ಮಂಗಳೂರು : ಬ್ಯಾಂಕ್ ಭದ್ರತಾ ಸಿಬ್ಬಂದಿ ಗುಂಡಿಗೆ ಬಲಿ
ಮಂಗಳೂರು, ಮಾ. 26 : ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಬ್ಯಾಂಕ್ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಮಡಿಕೇರಿ ಮೂಲದ ತಮ್ಮಯ್ಯ (55) ಎಂದು ಗುರುತಿಸಲಾಗಿದೆ. ತಮ್ಮಯ್ಯ ಕೊಡಿಯಾಲ್ ಬೈಲ್ನಲ್ಲಿರುವ ಕೊಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಗುರುವಾರ
ಮಧ್ಯಾಹ್ನ
ಬ್ಯಾಂಕ್ನ
ಮಹಡಿಯಿಂದ
ಇಳಿದುಬರುವಾಗ
ಅವರ
ಕೈಯಲ್ಲಿದ್ದ
ಡಬ್ಬಲ್
ಬ್ಯಾರಲ್
ಗನ್ನಿಂದ
ಆಕಸ್ಮಿಕವಾಗಿ
ಗುಂಡು
ಸಿಡಿದು
ತಮ್ಮಯ್ಯ
ಅವರ
ಕುತ್ತಿಗೆಗೆ
ಹೊಕ್ಕಿದೆ.
ತೀವ್ರ
ರಕ್ತಸ್ರಾವದಿಂದ
ಅವರು
ಸ್ಥಳದಲ್ಲಿಯೇ
ಸಾವನ್ನಪ್ಪಿದ್ದಾರೆ.
ಬಂದರು
ಪೊಲೀಸ್
ಠಾಣೆ
ವ್ಯಾಪ್ತಿಯಲ್ಲಿ
ಪ್ರಕರಣ
ದಾಖಲಾಗಿದೆ.
ಸ್ಥಳಕ್ಕೆ
ಡಿಸಿಪಿ
ವಿಷ್ಣುವರ್ಧನ್
ಭೇಟಿ
ನೀಡಿ
ಪರಿಶೀಲನೆ
ನಡೆಸುತ್ತಿದ್ದಾರೆ.
Comments
English summary
The security guard of a bank at Kodialbail, Mangaluru died after his gun misfired while on duty. The incident took place at Kotak Mahindra Bank on Thursday March 26, 2015. The deceased has been identified as Tammayya (55).
Story first published: Thursday, March 26, 2015, 15:18 [IST]