೈಲುವಾಸಿಗಳಾಗಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+