ಕಂಬಳ ಉಳಿಸಲು ಮಂಗಳೂರಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಾರ!

ಮಂಗಳೂರು, ಜನವರಿ 22 : ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಸಲು ಸಿದ್ದತೆ ನಡೆಯುತ್ತಿದ್ದಂತೆ ಇತ್ತ ಕರಾವಳಿ ಜಿಲ್ಲೆಯ ಕಂಬಳ ಸಮಿತಿಗಳು ಕಂಬಳ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿ ಬೃಹತ್ ಹೋರಾಟ ಮಾಡಲು ಸಜ್ಜಾಗಿವೆ.

ಈ ಕುರಿತು ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ 'ಮುಂದಿನ ಬುಧವಾರ ಅಥವಾ ಗುರುವಾರದೊಳಗಾಗಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿ ದೇಶದ ಹಾಗೂ ರಾಜಕಾರಣಿಗಳ ಗಮನ ಸೆಳೆಯಲಾಗುವುದು.[ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?]

ಉಡುಪಿ ಹಾಗೂ ಮಂಗಳೂರಿನ ಕಂಬಳ ಅಭಿಮಾನಿಗಳ ಸಹಿತ 15ರಿಂದ 200 ಜತೆ ಕಂಬಳದ ಕೋಣಗಳೂ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ ಎಂದರು.

Kambala Committee planned stir in Mangaluru against ban on the traditional sport

ಜಲ್ಲಿಕಟ್ಟು ನಡೆಸಲು ಅನುಮತಿ ದೊರೆತಿರುವಾಗ ಕಂಬಳಕ್ಕೂ ಅನುಮತಿ ದೊರೆಯಬೇಕು. ಇಲ್ಲಿ ಹಿಂಸೆಗೆ ಆಸ್ಪದವಿಲ್ಲ. ಈ ಕ್ರೀಡೆ ನಮ್ಮ ಸಂಸ್ಕ್ರತಿಯ ಒಂದು ಭಾಗ' ಎಂದು ಅವರು ಹೇಳಿದರು.[ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?]

ಜಲ್ಲಿಕಟ್ಟು ಸಂಬಂಧ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ ಸಲ್ಲಿಸಿದ ಅಪೀಲ್ ಅನ್ವಯ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠವೊಂದು ತನ್ನ ಮಧ್ಯಂತರ ಆದೇಶವೊಂದರಲ್ಲಿ ಕಂಬಳಕ್ಕೆ ತಡೆ ಹೇರಿತ್ತು.

ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕಂಬಳ ಸಮಿತಿಗಳು ಮಧ್ಯಂತರ ಅಪೀಲು ಸಲ್ಲಿಸಿದ್ದರೂ ಹೈಕೋರ್ಟಿನ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.

ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಂಬಳ ಸಮಿತಿಯ ಸದಸ್ಯರೊಬ್ಬರು ನಮಗೆ ಕಾನೂನು ಹೋರಾಟದಲ್ಲಿ ಜಯ ಸಿಗುವ ಭರವಸೆ ಇದೆ. ಕಂಬಳ ಹಾಗೂ ಜಲ್ಲಿಕಟ್ಟು ನಡುವೆ ಬಹಳಷ್ಟು ವ್ಯತ್ಯಾಸವಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+