ನಮೋ ಬ್ರಿಗೇಡ್ ನರೇಶ್ ಶೆಣೈಗೆ ಮಂಪರು ಪರೀಕ್ಷೆ?
ಮಂಗಳೂರು, ಸೆಪ್ಟೆಂಬರ್ 6: ಮಾರ್ಚ್ 21ರಂದು ಕೊಡಿಯಾಲ್ ಬೈಲಿನ ತನ್ನ ನಿವಾಸದ ಮುಂಭಾಗ ಹತ್ಯೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಮೋ ಬ್ರಿಗೇಡ್ ಸಂಘಟನೆ ಪ್ರಮುಖ ನರೇಶ್ ಶೆಣೈನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಾಗಿದೆ.

ಆರೋಪಿ ಶೆಣೈನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 13ರಂದು ನಡೆಯಲಿದೆ. ಈ ನಡುವೆ ಬಾಳಿಗಾ ಹತ್ಯೆ ಪ್ರಕರಣದಲ್ಲಿ ಮಂಗಳೂರಿನ ಹಿರಿಯ ವಕೀಲೆ ಆಶಾ ನಾಯಕ್ ವಾದ ಮಾಡುತ್ತಿದ್ದಾರೆ. ಸಿಂಗಾಪುರದಿಂದ ಚಂದ್ರಶೇಖರ್ ಅವರೂ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.[ವಿನಾಯಕ್ ಬಾಳಿಗ ಕೊಲೆ ಆರೋಪಿ ನರೇಶ್ ಶೆಣೈ ಶರಣು]

ಈ ಮಧ್ಯೆ ಪ್ರಕರಣದ ಪೊಲೀಸ್ ಅಧಿಕಾರಿಗಳು ವಿನಾಯಕ ಬಾಳಿಗಾ ಪ್ರಕರಣದಲ್ಲಿ ಶಂಕೆ ಇರುವ ವ್ಯಕ್ತಿಗಳ ಬಗ್ಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಪೊಲೀಸ್ ಮೂಲಗಳು ಇದನ್ನು ಖಚಿತ ಪಡಿಸಿಲ್ಲ.












Click it and Unblock the Notifications