ಹೆಣ್ಣು ಮರಿಗೆ ಜನ್ಮ ನೀಡಿದ ಧರ್ಮಸ್ಥಳದ ಆನೆ ಲಕ್ಷ್ಮಿ
ಬೆಳ್ತಂಗಡಿ, ಜುಲೈ 1: ಧರ್ಮಸ್ಥಳ ದೇಗುಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಧರ್ಮಸ್ಥಳದ ಆನೆ ಲಕ್ಷ್ಮಿ ಹೆಣ್ಣು ಮರಿಗೆ ಜನ್ಮ ನೀಡಿದೆ.
Recommended Video
ಇಂದು ಮುಂಜಾನೆ ಲಕ್ಷ್ಮಿ ಮರಿಗೆ ಜನ್ಮ ನೀಡಿದೆ. ಆನೆ ಮತ್ತು ಮರಿ ಇಬ್ಬರು ಆರೋಗ್ಯವಾಗಿ ಇದ್ದಾರೆ. ಮರಿಯ ಆಗಮನದಿಂದ ಧರ್ಮಸ್ಥಳ ದೇಗುಲಕ್ಕೆ ಖುಷಿ ಹೆಚ್ಚಾಗಿದೆ. ಧರ್ಮಸ್ಥಳದ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಿ ಆನೆ 2009ರಲ್ಲಿ ಧರ್ಮಸ್ಥಳಕ್ಕೆ ಬಂದಿತ್ತು. ವಿಜಯನಗರದ ಶಾಸಕ ಆನಂದ್ ಸಿಂಗ್ ಆನೆಯನ್ನು ದೇಗುಲಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಲ್ಲಿಂದ ಧರ್ಮಸ್ಥಳದಲ್ಲಿ ಇದ್ದ ಲಕ್ಷ್ಮಿ ಆನೆ ಎಲ್ಲರ ಮೆಚ್ಚುಗೆ ಪಡೆದಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪ್ರೀತಿಯ ಆನೆಯಾಗಿದೆ.

ಅಂದಹಾಗೆ, ಲಾಕ್ಡೌನ್ ಸಡಿಲಿಕೆ ನಂತರ ಧರ್ಮಸ್ಥಳ ದೇವಸ್ಥಾನವನ್ನು ತೆರೆಯಲಾಗಿದೆ. ಕೊರೊನಾ ಹಿನ್ನೆಲೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಇದೆ. ಸ್ವಚ್ಚತೆ, ಸ್ಯಾನಿಟೈಸರ್ ಬಳಕೆ, ಧರ್ಮಲ್ ಸ್ಕ್ರೀನಿಂಗ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.












Click it and Unblock the Notifications