ಭಯ ಬೇಡ, ಬೆದ್ರಕಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು 'ಬೆಕ್ಕು ಹಾವು'
Recommended Video

ಮಂಗಳೂರು, ಅಕ್ಟೋಬರ್.30: ದಕ್ಷಿಣಕನ್ನಡ ಜಿಲ್ಲೆಯ ಬೆದ್ರಕಾಡು ಪ್ರದೇಶದಲ್ಲಿ ಪತ್ತೆಯಾಗಿದ್ದ ವಿಚಿತ್ರ ಬಣ್ಣದ ಹಾವಿನ ಮಾಹಿತಿ ಈಗ ತಿಳಿದುಬಂದಿದೆ. ನಿನ್ನೆ ಸೋಮವಾರ (ಅ.29) ಬೆಳ್ತಂಗಡಿ ತಾಲೂಕಿನ ಕಲ್ಮಂಜ ಎಂಬಲ್ಲಿ ಪತ್ತೆಯಾಗಿದ್ದ ಕಪ್ಪು ಬಿಳಿ ಪಟ್ಟೆಯ ವಿಚಿತ್ರ ಬಣ್ಣದ ಹಾವು ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಬೆಕ್ಕು ಹಾವು ಎಂದು ಉರಗ ತಜ್ಞರು ತಿಳಿಸಿದ್ದಾರೆ.
"ಭಯಪಡುವ ಅಗತ್ಯವಿಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಈ ಅಪರೂಪದ ಹಾವು ವಿಷಕಾರಿಯಲ್ಲ. ಇದನ್ನು 'ಫೋರ್ಸ್ ಟೆನ್ಸ್ ಕ್ಯಾಟ್ ಸ್ನೆಕ್' ಅಥವಾ 'ಬೆಕ್ಕು ಹಾವು' ಎಂದು ಕರೆಯಲಾಗುತ್ತದೆ" ಎಂದು ಉರಗ ತಜ್ಞ ಗುರುರಾಜ್ ಸನಿಲ್ ತಿಳಿಸಿದ್ದಾರೆ.
ಈ ಹಾವುಗಳು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕಂಡುಬರುತ್ತವೆ. ಈ ಹಿಂದೆ ಕಾರ್ಕಳ ತಾಲೂಕಿನ ಪಳ್ಳಿಗ್ರಾಮದಲ್ಲಿ ಈ ಬೆಕ್ಕು ಹಾವನ್ನು ಹಾವನ್ನು ರಕ್ಷಣೆ ಮಾಡಿದ್ದೆವು ಎಂಬ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ತುಳು ಭಾಷೆಯಲ್ಲಿ ಈ ಹಾವನ್ನು 'ಸಾರಿಬಳ' ಎಂದು ಕರೆಯುತ್ತಾರೆ. ಬೊಯಾಗ ಫ್ಲೋರ್ಸ್ ಟೆನಿ ಎಂಬುದು ಇದರ ವೈಜ್ಞಾನಿಕ ಹೆಸರು . ಇದರ ಕಣ್ಣು ಬೆಕ್ಕಿನ ಕಣ್ಣನ್ನು ಹೋಲುವ ಕಾರಣಕ್ಕೆ ಇದನ್ನು ಬೆಕ್ಕು ಹಾವು ಎಂದು ಕರೆಯಲಾಗುತ್ತದೆ. ಹಾವು ಕಂಡು ಬಂದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...

ಜನರಲ್ಲಿ ಆತಂಕ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಮವಾರ (ಅ.29) ಅಪರೂಪದ ವಿಚಿತ್ರ ಬಣ್ಣದ ಹಾವೊಂದು ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಅಷ್ಟೇ ಅಲ್ಲ ಬುಸುಗುಡುತ್ತಿದ್ದ ಈ ಹಾವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಗಂಭೀರ ಚರ್ಚೆಗಳು ಆರಂಭವಾಗಿದ್ದವು.

ಕುತೂಹಲ ಮೂಡಿಸಿತ್ತು
ಈ ಹಾವು ನೋಡಲು ಭಾರೀ ವಿಷಪೂರಿತ ಕೊಲಂಬಿಯಾ ಕಿಂಗ್ ಸ್ನೇಕ್ ನಂತೆ ಕಾಣುತ್ತಿದ್ದರೂ ಅದರ ಬಣ್ಣ, ಆಕಾರ ವಿಚಿತ್ರವಾಗಿದ್ದ ಕಾರಣ ಜನರಲ್ಲಿ ಕುತೂಹಲ ಮೂಡಿಸಿತ್ತು. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬೆದ್ರಕಾಡು ಪ್ರದೇಶದಲ್ಲಿ ಈ ಅಪರೂಪದ ಹಾವು ಪತ್ತೆಯಾಗಿತ್ತು.

ಆರು ಅಡಿ ಉದ್ದ
ಕಲ್ಮಂಜ ನಿವಾಸಿ ಓಡಿಯಪ್ಪ ಗೌಡ ಎಂಬುವವರ ಮನೆಯಲ್ಲಿ ಬಿಳಿ ಹಾಗೂ ಕಪ್ಪು ಮೈಬಣ್ಣವನ್ನು ಹೊಂದಿರುವ ಆರು ಅಡಿ ಉದ್ದದ ಈ ಅಪರೂಪದ ಹಾವು ಕಂಡುಬಂದಿತ್ತು. ಅದನ್ನು ನೋಡಿ ಹೌಹಾರಿದ ಮನೆಯ ಮಂದಿ ಆತಂಕಗೊಂಡಿದ್ದರು.

ಹಾವು ಹಿಡಿಯುವಲ್ಲಿ ಸಫಲ
ವಿಷಕಾರಿಯಂತೆ ಕಂಡುಬಂದ ಈ ಹಾವು ಇಲ್ಲಿದ್ದರೆ ತೊಂದರೆ ಎಂದು ಮನಗಂಡ ಓಡಿಯಪ್ಪ ಗೌಡ ತಕ್ಷಣ ಸ್ಥಳೀಯ ಉರಗತಜ್ಞ ಲಿಂಗಪ್ಪ ಮಾಚಾರು ಅವರಿಗೆ ಕರೆ ಮಾಡಿದ್ದರು.
ಲಿಂಗಪ್ಪ ಮಾಚಾರ ಅತ್ಯಂತ ಚಾಕಚಕ್ಯತೆಯಿಂದ ಹಾವನ್ನು ಹಿಡಿಯುವಲ್ಲಿ ಸಫಲರಾಗಿದ್ದರು. ನಂತರ ಹಾವನ್ನು ಸುರಕ್ಷಿತವಾಗಿ ಮಂಗಳೂರಿನ ಪಿಲಿಕುಲ ನಿಸರ್ಗಧಾಮಕ್ಕೆ ನೀಡಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications