ಅಪಘಾತದಲ್ಲಿ ಮಡಿದ ಜೀವನ್ ಫರ್ನಾಂಡೀಸ್ ಆತ್ಮ ಅಮರ
ಮಂಗಳೂರು, ಏ. 21: ಮಗ ಕಳೆದು ಹೋದ ಕಹಿನೆನಪು ಮುಖದಲ್ಲಿ ಮರೆಯಾಗಿಲ್ಲ. ಮಗನನ್ನು ಮಣ್ಣು ಮಾಡಿದ್ದೇವೆ. ಆದರೆ ಆತನ ದೇಹದ ವಿವಿಧ ಅಂಗಾಂಗಗಳು ಇನ್ನು ಮಿಡಿಯುತ್ತಿವೆ. ಅದೇ ನಮಗೆ ಸಮಾಧಾನ. ಎಲ್ಲರ ಪ್ರಾರ್ಥನೆಯಂತೆ ಆತನ ಆತ್ಮಕ್ಕೆ ಶಾಂತಿ ಸಿಗಲಿ...
ಇದು ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಜೀವನ್ ವಿಜಯ್ ಫರ್ನಾಂಡಿಸ್ ಹೆತ್ತವರ ಮನದಾಳದ ಮಾತು. ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೊಪ್ಪಲದಲ್ಲಿರುವ ವಿಜಯ್ ಮನೆಗೆ ಭೇಟಿ ನೀಡಿದ 'ಒನ್ ಇಂಡಿಯಾ' ಮುಂದೆ ಜೀವನ್ ಅವರ ತಂದೆ ಜೆರೋಂ ಫರ್ನಾಂಡಿಸ್, ತಾಯಿ ಗ್ರೇಸಿ ಫರ್ನಾಂಡಿಸ್ ಮಗನ ಅಗಲಿಕೆ ದುಃಖದ ನಡುವೆಯೂ ಸಮಾಧಾನದ ನಿಟ್ಟುಸಿರು ಅವರದ್ದು.[ಕುಡ್ಲದಲ್ಲಿ ಮಿಡಿದ ಜೀವಂತ ಹೃದಯ ಬೆಂಗಳೂರಿಗೆ]

ನಾವೇನು ದುಡ್ಡಿಗಾಗಿ ಮಗನ ಕಿಡ್ನಿ, ಲಿವರ್, ಹೃದಯವನ್ನು ದಾನ ಮಾಡಿಲ್ಲ. ಯಾರಿಗಾದರೂ ಜೀವದಾನವಾಗಲಿ. ಆಗ ಮಗನ ಆತ್ಮಕ್ಕೂ ಶಾಂತಿ ಸಿಗುತ್ತದೆ ಎಂದು ದಾನ ಮಾಡಿದ್ದೇವೆ. ದಾನ ಪಡೆದವರು ಯಾರು? ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ದೇಹದ ಅಂಗಾಂಗಗಳ ಜೋಡಣೆ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದು ತೃಪ್ತಿಗೊಂಡೆವು ಎನ್ನುವಾಗ ಅವರು ಗದ್ಗದಿತರಾದರು.
ಮಂಗಳೂರಿನ ಅಡ್ಯಾರ್ ಬಳಿ ಏ. 9ರಂದು ನಡೆದ ಬೈಕ್ ಅಪಘಾತದಲ್ಲಿ ಜೀವನ್ ವಿಜಯ್ ಫರ್ನಾಂಡಿಸ್ ಗಂಭೀರ ಗಾಯಗೊಂಡಿದ್ದರು. ಅವರ ಮಿದುಳು ನಿಷ್ಕ್ರಿಯವಾಗಿತ್ತು. ಜೀವನ್ ಬದುಕುಳಿಯುವುದು ಅಸಾಧ್ಯ ಎಂದು ಖಾತರಿಯಾದ ಬಳಿಕ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿತ್ತು.[ಬೆಂಗಳೂರಿನ ಹೃದಯಕ್ಕೆ ಹೈದರಾಬಾದ್ ನಲ್ಲಿ ಹೊಸ ಜೀವ]
ಮಧ್ಯಮ ವರ್ಗಕ್ಕೆ ಸೇರಿದ ಈ ಕುಟುಂಬ ಕೃಷಿ ಚಟುವಟಿಕೆಯನ್ನು ಆಧರಿಸಿಕೊಂಡು ಜೀವನ ಸಾಗುತ್ತಿದೆ. ಜೀವನ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಗಳು, ಇನ್ನೊಬ್ಬ ಮಗಳು ಮತ್ತು ಮಗ ಇದ್ದಾರೆ.
ಮೇ 4ರಂದು ಜೀವನ್ ನ ಸಹೋದರಿಯೊಬ್ಬರಿಗೆ ಮದುವೆ ನಿಶ್ಚಯ ಮಾಡಲಾಗಿದೆ. ಆದೆರ ದಿಢೀರ್ ಎಂದು ಬಂದೆರಗಿದ ಮನೆ ಮಗನ ಸಾವು ನೋವಿನ ಕೂಪದಲ್ಲಿ ದೂಡಿದೆ.

ಜೀವನ್ ನ ಕೊನೆಯ ಕ್ಷಣಗಳನ್ನು ಬಿಚ್ಚಿಡುವ ತಾಯಿಯ ಮಾತುಗಳು ಎಂಥವರ ಕರುಳನ್ನು ಹಿಂಡುತ್ತದೆ. ಏ.9ರಂದು ಸಂಜೆ ಹೊತ್ತು ಮನೆಗೆ ಬಂದವನು, ಊಟ ಬಡಿಸಲು ಹೇಳಿದ್ದ. ನಾನು ಅನ್ನಕ್ಕೆ ಬಸಳೆ ಸಾರು ಹಾಕಿ ಬಡಿಸಿದೆ. ಅದನ್ನು ನೋಡಿ ಅಮ್ಮ ಏಕೆ ಇಂದು ಮೀನು ಸಾರು ಮಾಡಿಲ್ಲ ಎಂದು ಕೇಳಿದ. ನಾನಿವತ್ತು ತುಂಬಾ ಕೆಲಸದಲ್ಲಿದ್ದೆ. ನಾಳೆ ಮೀನು ಸಾರು ಮಾಡುತ್ತೇನೆಂದೆ. ಊಟ ಮಾಡಿದ ತಕ್ಷಣ ಬಟ್ಟೆ ಬದಲಿಸಿ ಹೊರಟು ನಿಂತ. ಈ ರಾತ್ರಿ ಹೊತ್ತು ಎಲ್ಲಿಗೆ ಎಂದು ತಡೆದೆ. ಸ್ನೇಹಿತನ ಮನೆಯಲ್ಲಿ ಮದುವೆಯಿದೆ. ನಾನೀಗ ಅಲ್ಲಿಗೆ ಹೋಗದೇ ಇದ್ದರೆ ಅವರು ನಮ್ಮ ಮದುವೆಗೆ ಬರುವುದಿಲ್ಲ ಎಂದು ಹಠ ಮಾಡಿದ. ನನ್ನ ಪ್ರತ್ಯುತ್ತರಕ್ಕೆ ಕಾಯದೇ ಹೊರಟೇ ಹೋದವ ವಾಪಸ್ ಬರಲೇ ಇಲ್ಲ ಎಂದು ಹೇಳುವಾಗ ತಾಯಿ ಗ್ರೇಸಿಯ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಜೀವನ್ ಸಹೋದರಿಯ ಬಯಕೆಯಂತೆ ನಾವು ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದೆವು. ಇದು ನಮ್ಮ ಮಗನ ನೆನಪನ್ನು ಗಟ್ಟಿಕಗೊಳಿಸುತ್ತದೆ ಎಂದು ಹೇಳುತ್ತಾರೆ.
ಜೀವನ್ ಶಾಲಾ ದಿನಗಳಿಂದನೂ ನಮ್ಮ ಕಣ್ಣು ತಪ್ಪಿಸಿ ಬೈಕ್ ಓಡಿಸುತ್ತಾ ಇದ್ದ. ಯಾರಾದರೂ ಬೈಕ್ ಕೊಟ್ಟರೆ ಸಾಕು, ಊಟವೂ ಬೇಡ, ಏನೂ ಬೇಡ. ಒಮ್ಮೆ ಹೀಗೆ ಹಠ ಮಾಡಿ ಮನಸ್ತಾಪನೂ ಮಾಡಿಕೊಂಡಿದ್ದ. ಆದರೆ ಈಗ ಅದೇ ಬೈಕ್ ಹುಚ್ಚು ಆತನ ಜೀವ ಮತ್ತು ಜೀವನವನ್ನೇ ಬಲಿ ಪಡೆದುಕೊಂಡಿತು ಎಂದು ಹೇಳುವ ತಾಯಿ ಗ್ರೇಸಿ ಬೈಕ್ ಇರುವುದು ಸಂಚಾರಕ್ಕೆ ಹೊರತು ಸರ್ಕಸ್ ಗೆ ಅಲ್ಲ ಎಂದು ಹೇಳಲು ಮರೆಯುವುದಿಲ್ಲ.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications