350 ವರ್ಷ ಹಳೆಯ ದುರ್ಗಾಪರಮೇಶ್ವರಿ ದೇವಾಲಯ ಪುನರ್ ಪ್ರತಿಷ್ಠೋತ್ಸವ
ಮಂಗಳೂರು, ಜನವರಿ 11: ಮಂಗಳೂರು ಹೊರವಲಯದ ಕುಲಶೇಖರ ಸಮೀಪ ಇರುವ ಇತಿಹಾಸ ಪ್ರಸಿದ್ಧ ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಠೋತ್ಸವ ಮತ್ತು ಬ್ರಹ್ಮಕಲಶೋತ್ಸವ ಜನವರಿ 14 ರಿಂದ 18ರವರೆಗೆ ನಡೆಯಲಿದೆ.
'ಕೆಲವೇ ದಿನಗಳಲ್ಲಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಸರ್ಕಾರದ ವಶಕ್ಕೆ'
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ಕೆಎನ್ ಬಿಎಂ ಟ್ರಸ್ಟ್ ನ ಟ್ರಸ್ಟಿ ಡಾ.ಸುಬ್ರಹ್ಮಣ್ಯ ಭಟ್, ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಸುಮಾರು 350 ವರ್ಷಗಳಷ್ಟು ಪುರಾತನವಾಗಿದ್ದು ಬಹಳ ಪ್ರಸಿದ್ಧಿ ಪಡೆದಿದೆ. ಸರಳ ಮಣ್ಣಿನ ಗೋಡೆಯುಳ್ಳ ಈ ದೇವಸ್ಥಾನವು ಭಕ್ತರ ನಂಬುಕೆಯ ತಾಣವಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲದಲ್ಲಿ ಮೊಬೈಲ್ ಬಳಕೆ ನಿಷೇಧ
ಸಸ್ಯ ಸಮೃದ್ಧಿಯಾದ, ನಾಗ ಸನ್ನಿಧಿಯಾದ ಈ ಕ್ಷೇತ್ರದ ಸ್ಥಳದಲ್ಲಿ ಭೂತಾರಾಧನೆಯೂ ನಡೆಯುತ್ತದೆ. ಇಲ್ಲಿನ ದೈವಗಳಾದ ಜಟಾಧಾರಿ, ಬ್ರಹ್ಮರ ದೈವ , ರಕ್ತೇಶ್ವರಿ ದೈವ ಮತ್ತು ಗುಳಿಗ ದೈವಗಳು ಸ್ಥಳೀಯರ ಭಕ್ತಿಯ ದ್ಯೋತಕವಾಗಿದೆ ಎಂದು ಹೇಳಿದರು.
ಶ್ರೀ ಕ್ಷೇತ್ರವನ್ನು ಭಕ್ತರ ಆಭಿಪ್ರಾಯ ಮತ್ತು ಆಶಯದ ಆಧಾರದ ಮೇಲೆ ದೇವಾಲಯದ ಜೀರ್ಣೋದ್ದಾರ ನಡೆಸಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2011 ನೇ ಫೇಬ್ರವರಿಯಲ್ಲಿ ಭಕ್ತರ ಉಪಸ್ಥಿತಿಯಲ್ಲಿ ಪ್ರಸಿದ್ಧ ಜ್ಯೋತಿಷಿ ಶ್ರೀ ಬಿ ರಂಗನಾರಾಯಣ ಭಟ್ ಅವರಿಂದ ಅಷ್ಟ ಮಂಗಳ ಪ್ರಶ್ನೆ ವ್ಯವಸ್ಥೆ ಮಾಡಲಾಗಿತ್ತು.
ಉಡುಪಿ: ಪ್ರಸಾದದ ಬಗ್ಗೆ ಎಚ್ಚರ ವಹಿಸಲು ದೇವಾಲಯಗಳಿಗೆ ಸೂಚನೆ
ಜ್ಯೋತಿಷಿಯವರಿಂದ ಅಷ್ಟಮಂಗಳ ಪ್ರಶ್ನೆಯಲ್ಲಿ ಪಡೆದ ನಿರ್ದೇಶನಗಳಂತೆ ಜೀರ್ಣೋದ್ಧಾರ ಕಾರ್ಯಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದೆ. 2013 ರಲ್ಲಿ ಶಿಲಾನ್ಯಾಸದೊಂದಿಗೆ ಕೆಲಸ ಪ್ರಾರಂಭಿಸಿ 6 ವರ್ಷಗಳ ದೀರ್ಘ ಪ್ರಯತ್ನ ಗಳೊಂದಿಗೆ ಈಗ ಸುಂದರ ದೇವಸ್ಥಾನ ನಿರ್ಮಾಣ ಕೆಲಸ ಮುಗಿಸಲಾಗಿದೆ.
ಇದೇ ಬರುವ ಜನವರಿ 14 ರಿಂದ 18 ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಜನವರಿ 18 ರ ಕುಂಭ ಲಗ್ನ ಮುಂಜಾನೆ 8:40 ಕ್ಕೆ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶಗಳು ನಡೆಯಲಿದೆ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಕರವೀರ ಪೀಠದ ಜಗದ್ಗುರು ಶ್ರೀ ವಿದ್ಯಾನರಸಿಂಹ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಡಾ.ಸುಬ್ರಹ್ಮಣ್ಯ ಭಟ್ ತಿಳಿಸಿದರು.