ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಂದೆಯ ಫೋಟೋ ವೈರಲ್!
ಮಂಗಳೂರು, ಮೇ 13: ಜನರಿಗೆ ಶ್ರೀಮಂತಿಕೆ, ಅಧಿಕಾರ ಬಂದ ಕೂಡಲೇ ಅವರ ಲೆವೆಲ್ ಬದಲಾಗುತ್ತದೆ. ಅದರಲ್ಲೂ ಕುಟುಂಬದಲ್ಲಿ ಯಾರಾದರೂ ರಾಜಕೀಯದಲ್ಲಿದ್ದಾರೆ ಎಂದರೆ ಕೇಳೊದೇ ಬೇಡ. ಆದರೆ ಶಾಸಕರೊಬ್ಬರ ತಂದೆ, ಮಗ ಕ್ಷೇತ್ರದ ಶಾಸಕನಾದರೂ ತಮ್ಮ ಹಿಂದಿನ ದಿನಗಳನ್ನಾಗಲಿ, ವೃತ್ತಿಯನ್ನಾಗಲಿ ಮರೆತೆ ಇಲ್ಲ .
ಹೌದು, ಇಂದಿಗೂ ಸೈಕಲ್ ಏರಿ ಡೇರಿಗೆ ಹಾಲು ಕೊಡಲು ತೆರಳುತ್ತಾರೆ ಎಂದರೆ ನಂಬಬಹುದೆ? ಆದರೆ ಇದು ಸತ್ಯ ವಿಚಾರ. ಇಲ್ಲಿ ನಾವು ಹೇಳ ಹೊರಟಿರುವುದು ಬೆಳ್ತಂಗಡಿಯ ಬಿಜೆಪಿ ಶಾಸಕರ ತಂದೆಯವರ ಬಗ್ಗೆ.
ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ತಂದೆ, ಗರ್ಡಾಡಿ ಗ್ರಾಮದ ನಿವಾಸಿ ಮುತ್ತಣ್ಣ ಪೂಂಜಾ ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್ ಸೈಕಲ್ ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗ್ತಿರೋ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುತ್ತಣ್ಣ ಅವರು ಮಗ ಶಾಸಕನಾದ್ರೂ, ತಮ್ಮ ದಿನನಿತ್ಯದ ಜೀವನ ಶೈಲಿಯನ್ನು ಕಿಂಚಿತ್ತೂ ಬದಲಿಸಿಕೊಂಡಿಲ್ಲ.ಇಂದಿಗೂ ಸರಳತೆಯನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. 74 ವರ್ಷದ ಮುತ್ತಣ್ಣ ಬದುಕು ನಡೆಸಲು ಕೃಷಿಯನ್ನು ಅವಲಂಬಿಸಿದ್ದಾರೆ.

ಅಡಿಕೆ ತೋಟಕ್ಕೆ ಹೋಗಿ ನೆಲದಲ್ಲಿ ಬಿದ್ದ ಅಡಕೆಗಳನ್ನು ಎತ್ತಿಕೊಂಡು ಬರುತ್ತಾರೆ. ಮಗ ಶಾಸಕನಾದರೂ ತನ್ನ ದೈನಂದಿನ ಕಾಯಕದಿಂದ ಮುತ್ತಣ್ಣ ಇಂದಿಗೂ ವಿಮುಖರಾಗಿಲ್ಲ.

ಈ ಕುರಿತು ಹೆಮ್ಮೆ ಪಡುವ ಶಾಸಕ ಹರೀಶ್ ಪೂಂಜಾ, ತಮ್ಮ ಕುಟುಂಬ ಮೊದಲಿನಿಂದಲೂ ಕೃಷಿಯನ್ನೇ ಅವಲಂಬಿಸಿದೆ. ತಂದೆ ಕೃಷಿಯನ್ನೇ ನಂಬಿಕೊಂಡು ನಮ್ಮನ್ನೆಲ್ಲ ಬೆಳೆಸಿದರು. ನಾನು ಶಾಸಕನಾದರೂ ಅವರ ಬದುಕಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೃಷಿ ಮತ್ತು ಹೈನುಗಾರಿಕೆಯೇ ತಂದೆಯ ಬದುಕಾಗಿದೆ. ಮುಂಜಾನೆ 6ಕ್ಕೆ ಏಳುವ ಅವರು ತಿಂಡಿ ತಿಂದು, ಡೇರಿಗೆ ಹಾಲು ಹಾಕಿ ಬರುತ್ತಾರೆ. ಬಳಿಕ ಮಧ್ಯಾಹ್ನದವರೆಗೂ ತೋಟದಲ್ಲಿ ಕೆಲಸ ಮಾಡುತ್ತಾರೆ.ಸಣ್ಣದೊಂದು ನಿದ್ದೆ ಮಾಡಿ ಸಂಜೆಗೆ ಹೀಗೆ ಸುತ್ತಾಟಕ್ಕೆ ಹೋಗುತ್ತಾರೆ.ಮರಳಿ ಬಂದು ರಾತ್ರಿ 8.30ಕ್ಕೆ ನಿದ್ದೆಗೆ ಜಾರುತ್ತಾರೆ . ಇದು ಅವರ ಫಿಟ್ನೆಸ್ ಗುಟ್ಟು ಎನ್ನುತ್ತಾರೆ ಶಾಸಕ ಹರೀಶ್ ಪೂಂಜಾ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications