ಬಿರು ಬೇಸಿಗೆಯಲ್ಲೂ ಪಿಲಿಕುಳದಲ್ಲಿ ಪ್ರಾಣಿಗಳು ಕೂಲ್.. ಕೂಲ್..!
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳು ಬಿಸಿಲ ಧಗೆಗೆ ಬಳಲಿ ಬೆಂಡಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಪಾರ್ಕ್ ನ ಒಳಗಡೆ ಸ್ಪಿಂಕ್ಲರ್, ಫ್ಯಾನ್ ಗಳನ್ನ ಪ್ರಾಣಿಗಳಿಗಾಗಿ ಅಳವಡಿಸಲಾಗಿದೆ.
ಮಂಗಳೂರು, ಎಪ್ರಿಲ್ 5: ಮಂಗಳೂರಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಿದೆ. ಮನುಷ್ಯರೇ ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನ ಮೂಡುಶೆಡ್ಡೆಯಲ್ಲಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ ಪಕ್ಷಿಗಳು ಮಾತ್ರ ಕೂಲ್ ಕೂಲ್ ಆಗಿವೆ.
ಇಲ್ಲಿರುವ ಪ್ರಾಣಿ - ಪಕ್ಷಿಗಳು ಬಿಸಿಲ ಧಗೆಗೆ ಬಳಲಿ ಬೆಂಡಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಪಾರ್ಕ್ ನ ಒಳಗಡೆ ಸ್ಪಿಂಕ್ಲರ್, ಫ್ಯಾನ್ ಗಳನ್ನ ಅಳವಡಿಸಲಾಗಿದೆ. ಜೊತೆಗೆ ಕರ್ಬುಜಾ ಹಣ್ಣುಗಳನ್ನ ಇಡಲಾಗಿದೆ. ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲಿ ಛಾವಣಿಗಳನ್ನು, ಲೈಮ್ ಕೋಟ್ ಗಳನ್ನು ಸಹ ಅಳವಡಿಸಲಾಗಿದೆ. ಇದು ಇಲ್ಲಿರುವ ಪ್ರಾಣಿ - ಪಕ್ಷಿಗಳಿಗೆ ಮತ್ತಷ್ಟು ಆರಾಮ ನೀಡಿದೆ.[ಮರಳು ದಂಧೆ, ದ. ಕ. ಜಿಲ್ಲಾಧಿಕಾರಿ ಜಗದೀಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು]

ಪಿಲಿಕುಳದಲ್ಲಿ 120 ಪ್ರಭೇದದ ಪಕ್ಷಿಗಳಿವೆ. 1070 ಪ್ರಾಣಿಗಳಿವೆ. ಪಕ್ಷಿಗಳ ಜೊತೆಗೆ ಸಸ್ತನಿಗಳು, ಸರೀಸೃಪಗಳು ಇವೆ. ಇನ್ನು ಅಳಿವಿನಂಚಿನಲ್ಲಿರುವ 38 ಜಾತಿಗಳ ಪ್ರಾಣಿಗಳು ಇಲ್ಲಿವೆ. ಈ ಎಲ್ಲಾ ಪ್ರಾಣಿ - ಪಕ್ಷಿಗಳನ್ನ ಆರೈಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.

"ಮಂಗಳೂರಿನಲ್ಲಿ ಇತ್ತೀಚಿಗೆ ಬಿಸಿಲ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಝೂನಲ್ಲಿ ಪ್ರಾಣಿಗಳನ್ನು ಕೂಲ್ ಕೂಲ್ ಆಗಿಡುವ ವ್ಯವಸ್ಥೆ ಮಾಡಲಾಗಿದೆ. ಹುಲಿ, ಸಿಂಹ ಇಂತಹ ಪ್ರಾಣಿಗಳ ದೇಹವನ್ನ ತಂಪಾಗಿರಿಸಲು ಸ್ಪಿಂಕ್ಲರ್ ಮೂಲಕ ದಿನಕ್ಕೆ ನಾಲ್ಕೈದು ಬಾರಿ ನೀರು ಬಿಡಲಾಗುತ್ತದೆ. ಜೊತೆಗೆ ವಿಟಮಿನ್ ಯುಕ್ತ ಆಹಾರಗಳನ್ನ ಸಹ ನೀಡಲಾಗುತ್ತದೆ. ಇನ್ನು ಕೋತಿ, ಕರಡಿಗಳಂತಹ ಪ್ರಾಣಿಗಳಿಗೆ ಕರ್ಬೂಜ ಹಣ್ಣನ್ನ ನೀಡಲಾಗುತ್ತಿದೆ," ಎನ್ನುತ್ತಾರೆ ಪಾರ್ಕ್ ನ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ.[ಮಂಗಳೂರು: ಮೇಯರ್ ಮೇಡಂ, ಜಾಹೀರಾತು ಫಲಕ ತೆರವುಗೊಳಿಸುವುದು ಯಾವಾಗ?]

ಈ ಮೊದಲು ಗುರುಪುರ ನದಿಯಿಂದ ನೀರನ್ನ ಪಿಲಿಕುಳಕ್ಕೆ ಬಿಡಲಾಗುತ್ತಿತ್ತು. ಆದರೆ ಈಗ ಝೂ ನಲ್ಲಿ ಎರಡು ಬೋರ್ ವೆಲ್ ಗಳನ್ನ ಕೊರೆಯಲಾಗಿದೆ. ಹೀಗಾಗಿ ಇಲ್ಲೀಗ ನೀರಿನ ಕೊರತೆ ಇಲ್ಲ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications