ಅಮ್ಯೂಸ್ ಮೆಂಟ್ ಪಾರ್ಕ್ ನಿಂದ ಬದುಕು ಕಟ್ಟಿಕೊಂಡವರು
ಧರ್ಮಸ್ಥಳ, ನವೆಂಬರ್ 17: ಭಾರೀ ಪ್ರಮಾಣದ ಜನಸ್ತೋಮ ಅಲ್ಲಿ ಸೇರಿತ್ತು. ಎತ್ತ ನೋಡಿದರೂ ಜನಸಾಗರ. ನೋಡ ನೋಡುತ್ತಿದ್ದಂತೆಯೇ ಒಂದು ಬಂಡಿ ತಿರುಗಲಾರಂಭಿಸಿತು. ನೂಕು ನುಗ್ಗಲಿನ ನಡುವೆ ಜನರು ನಾ ಮುಂದು ತಾ ಮುಂದು ಎಂದು ತಿರುಗಣಿ ಚಕ್ರಬಂಡಿಯ ಮೇಲೆ ಹತ್ತುವ ತವಕದಲ್ಲಿದ್ದರು...
ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ
ಈ ದೃಶ್ಯಕಂಡುಬಂದದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ನಿರ್ಮಾಣಗೊಂಡಿರುವ ಅಮ್ಯೂಸ್ ಮೆಂಟ್ ಪಾರ್ಕ್ನಲ್ಲಿ. ಅಮ್ಯೂಸ್ ಮೆಂಟ್ ಅಂದಾಗ ಎಲ್ಲರ ಮನಸ್ಸಲ್ಲಿ ಕುತೂಹಲ ಮೂಡುವದು ಸಹಜ.

ಆದರೆ, ಅದರ ಹಿಂದೆ ಇರುವ ಕೈಗಳ ಸಂಖ್ಯೆ ಅದೆಷ್ಟೋ. ಹಗಲು ರಾತ್ರಿ ಎನ್ನದೆ ನಿದ್ದೆಕೆಟ್ಟು ಜನರ ಮನರಂಜಿಸುವ ಈ ಜನಬಂದಿದ್ದು ದೂರದ ಊರಿನಿಂದ. ಎಲ್ಲಿಂದಲೋ ಬಂದು ಪರ ಊರಿನ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಂಡು, ಜನರನ್ನು ತಮ್ಮೆಡೆಗೆ ಆಕರ್ಷಿಸುವುದು ಸುಲಭದ ಕೆಲಸವಲ್ಲ. ಈ ಸಾಹಸವನ್ನು ಮಾಡುತ್ತಿರುವುದು ಅಮ್ಯೂಸ್ ಮೆಂಟ್ ತಂಡ.
ಪ್ರತೀ ವರ್ಷ ತಮ್ಮ ಹೊಟ್ಟೆಪಾಡಿಗಾಗಿ ಕಾರ್ಯನಿರ್ವಹಿಸುವ ಇವರ ಜೀವನ ವಿಧಾನ ಕಷ್ಟಕರ. ಒಂದು ವಾರದ ಹಿಂದೆ ಧರ್ಮಸ್ಥಳಕ್ಕೆ ಬಂದ ಇವರು ತಮಗೆ ನೀಡಿದ 8 ಎಕರೆ ವ್ಯಾಪ್ತಿಯ ಜಾಗದಲ್ಲಿ ಜೀವನದ ಬಂಡಿಯನ್ನುಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಟ್ ಹಾಗೂ ಬೋಲ್ಟ್ ಗಳ ಮೂಲಕ ಉಪಕರಣಗಳನ್ನು ಕಟ್ಟುವ ಇವರು, ಅವುಗಳ ಚಲಾವಣೆಗಾಗಿ ಡೀಸೆಲ್ ಬಳಸುತ್ತಾರೆ.

ಮಹಾರಾಷ್ಟ್ರ, ಬಿಹಾರ, ಚಿತ್ರದುರ್ಗ, ಮೈಸೂರು, ಶಿರಸಿಯಿಂದ ಆಗಮಿಸಿರುವ ಈ ತಂಡದಲ್ಲಿ ಸುಮಾರು 80 ಜನರಿದ್ದಾರೆ. ತಮ್ಮಊರಿನಿಂದ ಉಪಕರಣಗಳನ್ನು ಧರ್ಮಸ್ಥಳಕ್ಕೆ ತರಲು 1 ಲಾರಿಗೆ ಸುಮಾರು 13ಸಾವಿರ ಬಾಡಿಗೆಯಿದೆ. ಅಮ್ಯೂಸ್ ಮೆಂಟ್ ಪಾರ್ಕ್ನ ಹಿಂದೆ ಬಿಡಾರ ಹೂಡಿರುವ ಇವರು ಅಲ್ಲಿಯೇ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಬದುಕಲು ಕಷ್ಟ. ಆದರೂ ಇದು ವಂಶಪಾರಂಪರ್ಯವಾಗಿ ಬಂದ ಕುಲಕಸುಬು ಎನ್ನುವ ಇವರಿಗೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಆಸಕ್ತಿಯಿದೆ. ಆದರೆ ಹಣದ ಕೊರತೆಯಿಂದಾಗಿ ಇದೇ ಕೆಲಸಕ್ಕೆ ಒಗ್ಗಿಕೊಂಡಿದ್ದಾರೆ. ಇವರಲ್ಲಿ ಪ್ರತೀ ವರ್ಷ ಧರ್ಮಸ್ಥಳಕ್ಕೆ ಆಗಮಿಸುವವರು. ಕಳೆದ ಬಾರಿ ಅಮ್ಯೂಸ್ ಮೆಂಟ್ಗೆ50 ರೂ.ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಬಾರಿ ಶುಲ್ಕವನ್ನು 70 ರೂ.ಗೆ ಏರಿಸಲಾಗಿದೆ.

ಇದರಿಂದಾಗಿ ಅಲ್ಲಿಗೆ ಬರುವ ಜನರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಜೈಂಟ್ ವ್ಹೀಲ್, ಕ್ರಾಸ್ ವ್ಹೀಲ್, ಕೊಲಂಬಸ್, ಸಲಾಂಬು, ಬ್ರೇಕ್ಡಾನ್ಸ್, ಮರಣ ಬಾವಿ, ಬೌನ್ಸೀ, ಚಾಂದ್ತಾರಾ, ಮಹಾರಾಜಾ ಟ್ರೈನ್, ಕಮಾಂಡೋ, ಚಕ್ರಿ, ಟ್ರೈಗನ್, ಜಂಪಿಂಗ್ ಸೇರಿದಂತೆ ಹಲವಾರು ರೀತಿಯ ಮನೋರಂಜನಾತ್ಮಕ ಆಟಗಳನ್ನು ಇದು ಒಳಗೊಂಡಿದೆ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications