ಸಾರಿಗೆ ಬಂದ್ಗೆ ಮಂಗಳೂರು, ದ.ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ
ಮಂಗಳೂರು, ಆಗಸ್ಟ್ 07: ಮೋಟಾರು ವಾಹನ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿಐಟಿಯು ಕರೆ ನೀಡಿದ್ದ ಮುಷ್ಕರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಕಾ ತಾಲೂಕು ಸೇರಿದಂತೆ ಮಂಗಳೂರು ನಗರದಲ್ಲಿ ಎಂದಿನಂತೆ ರಸ್ತೆಗಿಳಿದ ಸಿಟಿ ಹಾಗೂ ಸರ್ವಿಸ್ ಬಸ್ಗಳು ಸಂಚಾರ ಆರಂಭಿಸಿದ್ದು, ಖಾಸಗಿ ಕಾರುಗಳು, ಆಟೋಗಳು ಸಹ ಸಂಚರಿಸುತ್ತಿವೆ.

ಸರ್ಕಾರಿ ನೌಕರರು ಮುಷ್ಕರಕ್ಕೆ ಬೆಂಬಲ ನೀಡದ ಕಾರಣ ಸರ್ಕಾರಿ ಸಾರಿಗೆ ವಾಹನಗಳು ಎಂದಿನಂತೆ ಸಂಚಿರಿಸುತ್ತಿವೆ. ಸಾರಿಗೆ ವಾಹನಗಳ ಸಂಚಾರ ಕೂಡ ಯಥಾಸ್ಥಿತಿಯಲ್ಲೇ ಇದೆ.

ಮಂಗಳೂರು ಹಾಗೂ ಉಡುಪಿ ವಿಭಾಗದ 550 ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಕೂಡಾ ಆಭಾಧಿತವಾಗಿ ನಡೆದಿದೆ. 'ಮುಷ್ಕರ ಘೋಷಣೆ ಬಗ್ಗೆ ನಮಗೆ ಯಾರೂ ಮಾಹಿತಿಯೇ ನೀಡಿಲ್ಲ, ವಿನಂತಿ ಕೂಡಾ ಮಾಡಿಲ್ಲ' ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.












Click it and Unblock the Notifications