ಬೋರ್ ವೆಲ್ ನಲ್ಲಿ ಉಕ್ಕಿದ ಜಲ: ಪೂಜೆಯ ಪವಾಡ?
ಮಂಗಳೂರು, ಜೂನ್ 07: 600 ಅಡಿ ಕೊರೆದಿದ್ದರೂ ನೀರೇ ಕಾಣದಿದ್ದ ಕೊಳವೆ ಬಾವಿಗಳಲ್ಲಿ ಇದ್ದಕ್ಕಿದ್ದಂತೆ ನೀರು ಉಕ್ಕಿದ ಪವಾಡ ಪ್ರಸಂಗ ಮಂಗಳೂರು ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಕ್ರೈಸ್ತ ಕುಟುಂಬವೊಂದು, ಐದು ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗದೇ ಕಂಗಾಲಾಗಿ ತಮ್ಮ ಜಮೀನಿನಲ್ಲಿ ದೈವ ಪೂಜೆಯನ್ನು ಇತ್ತೀಚೆಗೆ ನೆರವೇರಿಸಿತ್ತು. ಇದೀಗ ಇದ್ದಕ್ಕಿದ್ದಂತೆ ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರು ಹೊರವಲಯದ ನಿಡ್ಡೋಡಿ ಗುಂಡೆಲ್ ಗ್ರಾಮದ ನಿವಾಸಿ ವಿಕ್ಟರ್ ಡಿಸಿಲ್ವ ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದಾರೆ. ತಮ್ಮ 7 ಎಕರೆ ಜಮೀನಿನಲ್ಲಿ ತೆಂಗು, ಭತ್ತ ಮತ್ತಿತರ ಬೆಳೆಗಳನ್ನು ಬೆಳೆದುಕೊಂಡಿದ್ದಾರೆ. ಬೆಳೆಗೆ ನೀರುಣಿಸಲು ಬಾವಿಯೊಂದನ್ನು ತೋಡಿದ್ದು, ಅದರಲ್ಲಿ ಬೇಕಾದಷ್ಟು ನೀರು ಸಿಗುತ್ತಿತ್ತು. ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ್ದರಿಂದ ಏಪ್ರಿಲ್ ತಿಂಗಳಿನಲ್ಲೇ ಬಾವಿಯಲ್ಲಿ ನೀರು ಬರಿದಾಗಿತ್ತು.
ಈ ಹಿನ್ನೆಲೆಯಲ್ಲಿ ತಮ್ಮ ಜಮೀನಿನಲ್ಲಿ ವಿಕ್ಟರ್ ಡಿಸಿಲ್ವ ಅವರು ಕೊಳವೆ ಬಾವಿಯನ್ನು ತೋಡಿಸಿದರು. ಸುಮಾರು 600 ಅಡಿ ಕೊರೆದರೂ ನೀರು ಸಿಗಲಿಲ್ಲ. ಇದರಿಂದ ಬೇಸತ್ತು ಮತ್ತೊಂದು ಕೊಳವೆ ಬಾವಿ ಕೊರೆಸಿದರು. ಅದೂ 700 ಅಡಿ ಅಳಕ್ಕೆ ಹೋದರೂ ಒಂದು ತೊಟ್ಟೂ ನೀರು ಬರಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ವಿಕ್ಟರ್ ಡಿಸಿಲ್ವ ಒಂದರ ನಂತರ ಒಂದರಂತೆ ಮತ್ತೆ ಎರಡು ಕೊಳವೆ ಬಾವಿಯನ್ನು ತೋಡಿದರು. ಆದರೂ ನೀರು ಸಿಗಲಿಲ್ಲ, ಒಟ್ಟು 4 ಬೋರ್ ವೆಲ್ ಗಳನ್ನು ತೋಡಿ ಸುಮಾರು 5 ಲಕ್ಷದಷ್ಟು ಖರ್ಚು ಮಾಡಿ ಮಾನಸಿಕವಾಗಿ ಕುಗ್ಗಿದ್ದರು.

ಕೃಷಿಯನ್ನೇ ನಂಬಿ ಬದುಕಿದ ಇವರು, ತಾವು ಕಷ್ಟಪಟ್ಟು ಬೆಳೆಸಿದ ತೋಟ ನೀರಿಲ್ಲದೆ ಒಣಗಿದ್ದನ್ನು ನೋಡಲಾಗದೆ ದಾರಿ ತೋಚದಂತಾದರು. ಹೀಗಿರುವಾಗ, ಬೋರ್ ವೆಲ್ ಬಾರಿ ಮಾಲೀಕ, ಬೆಳ್ತಂಗಡಿಯ ಜಗದೀಶ್ ಶಾಂತಿ ಎಂಬುವವರ ಮೊಬೈಲ್ ನಂಬರ್ ಕೊಟ್ಟು ಸಮಸ್ಯೆಗೆ ಪರಿಹಾರ ಹುಡುಕುವಂತೆ ಹೇಳಿದ್ದರು. ಅದರಂತೆ ಡಿಸಿಲ್ವ, ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.
ಡಿಸಿಲ್ವ ಅವರ ಜಮೀನಿನಲ್ಲಿ ನಾಗನ ದೋಷವಿದೆ ಎಂದು ಹೇಳಿ, ಪೂಜೆ ಮಾಡಿಸಲು ಅವರು ಸಲಹೆ ನೀಡಿದ್ದರು. ಧರ್ಮಸ್ಥಳ ಮತ್ತು ಸುಬ್ರಮಣ್ಯದಲ್ಲಿ ಪ್ರಾರ್ಥನೆ ಮಾಡುವುದರೊಂದಿಗೆ ಕಾರ್ಕಳ ಮಂಗಳೂರು ಮತ್ತು ತಮ್ಮ ಗ್ರಾಮದ ವ್ಯಾಪ್ತಿಯ ಚರ್ಚ್ ಗಳಲ್ಲಿ ಪೂಜೆ ಸಲ್ಲಿಸಿ ಎಂದೂ ಹೇಳಿದ್ದರು. ಡಿಸಿಲ್ವ ಪೂಜೆಯನ್ನೂ ಸಲ್ಲಿಸಿದ್ದರು, ನಂತರ, ಜಗದೀಶ್ ಅವರು ಹೇಳಿದಂತೆ, ಒಂದು ಸ್ಥಳವನ್ನು ಗುರುತಿಸಿ ಈ ಜಾಗದಲ್ಲಿ ಕೊಳವೆ ಬಾವಿ ಕೊರೆಯಲು ಆರಂಭಿಸಿದ್ದರು. 35 ಅಡಿ ಆಳದಲ್ಲೇ ನೀರು ಕಾಣಿಸಿಕೊಂಡು, 600 ಅಡಿ ಅಳಕ್ಕೆ ಹೋಗುತ್ತಿದ್ದಂತೆ ಬೇಕಾದಷ್ಟು ನೀರು ದೊರಕಿತ್ತು. ಈ ಹಿಂದೆ ತೋಡಿದ್ದ ಐದು ಕೊಳವೆ ಬಾವಿಗಳಲ್ಲೂ ನೀರು ಕಂಡಿತ್ತು.
ಹೀಗೆ ಒಮ್ಮಿಂದೊಂಮ್ಮೆಲೇ ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿರುವುದು ಸಂತೋಷದೊಂದಿಗೆ ಆಚ್ಚರಿಯನ್ನೂ ತಂದಿದೆ. ಕಾರಣ ಏನಿದ್ದರೂ, ಈ ಪವಾಡವನ್ನು ನೋಡಲು ಜನರೂ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ.
-
Bengaluru Weather: ಬೆಂಗಳೂರಲ್ಲಿ ಬೇಸಿಗೆ ಆರಂಭದಲ್ಲೇ 40 ಡಿಗ್ರಿಯತ್ತ ತಾಪಮಾನ: ಉರಿ ಬಿಸಿಲು, ಸೆಕೆಯಿಂದ ಹೈರಾಣಾದ ಜನ -
ಬೇಸಿಗೆಯ ಸಂಜೀವಿನಿ ಈ ನಿಂಬೆ ಹಣ್ಣು: ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳು ಅಪಾರ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications