ಬಂಟ್ವಾಳ : ತಂದೆಯನ್ನೇ ಗುಂಡಿಕ್ಕಿ ಕೊಂದ ಮಗ
ಮಂಗಳೂರು, ಜನವರಿ. 14 : ಬಂಟ್ವಾಳದ ನೆಕ್ಕರೆಕಾಡು ಎಂಬಲ್ಲಿ ಶೂಟೌಟ್ ನಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನೆಡದಿದೆ.
ಮೃತ ವ್ಯಕ್ತಿಯನ್ನು ಬಂಟ್ವಾಳ ಸಮೀಪದ ಬ.ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಇಂದ್ರೇಶ್ (55) ಎಂದು ಗುರುತಿಸಲಾಗಿದೆ. ಮೃತನ ಮಗ ಚಂದ್ರಹಾಸನಿಂದಲೇ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ತಂದೆ ಮಗನ ನಡುವೆ ಪ್ರತಿ ದಿನ ಜಗಳ ನಡೆಯುತ್ತಿದ್ದು, ತಾಯಿ ಪಕ್ಕದ ಮನೆಗೆ ಹೋದ ಸಂದರ್ಭದಲ್ಲಿ ಈ ಶೂಟೌಟ್ ನಡೆದಿದೆ ಎನ್ನಲಾಗುತ್ತಿದೆ.
ನಾಡಕೋವಿಯಿಂದ 3 ಸುತ್ತು ಗುಂಡು ಹಾರಿಸಲಾಗಿದ್ದು , ಈ ಸಂದರ್ಭ ಮಗನ ಕೈಗೆ ಗಾಯವಾಗಿದೆ. ಮಗನನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಎರಡೂ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ನಿಜವಾದ ವಿಷಯ ಇನ್ನಷ್ಟೇ ಹೊರಬರಬೇಕಿದೆ.
Comments
English summary
A man was killed by a bullet fired from a rifle at Vittal here late night on Friday January 13. Indresh Kumar (64) was killed in the firing that was reported to have taken place at Nekkare Kadu in Kasba, Vittal here.