ಸಾರಿಗೆ ಬಂದ್ಗೆ ಮಂಗಳೂರು, ದ.ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ
ಮಂಗಳೂರು, ಆಗಸ್ಟ್ 07: ಮೋಟಾರು ವಾಹನ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿಐಟಿಯು ಕರೆ ನೀಡಿದ್ದ ಮುಷ್ಕರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಕಾ ತಾಲೂಕು ಸೇರಿದಂತೆ ಮಂಗಳೂರು ನಗರದಲ್ಲಿ ಎಂದಿನಂತೆ ರಸ್ತೆಗಿಳಿದ ಸಿಟಿ ಹಾಗೂ ಸರ್ವಿಸ್ ಬಸ್ಗಳು ಸಂಚಾರ ಆರಂಭಿಸಿದ್ದು, ಖಾಸಗಿ ಕಾರುಗಳು, ಆಟೋಗಳು ಸಹ ಸಂಚರಿಸುತ್ತಿವೆ.
ಸಾರಿಗೆ ಮುಷ್ಕರಕ್ಕೆ ನೋ ರೆಸ್ಪಾನ್ಸ್: ಬಸ್, ಮೆಟ್ರೋ ಓಡ್ತಿವೆ ಬೆಂಗಳೂರಲ್ಲಿ
ಸರ್ಕಾರಿ ನೌಕರರು ಮುಷ್ಕರಕ್ಕೆ ಬೆಂಬಲ ನೀಡದ ಕಾರಣ ಸರ್ಕಾರಿ ಸಾರಿಗೆ ವಾಹನಗಳು ಎಂದಿನಂತೆ ಸಂಚಿರಿಸುತ್ತಿವೆ. ಸಾರಿಗೆ ವಾಹನಗಳ ಸಂಚಾರ ಕೂಡ ಯಥಾಸ್ಥಿತಿಯಲ್ಲೇ ಇದೆ.
ಮಂಗಳೂರು ಹಾಗೂ ಉಡುಪಿ ವಿಭಾಗದ 550 ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಕೂಡಾ ಆಭಾಧಿತವಾಗಿ ನಡೆದಿದೆ. 'ಮುಷ್ಕರ ಘೋಷಣೆ ಬಗ್ಗೆ ನಮಗೆ ಯಾರೂ ಮಾಹಿತಿಯೇ ನೀಡಿಲ್ಲ, ವಿನಂತಿ ಕೂಡಾ ಮಾಡಿಲ್ಲ' ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.
Comments
English summary
Dull response to transport bandh call by CITU in Mangaluru and Dakshin Kannada. All the private and government transport vehicles were working as normal day.
Story first published: Tuesday, August 7, 2018, 8:06 [IST]