ಬಿರು ಬೇಸಿಗೆಯಲ್ಲೂ ಪಿಲಿಕುಳದಲ್ಲಿ ಪ್ರಾಣಿಗಳು ಕೂಲ್.. ಕೂಲ್..!
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳು ಬಿಸಿಲ ಧಗೆಗೆ ಬಳಲಿ ಬೆಂಡಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಪಾರ್ಕ್ ನ ಒಳಗಡೆ ಸ್ಪಿಂಕ್ಲರ್, ಫ್ಯಾನ್ ಗಳನ್ನ ಪ್ರಾಣಿಗಳಿಗಾಗಿ ಅಳವಡಿಸಲಾಗಿದೆ.
ಮಂಗಳೂರು, ಎಪ್ರಿಲ್ 5: ಮಂಗಳೂರಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಿದೆ. ಮನುಷ್ಯರೇ ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನ ಮೂಡುಶೆಡ್ಡೆಯಲ್ಲಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ ಪಕ್ಷಿಗಳು ಮಾತ್ರ ಕೂಲ್ ಕೂಲ್ ಆಗಿವೆ.
ಇಲ್ಲಿರುವ ಪ್ರಾಣಿ - ಪಕ್ಷಿಗಳು ಬಿಸಿಲ ಧಗೆಗೆ ಬಳಲಿ ಬೆಂಡಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಪಾರ್ಕ್ ನ ಒಳಗಡೆ ಸ್ಪಿಂಕ್ಲರ್, ಫ್ಯಾನ್ ಗಳನ್ನ ಅಳವಡಿಸಲಾಗಿದೆ. ಜೊತೆಗೆ ಕರ್ಬುಜಾ ಹಣ್ಣುಗಳನ್ನ ಇಡಲಾಗಿದೆ. ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲಿ ಛಾವಣಿಗಳನ್ನು, ಲೈಮ್ ಕೋಟ್ ಗಳನ್ನು ಸಹ ಅಳವಡಿಸಲಾಗಿದೆ. ಇದು ಇಲ್ಲಿರುವ ಪ್ರಾಣಿ - ಪಕ್ಷಿಗಳಿಗೆ ಮತ್ತಷ್ಟು ಆರಾಮ ನೀಡಿದೆ.[ಮರಳು ದಂಧೆ, ದ. ಕ. ಜಿಲ್ಲಾಧಿಕಾರಿ ಜಗದೀಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು]

ಪಿಲಿಕುಳದಲ್ಲಿ 120 ಪ್ರಭೇದದ ಪಕ್ಷಿಗಳಿವೆ. 1070 ಪ್ರಾಣಿಗಳಿವೆ. ಪಕ್ಷಿಗಳ ಜೊತೆಗೆ ಸಸ್ತನಿಗಳು, ಸರೀಸೃಪಗಳು ಇವೆ. ಇನ್ನು ಅಳಿವಿನಂಚಿನಲ್ಲಿರುವ 38 ಜಾತಿಗಳ ಪ್ರಾಣಿಗಳು ಇಲ್ಲಿವೆ. ಈ ಎಲ್ಲಾ ಪ್ರಾಣಿ - ಪಕ್ಷಿಗಳನ್ನ ಆರೈಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.

"ಮಂಗಳೂರಿನಲ್ಲಿ ಇತ್ತೀಚಿಗೆ ಬಿಸಿಲ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಝೂನಲ್ಲಿ ಪ್ರಾಣಿಗಳನ್ನು ಕೂಲ್ ಕೂಲ್ ಆಗಿಡುವ ವ್ಯವಸ್ಥೆ ಮಾಡಲಾಗಿದೆ. ಹುಲಿ, ಸಿಂಹ ಇಂತಹ ಪ್ರಾಣಿಗಳ ದೇಹವನ್ನ ತಂಪಾಗಿರಿಸಲು ಸ್ಪಿಂಕ್ಲರ್ ಮೂಲಕ ದಿನಕ್ಕೆ ನಾಲ್ಕೈದು ಬಾರಿ ನೀರು ಬಿಡಲಾಗುತ್ತದೆ. ಜೊತೆಗೆ ವಿಟಮಿನ್ ಯುಕ್ತ ಆಹಾರಗಳನ್ನ ಸಹ ನೀಡಲಾಗುತ್ತದೆ. ಇನ್ನು ಕೋತಿ, ಕರಡಿಗಳಂತಹ ಪ್ರಾಣಿಗಳಿಗೆ ಕರ್ಬೂಜ ಹಣ್ಣನ್ನ ನೀಡಲಾಗುತ್ತಿದೆ," ಎನ್ನುತ್ತಾರೆ ಪಾರ್ಕ್ ನ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ.[ಮಂಗಳೂರು: ಮೇಯರ್ ಮೇಡಂ, ಜಾಹೀರಾತು ಫಲಕ ತೆರವುಗೊಳಿಸುವುದು ಯಾವಾಗ?]

ಈ ಮೊದಲು ಗುರುಪುರ ನದಿಯಿಂದ ನೀರನ್ನ ಪಿಲಿಕುಳಕ್ಕೆ ಬಿಡಲಾಗುತ್ತಿತ್ತು. ಆದರೆ ಈಗ ಝೂ ನಲ್ಲಿ ಎರಡು ಬೋರ್ ವೆಲ್ ಗಳನ್ನ ಕೊರೆಯಲಾಗಿದೆ. ಹೀಗಾಗಿ ಇಲ್ಲೀಗ ನೀರಿನ ಕೊರತೆ ಇಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications