ಕರಾವಳಿಯಲ್ಲಿ ಧೋ ಎಂದು ಸುರಿಯುತ್ತಿರೋ ಮಳೆ: ಭಯ ಹುಟ್ಟಿಸಿದ ಸುಂಟರಗಾಳಿ
Recommended Video

ಮಂಗಳೂರು, ಜೂನ್.20: ರಾಜ್ಯದಾದ್ಯಂತ ಮುಂಗಾರು ಚುರುಕುಗೊಂಡಿದೆ. ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಅಗತ್ಯ ಬಿದ್ದರೆ ಶಾಲೆ, ಕಾಲೇಜಿಗೆ ರಜೆ ನೀಡಲು ಆಯಾ ಶಿಕ್ಷಣ ಸಂಸ್ಥೆಗಳು ನಿರ್ಧರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸಲಹೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪರಿಸ್ಥಿತಿ ಅವಲೋಕಿಸಿ ರಜೆ ಘೋಷಿಸಲು ಸೂಚಿಸಲಾಗಿದೆ. ಶಾಲಾಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಚಿಸಿದೆ. ನಿನ್ನೆ ರಾತ್ರಿಯಿಂದ ಧೋ ಎಂದು ಮಳೆ ಬಿಡದೆ ಸುರಿಯುತ್ತಿದೆ.
ಸೋಮವಾರ ಸಂಜೆ ಭಾರೀ ಸುಂಟರಗಾಳಿ: ಅಮೇರಿಕಾದ ಸಮುದ್ರದಲ್ಲಿ ಬೃಹತ್ ಸುಳಿಗಾಳಿ ಅಥವಾ ಸುಂಟರಗಾಳಿ ಸರ್ವೆ ಸಾಮಾನ್ಯ. ಯುರೋಪ್ ನ ಸಮುದ್ರ ಕಿನಾರೆಗಳು ಇದಕ್ಕೆ ಹೊರತಾಗಿಲ್ಲ. ಪ್ರತಿವರ್ಷ ಈ ಟರ್ನಾಡೊ ಅಥವಾ ಸುಂಟರಗಳಿಗೆ ನೂರಾರು ಜನರು ಬಲಿಯಾಯಾಗುತ್ತಾರೆ. ಈ ಬೃಹತ್ ಸುಂಟರಗಾಳಿಯ ಸುಳಿಯಲ್ಲಿ ಸಿಲುಕುವ ಎಲ್ಲವೂ ಸರ್ವನಾಶ .

ಈ ಸುಂಟರಗಾಳಿ ಬಗ್ಗೆ ಕೆಲವು ವರ್ಷಗಳ ಹಿಂದೆ ಹಾಲಿವುಡ್ ನಲ್ಲಿ ಟ್ವಿಸ್ಟರ್ ಹೆಸರಿನ ಸಿನಿಮಾ ಕೂಡ ನಿರ್ಮಾಣವಾಗಿತ್ತು. ವಿಶ್ವದಾದ್ಯಂತ ಈ ಚಿತ್ರ ದಾಖಲೆಯ ಗಳಿಕೆ ಮಾಡಿತ್ತು. ಇದೇ ಟ್ವಿಸ್ಟರ್ ಚಿತ್ರವನ್ನು ನೆನಪಿಸುವ ಘಟನೆ ಮಂಗಳೂರು ಕಡಲ ಕಿನಾರೆಯಲ್ಲಿ ನಡೆದಿದೆ. ಮಂಗಳೂರಿನ ಪ್ರಸಿದ್ದ ಪಣಂಬೂರು ಬೀಚ್ ನಲ್ಲಿ ಸೋಮವಾರ ಸಂಜೆ ಭಾರೀ ಸುಂಟರಗಾಳಿ ಕಾಣಿಸಿಕೊಂಡಿತ್ತು.
ಆಕಾಶದಲ್ಲಿ ಕಾರ್ಮುಗಿಲ ನಡುವಿನಿಂದ ಸುಳಿ ಸುತ್ತುತ್ತಾ ಸಮುದ್ರಕ್ಕೆ ಇಳಿದ ಸುಂಟರಗಾಳಿ ಬಳಿಕ ದಡದತ್ತ ಸಾಗಿ ತನ್ನ ವೇಗ ಕಳೆದುಕೊಂಡಿತು. ಈ ಸನ್ನಿವೇಶ ಕಡಲ ಕಿನಾರೆಯಲ್ಲಿ ಸೇರಿದವರಿಗೆ ಈ ಹಿಂದೆ ನೋಡಿದ ಟ್ವಿಸ್ಟರ್ ಚಿತ್ರ ನೆನಪಿಸಿ ಎದೆಯಲ್ಲಿ ನಡುಕ ಹುಟ್ಟಿಸಿತು.
ದಡದತ್ತ ಪ್ರವೇಶಿಸುತ್ತಿದ್ದಂತೆ ವೇಗ ಕಳೆದುಕೊಂಡಿದ್ದರಿಂದ ಅದೃಷ್ಟವಶಾತ್ ಯಾವುದೇ ಆಸ್ತಿಪಾಸ್ತಿಗಳಿಗೆ ಹಾನಿಯಾಗಿಲ್ಲ.

ಪಣಂಬೂರು ಕಡಲ ಕಿನಾರೆಯಲ್ಲಿ ಬೋರ್ಗರೆಯುವ ಸಮುದ್ರದ ವಿಹಂಗಮ ನೋಟದೊಂದಿಗೆ ತಂಗಾಳಿಯನ್ನು ಅನುಭವಿಸುತ್ತಿದ್ದವರಿಗೆ ಏಕಾಏಕಿ ಕಡಲಲ್ಲಿ ಸೃಷ್ಟಿಯಾದ ಸುಂಟರಗಾಳಿ ಆತಂಕಕ್ಕಿಡು ಮಾಡಿತು.
ತಕ್ಷಣ ಎಚ್ಚೆತ್ತುಕೊಂಡ ಬೀಚ್ ರಕ್ಷಣಾ ದಳದ ಸಿಬ್ಬಂದಿ ಅಪಾಯ ಮುನ್ಸೂಚನೆಯ ಸೈರನ್ ಮೊಳಗಿಸಿ ಜನರನ್ನು ಕಡಲ ಕಿನಾರೆಯಿಂದ ದೂರ ಸರಿಯುವಂತೆ ಮಾಡಿದರು.
ಸಾಮಾನ್ಯವಾಗಿ ಮೋಡ ಹಾಗೂ ಭೂಮಿಯ ಸಂಪರ್ಕದೊಂದಿಗೆ ಮುನ್ನುಗ್ಗುವ ಸುಂಟರಗಾಳಿಗಳು ಅದರಲ್ಲೂ ಸಮುದ್ರದಲ್ಲಿ ಏಳುವ ಸುಂಟರಗಾಳಿ ಅಪಾಯಕಾರಿ ಎಂದೇ ಪರಿಗಣಿಸಲಾಗುತ್ತವೆ. ಇಂತಹ ಕಡಲ ಮದ್ಯೆ ಏಳುವ ಸುಂಟರಗಾಳಿಗಳು ಭಾರತದ ಕಡಲತೀರದಲ್ಲಿ ಅಪರೂಪ.
ಪಣಂಬೂರು ಬೀಚ್ ನಲ್ಲಿ ಸೋಮವಾರ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು












Click it and Unblock the Notifications