ಕೇರಳದಲ್ಲಿ ಅನ್‌ಲಾಕ್: ಗಡಿಯಲ್ಲಿ ಪ್ರವೇಶ ನಿರ್ಬಂಧ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತ!

ಮಂಗಳೂರು,

ಸೆಪ್ಟೆಂಬರ್
9:
ಕೇರಳದಲ್ಲಿ
ಕೊರೊನಾ
ಸೋಂಕು
ದಿನದಿಂದ
ದಿನಕ್ಕೆ
ಏರುತ್ತಿದೆ.
ಇದರ
ಜೊತೆ
ನಿಫಾ
ವೈರಸ್
ಪ್ರಕರಣಗಳು
ಕೂಡಾ
ಕೇರಳದಲ್ಲಿ
ಆತಂಕ
ಮೂಡಿಸಿದೆ.
ಆದರೆ
ಕೇರಳ
ಸರ್ಕಾರ
ಇದರ
ಬಗ್ಗೆ
ಕ್ಯಾರೇ
ಅನ್ನದೇ
ರಾಜ್ಯದಲ್ಲಿ
ವಿಧಿಸಿದ್ದ
ಕೋವಿಡ್
ಷರತ್ತುಗಳನ್ನೆಲ್ಲಾ
ತೆಗದುಹಾಕಿದೆ.

id="toptextpromo">
id='are-slot-1'
class='oiad
oi-axt
oiadv'>

ಅಲ್ಲದೇ

ಶಾಲಾ-
ಕಾಲೇಜುಗಳನ್ನು
ತೆರೆಯಲು
ತೀರ್ಮಾನಿಸಿದೆ.
ಇದರಿಂದ
ರಾಜ್ಯದ
ಗಡಿ
ಭಾಗದಲ್ಲಿ
ಆತಂಕ
ಮೂಡಿಸಿದ್ದು,
ದಕ್ಷಿಣ
ಕನ್ನಡ
ಜಿಲ್ಲಾಡಳಿತ
ಕೇರಳ-
ಮಂಗಳೂರು
ಸಂಪರ್ಕವನ್ನೇ
ಸ್ಥಗಿತಗೊಳಿಸಲು
ಸೂಚಿಸಿದೆ.
ಬಗ್ಗೆ
ಆದೇಶ
ಹೊರಡಿಸಿರುವ
ದಕ್ಷಿಣ
ಕನ್ನಡ
ಜಿಲ್ಲಾಧಿಕಾರಿ
ಡಾ.
ರಾಜೇಂದ್ರ
ಕೆ.ವಿ.,
ಅಕ್ಟೋಬರ್
ಅಂತ್ಯದವರೆಗೂ
ಕೇರಳಕ್ಕೆ
ಹೋಗುವವರು
ಮತ್ತು
ಕೇರಳದಿಂದ
ಮಂಗಳೂರಿಗೆ
ಬರುವವರಿಗೆ
ನಿರ್ಬಂಧ
ವಿಧಿಸಿದ್ದಾರೆ.
ಕೇವಲ
ತುರ್ತು
ಕಾರಣಕ್ಕೆ
ಮಾತ್ರ
ಕೇರಳ
ಭಾಗದಿಂದ
ಮಂಗಳೂರಿಗೆ
ಮತ್ತು
ಮಂಗಳೂರಿನಿಂದ
ಕೇರಳಕ್ಕೆ
ಹೋಗಬೇಕೆಂದು
ಆದೇಶ
ನೀಡಿದ್ದಾರೆ.

id='are-slot-2'
class='oiad
oi-axt
oiadv'>

 ಅಕ್ಟೋಬರ್ ಅಂತ್ಯದವರೆಗೂ ಕೇರಳದಲ್ಲೇ ಇರುವಂತೆ ಸೂಚನೆ

ಅಕ್ಟೋಬರ್ ಅಂತ್ಯದವರೆಗೂ ಕೇರಳದಲ್ಲೇ ಇರುವಂತೆ ಸೂಚನೆ

ಮಂಗಳೂರಿನ ಶೈಕ್ಷಣಿಕ, ನರ್ಸಿಂಗ್, ಪ್ಯಾರಾಮೆಡಿಕಲ್, ಕಾಲೇಜುಗಳ ಆಡಳಿತಾಧಿಕಾರಿ ಅಥವಾ ಪ್ರಾಂಶುಪಾಲರು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಕೇರಳದಿಂದ ಶಿಕ್ಷಕ- ಶಿಕ್ಷಕಿಯರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಮಂಗಳೂರಿಗೆ ಬರುವವರಾಗಿದ್ದರೆ ಅಂಥವರನ್ನು ಅಕ್ಟೋಬರ್ ಅಂತ್ಯದವರೆಗೂ ಕೇರಳದಲ್ಲೇ ಇರುವಂತೆ ಸೂಚಿಸಬೇಕಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ. ಆದೇಶ ನೀಡಿದ್ದಾರೆ. ಅಲ್ಲದೇ ಮಂಗಳೂರಿನಿಂದ ಕೇರಳಕ್ಕೆ ಹೋಗುವವರಿದ್ದರೂ ಅಕ್ಟೋಬರ್‌ 31ರವರೆಗೆ ಕೇರಳಕ್ಕೆ ಹೋಗಬಾರದಾಗಿ ಸೂಚಿಸಿ ಆದೇಶ ನೀಡಿದ್ದಾರೆ.
ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕಚೇರಿಗಳು, ಕಾರ್ಖಾನೆಗಳು, ಕೈಗಾರಿಕೆಗಳು ಸೇರಿದಂತೆ ಇತರ ಕಂಪೆನಿಗಳ ಮಾಲೀಕರಿಗೆ ಕೇರಳಕ್ಕೆ ಈಗಾಗಲೇ ಹೋಗಿರುವ ಸಿಬ್ಬಂದಿಗಳು ಅಕ್ಟೋಬರ್ ಅಂತ್ಯದವರೆಗೆ ಯಾವುದೇ ಕಾರಣಕ್ಕೂ ಮಂಗಳೂರನ್ನು ಪ್ರವೇಶಿಸದಂತೆ ಸಲಹೆ ನೀಡುವಂತೆ ಸೂಚನೆ ನೀಡಿದ್ದಾರೆ.

 ಕೇರಳ ರಾಜ್ಯಕ್ಕೆ ಪ್ರಯಾಣ ಮಾಡಬಾರದು

ಕೇರಳ ರಾಜ್ಯಕ್ಕೆ ಪ್ರಯಾಣ ಮಾಡಬಾರದು

ಕೊರೊನಾ ಮೂರನೇ ಅಲೆ ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಅನಾವಶ್ಯಕವಾಗಿ ಯಾವುದೇ ತುರ್ತು ಕಾರಣಗಳಿಲ್ಲದೇ ಅಕ್ಟೋಬರ್ ತಿಂಗಳಾಂತ್ಯದವರೆಗೆ ಕೇರಳ ರಾಜ್ಯಕ್ಕೆ ಪ್ರಯಾಣ ಮಾಡಬಾರದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಗಡಿಭಾಗದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕೂ ಮಂಗಳೂರನ್ನೇ ಆಶ್ರಯಿಸಬೇಕಾಗಿರುವುದರಿಂದ ಅತ್ತ ಕೇರಳಕ್ಕೂ ಹೋಗಲಾರದೆ, ಇತ್ತ ಮಂಗಳೂರಿಗೂ ಬರಲಾರದೆ ಅತಂತ್ರರಾಗಿದ್ದೇವೆ. ಅಖಂಡ ಭಾರತದ ಬಗ್ಗೆ ಮಾತನಾಡುವ ಪಕ್ಷವೇ ಆಡಳಿತದಲ್ಲಿದ್ದು, ಈಗ ರಾಜ್ಯ ರಾಜ್ಯದ ನಡುವೆಯೇ ಕಂದಕ ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಗಡಿಭಾಗದಲ್ಲಿ ಹುಟ್ಟಿದ್ದೇ ತಪ್ಪಾ?

ಗಡಿಭಾಗದಲ್ಲಿ ಹುಟ್ಟಿದ್ದೇ ತಪ್ಪಾ?

ಮಂಗಳೂರಿನ ಕಂಪೆನಿಗಳಲ್ಲಿ ಉದ್ಯೋಗ ಮಾಡುತ್ತಿರುವವರೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ತಿಂಗಳ ಕಾಲ ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿಯಬೇಕಾಯಿತು. ಆಮೇಲೆ ಮತ್ತೆ ಕಂಪೆನಿ ಆರಂಭವಾಗಿ ಜೀವನ ಇನ್ನೇನು ಸ್ವಲ್ಪ ಸುಧಾರಿಸುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಜಿಲ್ಲಾಡಳಿತ ಈ ಆದೇಶ ಮಾಡಿದೆ. ನಾವೇನು ಗಡಿಭಾಗದಲ್ಲಿ ಹುಟ್ಟಿದ್ದೇ ತಪ್ಪಾ ಅಂತಾ ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ಮೂಲದ ನಿಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೇರಳ ಜನರ ನಿರ್ಬಂಧ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಜನಾಕ್ರೋಶದ ಮುಂದೆ ಜಿಲ್ಲಾಡಳಿತ ನಿಯಮ ಬದಲು ಮಾಡುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

 ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನಗಳಿಗೆ ಹೊಸ ಮಾರ್ಗಸೂಚಿ ಪ್ರಕಟ

ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನಗಳಿಗೆ ಹೊಸ ಮಾರ್ಗಸೂಚಿ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳೆಂದು ಗುರುತಿಸಲ್ಪಟ್ಟಿರುವ ಹಲವು ಧಾರ್ಮಿಕ ಕ್ಷೇತ್ರಗಳಿದ್ದು, ಈ ಕ್ಷೇತ್ರಗಳಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡುವ ಹಿನ್ನಲೆಯಲ್ಲಿ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹೊಸ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದೆ.
ಮುಖ್ಯವಾಗಿ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಅನ್ವಯಿಸುವಂತೆ ಈ ಮಾರ್ಗಸೂಚಿಯನ್ನು ಹೊರಡಿಲಾಗಿದೆ. ಈ ಮೂರೂ ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಬೆಳಿಗ್ಗೆ 7 ರಿಂದ ರಾತ್ರಿ 7ರ ತನಕ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳು ದೇವರ ದರ್ಶನ, ತೀರ್ಥ, ಪ್ರಸಾದ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳಬಹುದು. ಮುಂದಿನ ಆದೇಶದವರೆಗೆ ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳಿಗೆ ಅವಕಾಶ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+