ಊಟಕ್ಕೆಂದು ಬರುವವನು ಹೆಣವಾಗಿ ಬಂದ, ದೀಪಕ್ ತಾಯಿಯ ಕಣ್ಣೀರಿನ ಮಾತುಗಳು
ಮಂಗಳೂರು, ಜನವರಿ 04: "ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬರುವವನು ಹೆಣವಾಗಿ ಬಂದಿದ್ದಾನೆ. ಮನೆಗೆ ಆಧಾರವಾಗಿದ್ದ ಮಗನನ್ನೇ ಕಳೆದುಕೊಂಡಿದ್ದೇನೆ. ಮಗನಿಗಿಂತ ನನಗೆ ಪರಿಹಾರದ ಹಣ ದೊಡ್ಡದಲ್ಲ. ನನ್ನ ಮಗ ಯಾರರೊಂದಿಗೂ ವೈಷಮ್ಯ ಇಟ್ಟುಕೊಂಡವನಲ್ಲ". ಇವು ಹತ್ಯೆಯಾದ ದೀಪಕ್ ರಾವ್ ತಾಯಿ ಪ್ರೇಮ ಅವರು ಮಾಧ್ಯಮಗಳ ಮುಂದೆ ಆಡಿದ ಕಣ್ಣೀರಿನ ಮಾತುಗಳಿವು.
"ಅಮ್ಮ ನಾನು ಬೇರೆ ಕೆಲಸ ಮಾಡಲು ವಿದೇಶಕ್ಕೆ ಹೋಗ್ತೇನೆ ಅಂದಿದ್ದಾ. ಅದನ್ನು ನಾನು ಬೇಡ ಎಂದು ಹೇಳಿದ್ದೆ. ವಿದೇಶಕ್ಕೆ ಹೋಗಿದ್ರೆ ನನ್ನ ಮನಗ ನನಗೆ ಉಳಿತಿದ್ದ. ನಾನೇ ಹೋಗ್ಬೇಡ ಎದ್ಹೇಳಿ ತಪ್ಪು ಮಾಡಿ ಬಿಟ್ಟೆ ಎಂದು ಕಣ್ಣೀರು ಇಟ್ಟರು. ನನ್ನ ಮಗನನ್ನು ಕೊಲೆ ಮಾಡಿದವರಿಗೆ ಆ ದೇವರೇ ಶಿಕ್ಷೆ ನೀಡಲಿ ಎಂದು ಹೇಳಿ ದುಃಖತಪ್ತರಾದರು.

ಮತ್ತೊಂದೆಡೆ ಸುರತ್ಕಲ್ ಶಾಸಕ ಮೊಯಿದ್ದೀನ್ ಬಾವಾ ಅವರು ಘೋಷಿಸಿದ್ದ 5 ಲಕ್ಷ ರು ಪರಿಹಾರ ಹಣವನ್ನು ತೆಗೆದುಕೊಳ್ಳುವುದಿಲ್ಲ. ಹಣ ಕೊಟ್ಟರೆ ಜೀವ ಪುನಃ ಬರುವುದಿಲ್ಲ. ಕೇವಲ ಸರ್ಕಾರ ನೀಡುವ ಪರಿಹಾರವನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಬೇರೆ ಯಾರ ಹಣ ಮುಟ್ಟುವುದಿಲ್ಲ ಎಂದು ದೀಪಕ್ ರಾವ್ ಅವರ ಚಿಕ್ಕಪ್ಪ ಸಾತೋರ್ಜಿ ಹೇಳಿದರು.
ಬುಧವಾರ (ಜನವರಿ 3) ಮಧ್ಯಾಹ್ನ ದೀಪಕ್ ರಾವ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮಂಗಳೂರು ಹೊರವಲಯದ ಕಾಟಿಪಳ್ಳ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು 24 ಗಂಟೆಯೊಳಗೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications