ಲಾರಿ ಕ್ಯಾಬಿನ್ ನಲ್ಲಿ ಅಡಗಿಕೊಂಡಿತ್ತು ವಿಷ ಸರ್ಪ
ಮಂಗಳೂರು, ಆಗಸ್ಟ್ 18: ಚಲಿಸುತ್ತಿದ್ದ ಅನಿಲ ಸಾಗಾಟ ಟ್ಯಾಂಕರ್ ನ ಕ್ಯಾಬಿನ್ ನಲ್ಲಿ ಫ್ರೀ ಟ್ರಿಪ್ ಹೊರಟಿದ್ದ ಅತಿಥಿ ಯೊಬ್ಬರನ್ನು ಕಂಡಾಗ ಆತಂಕದಿಂದ ಚಾಲಕ ಮಾಡಿದ್ದೇನು ಗೊತ್ತಾ ಈ ಸ್ಟೋರಿ ಓದಿ .
ಮಂಗಳೂರಿನ ಸುರತ್ಕಲ್ ಕಾನ ಎಂಬಲ್ಲಿ ಅನಿಲ ತುಂಬಿಸಿದ ಬುಲೆಟ್ ಟ್ಯಾಂಕರ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಾಗುತ್ತಿತ್ತು. ದಾರಿ ಮಧ್ಯೆ ಟ್ಯಾಂಕರ್ ನ ಚಾಲಕನಿಗೆ ಕಾಲಿನ ಬಳಿ ಏನೋ ಬಿಗಿದು ಕೂಡಿರುವಂತೆ ಭಾಸವಾಗಿದೆ. ಈ ಸಂದರ್ಭದಲ್ಲಿ ಕಾಲಿಗೆ ನಾಗರ ಹಾವು ಸುತ್ತಿ ಕೊಂಡಿರುವುದುವುದನ್ನು ಕಂಡ ಚಾಲಕ ಹೌಹಾರಿದ್ದಾನೆ . ಆತಂಕದಿಂದ ಟ್ಯಾಂಕರ್ ನ ಸ್ಟೇರಿಂಗ್ ಕೈಬಿಟ್ಟಿದ್ದಾನೆ .

ಕೆಲವು ಕ್ಷಣಗಳ ಬಳಿಕ ಸುಧಾರಿಸಿಕೊಂಡ ಚಾಲಕ ಅನಿಲ ತುಂಬಿದ ಟ್ಯಾಂಕರ್ ನ್ನು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಬಳಿ ನಿಲ್ಲಿಸಿ ಒಂದೇ ಸಮನೆ ಟ್ಯಾಂಕರ್ ನಿಂದ ಕೆಳಗೆ ಬಿದ್ದಿದ್ದಾನೆ .

ಈ ಹಿನ್ನೆಲೆಯಲ್ಲಿ ಕೆಲ ಹೊತ್ತು ದಾರಿ ಮಧ್ಯೆ ಟ್ಯಾಂಕರ್ ನಿಂತ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಯಾಬಿನ್ ನಿಂದ ಸರ್ರನೆ ಸಾಗಿದ ನಾಗರಾಜ ಟ್ಯಾಂಕರ್ ನ ಇಂಜಿನ್ ಪ್ರವೇಶಿಸಿದ್ದಾನೆ ಈ ಸಂದರ್ಭದಲ್ಲಿ ಉರಗ ತಜ್ಞರಿಗೆ ಬುಲಾವ್ ಹೋಗಿದೆ .

ಸುಮಾರು ಒಂದು ಗಂಟೆಗಳ ಕಾಲ ಅವಿರತ ಶ್ರಮ ಹಾಗೂ ಸಾಹಸದಿಂದ ನಾಗರಹಾವನ್ನು ಹಿಡಿಯುವಲ್ಲಿ ಉರಗತಜ್ಞರು ಯಶಸ್ವಿಯಾಗಿದ್ದಾರೆ. ಹಿಡಿದ ನಾಗರಹಾವನ್ನು ದೂರದ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ .
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications