ಜಿದ್ದಾ - ಕರ್ನಾಟಕ ಕಲ್ಚರಲ್ ಫೌಂಡೇಶನಿನಿಂದ ಅಪಘಾತಕ್ಕೀಡಾದ ವ್ಯಕ್ತಿಗೆ ನೆರವು
ಜಿದ್ದಾ, ಆಗಸ್ಟ್ 16: ಫಕ್ರುದ್ದೀನ್ ಅಬ್ದುಲ್ಲಾ ಮಂಬಾಡಿಯವರು ಕೆಲವು ದಿನಗಳ ಹಿಂದೆ ರಸ್ತೆ ಅಫಘಾತಕ್ಕೀಡಾಗಿದ್ದು ಇವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ 50,000ರೂ. ದಾನ ನೀಡಲಾಯಿತ್ತು. ಇವರು ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ಮಕ್ಕತುಲ್-ಮುಕರ್ರಂ ಸೆಕ್ಟರ್ ಸದಸ್ಯರಾಗಿದ್ದಾರೆ.
ಕೆ.ಸಿ.ಎಫ್ ಅನಿವಾಸಿ ಕನ್ನಡಿಗ ಸದಸ್ಯರಿಗಾಗಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಮೆಂಬರ್ಸ್ ರಿಲೀಫ್ ಫಂಡ್(ಎಂಆರ್'ಎಫ್) ರಚಿಸಲಾಗಿದೆ. ಇದರ ವತಿಯಿಂದ ಜಿದ್ದಾ ಝೋನಲ್ ನೇತಾರರು ಫಕ್ರುದ್ದೀನ್ ಅಬ್ದುಲ್ಲಾರವರಿಗೆ ಜಿದ್ದಾದಲ್ಲಿ ಎಂ .ಆರ್. ಎಫ್ ಫಂಡ್ ನಿಂದ 50,000 ರೂಪಾಯಿಯನ್ನು ನೀಡಿದರು.
ಇದಕ್ಕೂ ಮುಂಚೆ ಜಿದ್ದಾ ಝೋನಲ್ ಅಧ್ಯಕ್ಷರ ನೇತ್ರತ್ವದಲ್ಲಿ ಕೆಲವು ಕಾರ್ಯಕರ್ತರು ಅವರನ್ನು ಭೇಟಿಯಾಗಿದ್ದಲ್ಲದೆ, ಪ್ರಾಥಮಿಕ ಹಂತವಾಗಿ ಒಂದು ಸಾವಿರ ರಿಯಾಲ್ ನೀಡಿ ಅವರಿಗೆ ಸಾಂತ್ವನ ಹೇಳಿದ್ದಾರೆ.
ಫಕ್ರುದ್ದೀನ್ ಅಬ್ದುಲ್ಲಾ ಊರಿಗೆ ಹೋಗಲು ಉದ್ದೇಶಿಸಿದ್ದು ಕಂಪನಿಯಿಂದ ಅದಕ್ಕೆ ಅನುಮತಿ ಸಿಗಲು ಕೆಲವು ವಿಳಂಬಗಳು ಸಂಭವಿಸುತ್ತಿತ್ತು. ಈ ವಿಷಯ ತಿಳಿದು ಕೆಸಿಎಫ್ ಕಾರ್ಯಕರ್ತರು ಈ ವಿಷಯದಲ್ಲಿ ಕಂಪನಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಊರಿಗೆ ಹೋಗಲು ಕಂಪನಿಯಿಂದ ಸಮ್ಮತಿ ದೊರಕುವಂತೆ ಮಾಡಿದ್ದಾರೆ.