ಪಶ್ಚಿಮಘಟ್ಟ ಸಾಲಿನಲ್ಲಿ ಹೆಚ್ಚಿದೆ ಭೂಕುಸಿತ; ಮೊದಲಿನಂತಾಗುವುದೆ ಬಾಳು?
ಮಂಗಳೂರು ಆಗಸ್ಟ್ 19: ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಈ ಬಾರಿ ಸುರಿದ ಮಳೆಗೆ ಭಾರೀ ಅನಾಹುತಗಳೇ ಸಂಭವಿಸಿವೆ. ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಇತರ ಭಾಗಗಳಲ್ಲಿ ಪ್ರವಾಹ ಪ್ರರಿಸ್ಥಿತಿ ಸೃಷ್ಟಿಯಾದರೆ, ಇನ್ನೊಂದೆಡೆ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ, ಕುಮಾರಧಾರಾ ನದಿ ಉಕ್ಕಿಹರಿದಿವೆ. ಗುಡ್ಡಗಳೇ ಕುಸಿದು ಜನವಸತಿ ಪ್ರದೇಶಗಳೂ ನಾಶವಾಗಿವೆ. ಯಾರೂ ಊಹಿಸದಂತೆ ಪ್ರಕೃತಿ ತನ್ನ ಪ್ರಕೋಪ ತೋರಿದೆ.
ಈ ಬಾರಿ ಮಳೆಗೆ ಪಶ್ಚಿಮ ಘಟ್ಟ ಸಾಲಿನ ಸುಮಾರು 9 ಬೆಟ್ಟಗಳಲ್ಲಿ ಬೃಹತ್ ಕುಸಿತ ಕಂಡುಬಂದಿದೆ. ಬೆಟ್ಟದ ತಪ್ಪಲು ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕುತಿದ್ದವರು ಪ್ರಕೃತಿಯ ರುದ್ರ ನರ್ತನ ಕಂಡು ನಲುಗಿಹೋಗಿದ್ದಾರೆ. ಜೀವ ಉಳಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಬಂದವರು ಈಗ ಮೂಲಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರದೇಶದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಟ್ಟ, ಎಳನೀರು, ಬಂಗ್ರಪಲ್ಕೆ, ಗಾಳಿಗಂಡಿ ಬೆಟ್ಟ, ಇರೆಬೈಲು ಬೆಟ್ಟ, ಮೈದಾಡಿ ಬೆಟ್ಟ, ಬಳ್ಳಾಲರಾಯನ ದುರ್ಗ, ಅಗಲ್ದಬೆಟ್ಟ, ಬಣ್ಣಕಲ್ಲು ಬೆಟ್ಟ, ಕಡ್ತಿಕಲ್ಲು ಬೆಟ್ಟದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ.

ನೇತ್ರಾವತಿಯ ಉಪನದಿಗಳ ಪಥವೂ ಬದಲಾಗಿದೆ. ಹಲವೆಡೆ ಹೊಸ ಜಲಪಾತ, ನದಿಮೂಲಗಳ ಉಗಮವಾಗಿದೆ. ಪರಿಸರ ತಜ್ಞರ ಪ್ರಕಾರ ಪಶ್ಚಿಮಘಟ್ಟದ 9 ಬೆಟ್ಟಗಳಲ್ಲಿ 456 ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಂಡೆ ಸಹಿತ ಮಣ್ಣು ಕುಸಿತವಾಗಿದ್ದು, ಬೆಟ್ಟ ಪ್ರದೇಶಲ್ಲಿ ಬರೆ ಎಳೆದಂತೆ ಕಾಣುತ್ತಿದೆ.

ಜಲ ಸ್ಫೋಟಗೊಂಡು ಗುಡ್ಡ ಕುಸಿತವಾಗಿದ್ದಷ್ಟೇ ಅಲ್ಲ, ಬೆಟ್ಟದ ಮೇಲಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುವ ನೀರು, ಮಣ್ಣಿನ ರಭಸಕ್ಕೆ ಬೃಹತ್ ಮರಗಳು ತರಗೆಲೆಗಳಂತೆ ಬುಡಸಮೇತ ಕೆಳಗೆ ಜಾರಿ ಬಂದಿವೆ. ಇದರಿಂದ ನೇತ್ರಾವತಿಯ ಪ್ರಮುಖ ನದಿಮೂಲಗಳಾದ ಮೃತ್ಯುಂಜಯ, ಅಣಿಯೂರುಹಳ್ಳ, ಸುನಾಳಹೊಳೆ, ನೆರಿಯಹೊಳೆ, ಎಳನೀರು ಹೊಳೆ ಪಾತ್ರಗಳೇ ಬದಲಾಗಿವೆ.
ಗುಡ್ಡಕಂಪನಕ್ಕೆ ಕೆಲವು ನೀರಿನ ಒರತೆಗಳು ಮುಚ್ಚಿ, ಬೇರೊಂದು ಪ್ರದೇಶದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದು ಕಂಡುಬಂದಿದೆ. ನಂದಿ ಬೆಟ್ಟ, ಪಾತಾಲಿಕೆ ಅರಣ್ಯ ವ್ಯಾಪ್ತಿಯಲ್ಲಿ ಹೊಸ ಹೊಳೆಯೇ ಸೃಷ್ಟಿಯಾಗಿದೆ.
ಪಶ್ವಿಮಘಟ್ಟದ ಪ್ರಮುಖ ಬೆಟ್ಟಗಳಲ್ಲಿ ಬೃಹತ್ ಪ್ರಮಾಣದ ಕುಸಿತ ಸಂಭವಿಸಿದ್ದರಿಂದ ಈ ಪ್ರದೇಶದ ಕೆಲವು ವಸತಿ ಪ್ರದೇಶಗಳ ಮರು ನಿರ್ಮಾಣ ಕಷ್ಟಸಾಧ್ಯ ಎಂದು ಹೇಳಲಾಗಿದೆ. ಚಾರ್ಮಾಡಿ ಘಾಟಿ ಪ್ರದೇಶದ ಬಿದಿರುತಳ, ಅಲೆಖಾನ್, ಹೊರಟ್ಟಿ, ಮಲೆಮನೆ, ಬಾವಳೆ, ಬಾಲೂರು, ಮೇಗೂರಿನ 1 ಸಾವಿರ ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಮಣ್ಣು ತುಂಬಿಕೊಂಡಿದ್ದು, ಮನೆಗಳು ಹೂತುಹೋಗಿವೆ. ಈ ಪ್ರದೇಶದ ನಿವಾಸಿಗಳ ಪ್ರಕಾರ ಕುಸಿತಗೊಂಡ ಜನವಸತಿ ಪ್ರದೇಶ ಮರು ನಿರ್ಮಾಣ ಅಸಾಧ್ಯವೆನಿಸಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications