Get Updates
Get notified of breaking news, exclusive insights, and must-see stories!

ಊಟಕ್ಕೆಂದು ಬರುವವನು ಹೆಣವಾಗಿ ಬಂದ, ದೀಪಕ್ ತಾಯಿಯ ಕಣ್ಣೀರಿನ ಮಾತುಗಳು

ಮಂಗಳೂರು, ಜನವರಿ 04: "ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬರುವವನು ಹೆಣವಾಗಿ ಬಂದಿದ್ದಾನೆ. ಮನೆಗೆ ಆಧಾರವಾಗಿದ್ದ ಮಗನನ್ನೇ ಕಳೆದುಕೊಂಡಿದ್ದೇನೆ. ಮಗನಿಗಿಂತ ನನಗೆ ಪರಿಹಾರದ ಹಣ ದೊಡ್ಡದಲ್ಲ. ನನ್ನ ಮಗ ಯಾರರೊಂದಿಗೂ ವೈಷಮ್ಯ ಇಟ್ಟುಕೊಂಡವನಲ್ಲ". ಇವು ಹತ್ಯೆಯಾದ ದೀಪಕ್ ರಾವ್ ತಾಯಿ ಪ್ರೇಮ ಅವರು ಮಾಧ್ಯಮಗಳ ಮುಂದೆ ಆಡಿದ ಕಣ್ಣೀರಿನ ಮಾತುಗಳಿವು.

"ಅಮ್ಮ ನಾನು ಬೇರೆ ಕೆಲಸ ಮಾಡಲು ವಿದೇಶಕ್ಕೆ ಹೋಗ್ತೇನೆ ಅಂದಿದ್ದಾ. ಅದನ್ನು ನಾನು ಬೇಡ ಎಂದು ಹೇಳಿದ್ದೆ. ವಿದೇಶಕ್ಕೆ ಹೋಗಿದ್ರೆ ನನ್ನ ಮನಗ ನನಗೆ ಉಳಿತಿದ್ದ. ನಾನೇ ಹೋಗ್ಬೇಡ ಎದ್ಹೇಳಿ ತಪ್ಪು ಮಾಡಿ ಬಿಟ್ಟೆ ಎಂದು ಕಣ್ಣೀರು ಇಟ್ಟರು. ನನ್ನ ಮಗನನ್ನು ಕೊಲೆ ಮಾಡಿದವರಿಗೆ ಆ ದೇವರೇ ಶಿಕ್ಷೆ ನೀಡಲಿ ಎಂದು ಹೇಳಿ ದುಃಖತಪ್ತರಾದರು.

Deepak Rao's mather Preema reacts with media after funeral

ಮತ್ತೊಂದೆಡೆ ಸುರತ್ಕಲ್ ಶಾಸಕ ಮೊಯಿದ್ದೀನ್ ಬಾವಾ ಅವರು ಘೋಷಿಸಿದ್ದ 5 ಲಕ್ಷ ರು ಪರಿಹಾರ ಹಣವನ್ನು ತೆಗೆದುಕೊಳ್ಳುವುದಿಲ್ಲ. ಹಣ ಕೊಟ್ಟರೆ ಜೀವ ಪುನಃ ಬರುವುದಿಲ್ಲ. ಕೇವಲ ಸರ್ಕಾರ ನೀಡುವ ಪರಿಹಾರವನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಬೇರೆ ಯಾರ ಹಣ ಮುಟ್ಟುವುದಿಲ್ಲ ಎಂದು ದೀಪಕ್ ರಾವ್ ಅವರ ಚಿಕ್ಕಪ್ಪ ಸಾತೋರ್ಜಿ ಹೇಳಿದರು.

ಬುಧವಾರ (ಜನವರಿ 3) ಮಧ್ಯಾಹ್ನ ದೀಪಕ್ ರಾವ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮಂಗಳೂರು ಹೊರವಲಯದ ಕಾಟಿಪಳ್ಳ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.

ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು 24 ಗಂಟೆಯೊಳಗೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+