ಫ್ರಾನ್ಸ್ ನಲ್ಲಿ ಹಾರಾಡಿತು ಮಂಗಳೂರಿನ ಗಾಳಿಪಟ
ಮಂಗಳೂರು, ಸೆಪ್ಟೆಂಬರ್ 25: ಫ್ರಾನ್ಸ್ನ ಡೀಪಿ ನಗರದಲ್ಲಿ ಆಯೋಜನೆಗೊಂಡ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರು ತಂಡ ಭಾಗವಹಿಸಿ, ಮೆಚ್ಚುಗೆಗೆ ಪಾತ್ರವಾಗಿದೆ.
ದಂಪತಿ ಮತ್ತು ಆದಿವಾಸಿ ಗಾಳಿಪಟದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಡೀಪಿ ಉತ್ಸವದಲ್ಲಿ ಪ್ರತಿನಿಧಿಸಿತ್ತು. ಆ ಮೂಲಕ ಈ ಬಾರಿ ಭಾರತೀಯ ಬುಡಕಟ್ಟು ಜನಾಂಗದ ಬದುಕನ್ನು ಚಿತ್ರ ಕಲೆಯ ಮೂಲಕ ಪ್ರತಿಬಿಂಬಿಸಿದೆ.[ಮ್ಯಾನ್ ಹಂಟ್ ಇಂಟರ್ ನ್ಯಾಷನಲ್ ನಲ್ಲಿ ಕುಡ್ಲದ ಯುವಕ ರನ್ನರ್ ಅಪ್]

ಭಾರತೀಯ ಬುಡಕಟ್ಟು ಜನಾಂಗದ ಕಲೆಯ ಬಗ್ಗೆ 36 ಅಡಿ ಉದ್ದದ ಕಲಾಕೃತಿಯನ್ನು ದಿನೇಶ್ ಹೊಳ್ಳ ಸ್ಥಳದಲ್ಲಿಯೇ ರಚಿಸಿದ್ದಾರೆ. ಅಲ್ಲದೆ 'ರಾಗ ರೇಖಾ' ಎಂಬ ಕಲಾಪ್ರದರ್ಶನದಲ್ಲಿ 36 ಕೃತಿಗಳನ್ನು ಪ್ರದರ್ಶಿಸಲಾಗಿದೆ. ಪಶ್ಚಿಮ ಘಟ್ಟ ಸಂರಕ್ಷಣೆಯ ಬಗ್ಗೆ ಸಹಿ ಅಭಿಯಾನ ಮಾಡಿ, 28 ರಾಷ್ಟ್ರಗಳ ಸಹಿ ಸಂಗ್ರಹಿಸಿ ಡೀಪಿ ಪಟ್ಟಣದ ಮೇಯರ್ ಸೆಬಾಸ್ಟಿಯನ್ ಜುಮೆಲ್ ಮೂಲಕ ಯುನೆಸ್ಕೋಗೆ ಕಳುಹಿಸಲಾಗಿದೆ.[ಎತ್ತಿನಹೊಳೆ: ಪಶ್ಚಿಮ ಘಟ್ಟದ ರಕ್ಷಣೆಗಾಗಿ ಯುನೆಸ್ಕೋಗೆ ಆಗ್ರಹ]

ಉತ್ಸವದ ಪೋಸ್ಟರ್ ಅನ್ನು ಕಲಾವಿದ ದಿನೇಶ್ ಹೊಳ್ಳ ರಚಿಸಿದ್ದು, ಪ್ರೇಕ್ಷಕರು ಹೊಳ್ಳರ ಸಹಿ ಹಾಕಿದ ಪೋಸ್ಟರನ್ನೂ ಪಡೆದು ಸಂಭ್ರಮಿಸಿದರು. ಪೋಸ್ಟರ್ ರಚನೆ ಮತ್ತು 36 ಅಡಿ ಉದ್ದದ ಕಲಾಕೃತಿ ರಚನೆಗೆ ಮೆಚ್ಚುಗೆ ವ್ಯಕ್ತಪಡಿಸಿ , 'ಡೀಪಿ ಕ್ಯಾಪಿಟಲ್ ಆಫ್ ಕೈಟ್ಸ್' ಸಂಘಟಕ ಸ್ಯಾಂಡ್ರಿನ್ ಸಫರ್ಗ್ ಅವರು ದಿನೇಶ್ ಹೊಳ್ಳ ಅವರನ್ನು ವಿಶೇಷವಾಗಿ ಅಭಿನಂದಿಸಿ 'ಕಲಾ ಮಾನ್ಯತಾ' ಪ್ರಶಸ್ತಿ ನೀಡಿದ್ದಾರೆ ಎಂದು ಟೀಂ ಮಂಗಳೂರು ಪ್ರಕಟಣೆ ತಿಳಿಸಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications