ಉಡುಪಿಯ ನೇಹಾ ಶೆಟ್ಟಿ ಇದೀಗ ಬ್ಯಾಡ್ಮಿಂಟನ್ ಮಿನುಗುತಾರೆ
ಉಡುಪಿ, ಅಕ್ಟೋಬರ್, 05 : ಹನ್ನೆರಡು ವರ್ಷದ ಉಡುಪಿ ಮೂಲದ ನೇಹಾ ಶೆಟ್ಟಿ ಕ್ರೀಡಾಲೋಕದ ಬ್ಯಾಡ್ಮಿಂಟನ್ ನಲ್ಲಿ ಹಲವಾರು ಉನ್ನತ ಮಟ್ಟದ ಪ್ರಶಸ್ತಿಗಳನ್ನು ಗಳಿಸಿ ತುಳು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ನೇಹಾ ಉಡುಪಿಯ ವಳಕಾಡಿನ ಮೂಲ ನಿವಾಸಿಯಾಗಿದ್ದ ನರೇಶ್ ಶೆಟ್ಟಿ ಹಾಗೂ ವಿಜಯಾ ಎನ್. ಶೆಟ್ಟಿ ಅವರ ಮಗಳು. ಪ್ರಸ್ತುತ ದೋಹಾ ಕತಾರ್ ನಲ್ಲಿ ನೆಲೆಸಿದ ನೇಹಾ ಪ್ರಸಕ್ತ ಡಿಪಿಎಸ್-ಎಂಪಿಎಸ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟು ಶಿಕ್ಷಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.[ಉದ್ಯಾನಗರಿಯಲ್ಲಿ ಕಮರಿಹೋಗುತ್ತಿದೆಯಾ ಆಟದ ಕನಸು?]

ಸಾಧಕಿ ನೇಹಾ ಶೆಟ್ಟಿ 2014 ರಿಂದ ಖತಾರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ ಮನೋಜ್ ಶಹಿಬ್ಜನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನಾಡಿಗೆ ಇನ್ನಷ್ಟು ಪ್ರಶಸ್ತಿ ತಂದುಕೊಡುವ ಹುಮ್ಮಸ್ಸಿನಲ್ಲಿರುವ ನೇಹಾ ಇದೇ ಮೊದಲ ಬಾರಿ ಖತಾರ್ ನಿಂದ ಬೇರೆಡೆ ನಡೆದ ಜಿಸಿಸಿ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ಸು ಗಳಿಸಿದ್ದಾಳೆ.
ಯಶಸ್ಸು ಪಡೆದ ಸಂತಸದಲ್ಲಿರುವ ನೇಹಾ,' ಇದು ನನ್ನ ಜೀವನದ ಒಂದು ಅಮೂಲ್ಯ ಹಂತ. ನನ್ನ ಈ ಯಶಸ್ಸಿಗೆ ಹೆತ್ತವರು, ಗುರು-ಹಿರಿಯರ ಆಶೀರ್ವಾದ ಹಾಗೂ ಸ್ನೇಹಿತರ ಶುಭ ಹಾರೈಕೆಗಳೇ ಕಾರಣ' ಎಂದು ಮನತುಂಬಿ ನುಡಿಯುತ್ತಾಳೆ.

ಯಾವ ಯಾವ ಟೂರ್ನಿಯಲ್ಲಿ ಭಾಗವಹಿಸಿ ಜಯಶಾಲಿಯಾಗಿದ್ದಾರೆ?
* ಕತಾರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಜಿಸಿಸಿ ಮಟ್ಟದಲ್ಲಿ ಅದ್ಭುತ ಸಾಧನೆ
* ಕುವೈತ್ ನಲ್ಲಿ 12 ವರ್ಷದೊಳಗಿನ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯದಲ್ಲಿ ಗೆದ್ದಿದ್ದಾರೆ.
* 2013 ರಲ್ಲಿ ಕಿಂಗ್ಸ್ ಕ್ವಾರ್ಟರ್ ಬ್ಯಾಡ್ಮಿಂಟನ್ ಓಪನ್ ನ ಸಿಂಗಲ್ಸ್ ನಲ್ಲಿ ಪ್ರಥಮ
* 2014ರಲ್ಲಿ ಕಿಂಗ್ಸ್ ಕ್ವಾರ್ಟರ್ ಬ್ಯಾಡ್ಮಿಂಟನ್ ಓಪನ್ ನ ಸಿಂಗಲ್ಸ್ ನಲ್ಲಿ ದ್ವಿತೀಯ, ಡಬಲ್ಸ್ ನಲ್ಲಿ ಪ್ರಥಮ
* ಜಿಸಿಸಿ ಓಪನ್ ಕ್ವಾರ್ಟರ್ ಡಬಲ್ಸ್ ನಲ್ಲಿ ದ್ವಿತೀಯ
* 2015ರಲ್ಲಿ ಕ್ವಾರ್ಟರ್ ಓಪನ್ ನಲ್ಲಿ ಸಿಂಗಲ್ಸ್ ದ್ವಿತೀಯ, ಮತ್ತು ಕ್ವಾರ್ಟರ್ ಓಪನ್ ನಲ್ಲಿ ಪ್ರಥಮ ಸ್ಥಾನ
* 12 ವರ್ಷದೊಳಗಿನ ಸಿಂಗಲ್ಸ್ ಪಂದ್ಯಾಟದ ಫೈನಲ್ ನಲ್ಲಿ ಅಗ್ರ ಕ್ರಮಾಂಕದ ಆಟಗಾರ್ತಿ ರೀಮ್ ಸಿರಜ್ ಅವರನ್ನು3 ಸೆಟ್ಸ್ ಗಳಿಂದ
ಸೋಲಿಸಿದರು. (12-21, 21-16, 21-6)
* 14 ವರ್ಷದೊಳಗಿನ ಹುಡುಗಿಯರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಸಾಧ್ವಿ ಕೃಷ್ಣರನ್ನು ಸೋಲಿಸಿದ್ದಾರೆ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications