ಮಂಗಳೂರು, ಜುಲೈ 31: ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ ಅವರ ಮೃತದೇಹ ಹೊಯಿಗ್ ಬಜಾರ್ ಎಂಬ ಪ್ರದೇಶದ ನಧಿ ಭಾಗದಲ್ಲಿ ಪತ್ತೆಯಾಗಿದೆ.
ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ.
ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ. ಮೃತದೇಹದ ಪರಿಶೀಲನೆ ನಡೆಸಿ, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಕುಟುಂಬಸ್ಥರು, ಸಂಬಂಧಿಕರು ನಿರ್ಧಾರದಂತೆ ಮರಣೋತ್ತರ ಪರೀಕ್ಷೆ ಮುಂದಿನ ಕಾರ್ಯಗಳು ನಡೆಯಲಿವೆ ಎಂದು ನಮ್ಮ ಪ್ರತಿನಿಧಿ ತಿಳಿಸಿದ್ದಾರೆ.
ಎರಡು ಕಡೆ ಪಾರ್ಥಿಕ ಶರೀರ ದರ್ಶನಕ್ಕೆ ವ್ಯವಸ್ಥೆ, ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ, ಎಬಿಸಿ ಕಾಫಿ ಕ್ಯೂರಿಂಗ್,ಚೇತನಹಳ್ಳಿ ಎಸ್ಟೇಟ್ನಲ್ಲಿ ಅಂತಿಮ ದರ್ಶನ, ಮೆನ್ಲಾಕ್ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ವೆನ್ಲಾಕ್ ಆಸ್ಪತ್ರೆಯಿಂದ ರಸ್ತೆ ಮೂಲಕವೇ ಚಿಕ್ಕಮಗಳೂರಿಗೆ ಸಿದ್ಧಾರ್ಥ ಮೃತದೇಹ ರವಾನೆಯಾಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Jul 31, 2019, 6:59 pm IST
ಚೇತನಹಳ್ಳಿ ಎಸ್ಟೇಟ್ನಲ್ಲಿ ಶೋಕ ಮಡುಗಟ್ಟಿದ್ದು, ಸೂರ್ಯ ಮುಳುಗುವ ವೇಳೆ ಸಿದ್ಧಾರ್ಥ ಅವರ ಶರೀರಕ್ಕೆ ಅಗ್ನಿಗೆ ಸೋಕಿ ಆವಿಯಾಗಿ ಪಂಚಭೂತಗಳನ್ನು ಸೇರುತ್ತಿದೆ.
Jul 31, 2019, 6:55 pm IST
ಇಬ್ಬರು ಪುತ್ರರಿಂದ ಸಿದ್ಧಾರ್ಥ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡಿದರು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.
Jul 31, 2019, 6:36 pm IST
ಸಿದ್ಧಾರ್ಥ ಅವರ ಪಾರ್ಥಿವ ಶರೀರವನ್ನು ಚಿತಾವಣೆಗೆ ತರಲಾಗಿದೆ. ಚಿತಾವಣೆಗೆ ಸುಗಂಧ ದ್ರವ್ಯ, ವಸ್ತ್ರ ಮತ್ತಿತರೆಗಳನ್ನು ವಸ್ತುಗಳನ್ನು ಸಂಪ್ರದಾಯದಂತೆ ಇಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಸಿದ್ಧಾರ್ಥ ಅವರ ಮೊದಲ ಪುತ್ರ ಅಮರ್ಥ್ಯ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.
Jul 31, 2019, 6:13 pm IST
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಸಿದ್ಧಾರ್ಥ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
Jul 31, 2019, 5:56 pm IST
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಸಿದ್ಧಾರ್ಥ ಅವರ ಅಂತಿಮ ದರ್ಶನ ಪಡೆದರು. ಅಣ್ಣಾಮಲೈ ಅವರು ಚಿಕ್ಕಮಗಳೂರಿನಲ್ಲಿ ಎಸ್ಪಿ ಆಗಿ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಈಗ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Jul 31, 2019, 4:56 pm IST
ಸಂಜೆ 6-7 ಗಂಟೆ ವೇಳೆಗೆ ಸಿದ್ಧಾರ್ಥ ಅವರ ಅಂತ್ಯಕ್ರಿಯೆ ಚೇತನಹಳ್ಳಿ ಎಸ್ಟೇಟ್ನಲ್ಲಿ ನೆರವೇರಲಿದೆ, ಚಿತೆಗೆ ಶ್ರೀಗಂಧ, ಮಾವು ಇನ್ನಿತರೆ ಮರಗಳ ಬಳಕೆ ಮಾಡಲಾಗುತ್ತಿದೆ.
Jul 31, 2019, 4:32 pm IST
ಚೇತನಹಳ್ಳಿ ಎಸ್ಟೇಟ್ನತ್ತ ಸಿದ್ಧಾರ್ಥ ಪಾರ್ಥಿವ ಶರೀರ ರವಾನೆಯಾಗುತ್ತಿದೆ.
Jul 31, 2019, 4:10 pm IST
ಸಿದ್ಧಾರ್ಥ ಪಾರ್ಥಿವ ಶರೀರದೆದುರು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.
Jul 31, 2019, 4:02 pm IST
ಚೇತನಹಳ್ಳಿ ಎಸ್ಟೇಟ್ಗೆ ಸಿದ್ಧಾರ್ಥ್ ಪತ್ನಿ ತಾಯಿ, ಅತ್ತೆ ಪ್ರೇಮಕೃಷ್ಣ ಆಗಮನ
Jul 31, 2019, 3:59 pm IST
35-40 ಸಾವಿರ ಜನರಿಗೆ ಉದ್ಯೋಗ ಕೊಟ್ಟವರು ಸಿದ್ಧಾರ್ಥ , ದುರ್ದೈವ ನಾವು ಅವರನ್ನು ಕಳೆದುಕೊಂಡಿದ್ದೇವೆ, ಎಲ್ಲಾ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ, ಕಾಫಿ ಡೇ ಮೂಲಕ ಇಡೀ ವಿಶ್ವಕ್ಕೆ ಕಾಫಿ ಪರಿಚಯ ಮಾಡಿಕೊಟ್ಟಿದ್ದಾರೆ- ಯಡಿಯೂರಪ್ಪ
Jul 31, 2019, 3:43 pm IST
ಸಿದ್ಧಾರ್ಥ ಪಾರ್ಥಿವ ಶರೀರ ಇರಿಸಲಾಗಿರುವ ಎಬಿಸಿ ಕಾಫಿ ಕ್ಯೂರಿಂಗ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದ್ದು ಸಿದ್ಧಾರ್ಥ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ
Jul 31, 2019, 3:38 pm IST
ಸಿದ್ಧಾರ್ಥ ಪಾರ್ಥಿವ ಶರೀರದ ಎದುರು ಕಣ್ಣೀರಿಟ್ಟ ಎಸ್ಎಂ ಕೃಷ್ಣ ದಂಪತಿ
Jul 31, 2019, 3:18 pm IST
ಅಳಿಯನ ಅಂತಿಮ ದರ್ಶನ ಪಡೆಯಲು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ದಂಪತಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.
Jul 31, 2019, 3:16 pm IST
ಮೂಡಿಗೆರೆಯ ಚೀಕನಹಳ್ಳಿ ಬಳಿ ಇರುವ ಚೇತನಹಳ್ಳಿ ಎಸ್ಟೇಟ್ ಬಳಿ ಇರುವ ಸಿದ್ಧಾರ್ಥ ನಿವಾಸದ ಎದುರೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ
Jul 31, 2019, 3:03 pm IST
ಸಿದ್ಧಾರ್ಥ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರ ನೆರೆದಿದೆ. ಸಂಜೆ 6ಗೆ ಅಂತ್ಯಕ್ರಿಯೆ ನೆರವೇರಲಿದೆ. ಎಬಿಸಿ ಕಾಫಿ ಕ್ಯೂರಿಂಗ್ ಸೆಂಟರ್ನಿಂದ ಚೇತನಹಳ್ಳಿ ಎಸ್ಟೇಟ್ಗೆ ಪಾರ್ಥಿವ ಶರೀರ ರವಾನೆಯಾಗುತ್ತಿದೆ.
Jul 31, 2019, 2:42 pm IST
ಸಿದ್ಧಾರ್ಥ ಅವರ ಪಾರ್ಥಿವ ಶರೀರ ಆಂಬುಲೆನ್ಸ್ನಲ್ಲಿ ಚಿಕ್ಕಮಗಳೂರಿಗೆ ತಲುಪಿದೆ. ಕಾಫಿ ಕ್ಯೂರಿಂಗ್ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Jul 31, 2019, 2:13 pm IST
ಇನ್ನು 15 ನಿಮಿಷಗಳಲ್ಲಿ ಎಬಿಸಿ ಕ್ಯೂರಿಂಗ್ ಆವರಣಕ್ಕೆ ಸಿದ್ಧಾರ್ಥ ಪಾರ್ಥಿವ ಶರೀರ ಬರಲಿದೆ
Jul 31, 2019, 2:04 pm IST
ಕಾಫಿ ಡೇ ಸಂಸ್ಥೆಯ ನೂತನ ಸಿಒಒ ಆಗಿ ನಿತಿನ್ ಬಾಗ್ಮನೆ ನೇಮಕ , ನಿರ್ದೇಶಕರ ಮಂಡಳಿ ಮಧ್ಯಂತರ ಅಧ್ಯಕ್ಷರಾಗಿ ಎಸ್. ವಿ ರಂಗನಾಥ್ ,ಕೆಫೆ ಕಾಫಿ ಡೇ ಸಂಸ್ಥೆ ಉನ್ನತಾಧಿಕಾರಿಗಳ ಸಭೆಯಲ್ಲಿ ತೀರ್ಮಾನ
Jul 31, 2019, 1:51 pm IST
ಸಿದ್ಧಾರ್ಥ ಅಂತಿಮ ದರ್ಶನಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಿಕ್ಕಮಗಳೂರು ಕಡೆ ಹೊರಟಿದ್ದಾರೆ.
Jul 31, 2019, 1:44 pm IST
ಇದೀಗ ಸಿದ್ಧಾರ್ಥ ಅವರ ಪಾರ್ಥಿವ ಶರೀರ ಮೂಡಿಗೆರೆಯನ್ನು ತಲುಪಿದೆ, 2.30ರ ಹೊತ್ತಿಗೆ ಕಾಫಿ ಕ್ಯೂರಿಂಗ್ಗೆ ತಲುಪಲಿದೆ
Jul 31, 2019, 1:31 pm IST
ಸಿದ್ಧಾರ್ಥ ಚಿತೆಗೆ ಶ್ರೀಗಂಧ, ಮಾವು, ಹಲಸು ಸೇರಿ ವಿವಿಧ ಮರಗಳ ಬಳಕೆ ಮಾಡಲಾಗುತ್ತಿದೆ, ಸಂಜೆ 6-7 ಗಂಟೆ ವೇಳೆಗೆ ಶವ ಸಂಸ್ಕಾರ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Jul 31, 2019, 1:18 pm IST
ಸಿದ್ಧಾರ್ಥ ಪೋನ್ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದರು ಎನ್ನುವ ಮಾಹಿತಿ ಪಡೆದ ಪೊಲೀಸರು ಅವರ ಕಾಲ್ ಲಿಸ್ಟ್ ಪರಿಶೀಲನೆ ನಡೆಸುತ್ತಿದ್ದಾರೆ.
Jul 31, 2019, 1:10 pm IST
ಆತ್ಮಹತ್ಯೆ ಮಾಡಿಕೊಂಡು 36 ತಾಸು ಕಳೆದಿದ್ದರೂ ಮುಖದಲ್ಲಿ ರಕ್ತ ಸೋರಿಕೆ ಕುರಿತು ಪೊಲೀಸರ ತನಿಖೆ
Jul 31, 2019, 1:03 pm IST
ಚಾರ್ಮಾಡಿ ಘಾಟ್ ಬಳಿ ಹಳ್ಳಿಯಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿ ಸಿದ್ಧಾರ್ಥ ಅವರ ಅಂತಿಮ ದರ್ಶನಕ್ಕೆ ಅವಕಾಶಮಾಡಿಕೊಟ್ಟಿದ್ದಾರೆ.
Jul 31, 2019, 12:57 pm IST
ಸಿದ್ಧಾರ್ಥ ಅವರ ಟಿ ಶರ್ಟ್ ಕಾಣೆಯಾಗಿರುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನ ಎಚ್ಎಎಲ್ನಿಂದ ಎಸ್ಎಂ ಕೃಷ್ಣ ಕುಟುಂಬಸ್ಥರು ಹೆಲಿಕಾಪ್ಟರ್ ಮೂಲಕ ತೆರಳಿದ್ದಾರೆ.
Jul 31, 2019, 12:44 pm IST
ಸಿಸಿಡಿಯ ಭವಿಷ್ಯದ ಬಗ್ಗೆ ನಡೆಸಿದ್ದ ನಿರ್ದೇಶಕರ ಸಭೆ ಅಂತ್ಯಗೊಂಡಿದೆ, ಕೆಫೆ ಕಾಫಿ ಡೇಯನ್ನು ಮುಚ್ಚದಿರಲು ನಿರ್ದೇಶಕರು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Jul 31, 2019, 12:35 pm IST
ಮೇ ತಿಂಗಳಲ್ಲಿ ಷೇರುದಾರರ ಬಳಿಕ ಕಾನ್ಫರೆನ್ಸ್ ಕಾಲ್ನಲ್ಲಿ ಸಿದ್ಧಾರ್ಥ ಮಾತನಾಡಿದ್ದರು, ಒಂದು ದಿನ ನಮ್ಮದೇ ಆದ ಕಾಫಿ ಸಾಮ್ರಾಜ್ಯವನ್ನು ಕಟ್ಟುತ್ತೇನೆ ಎನ್ನುವ ಮಾತನಾಡಿದ್ದರು.
Jul 31, 2019, 12:33 pm IST
ಮೈಸೂರಿನ ದೇವರಾಜ ಅರಸು ವೃತ್ತದಲ್ಲಿ ಮೈಸೂರಿನ ಸಾರ್ವಜನಿಕರಿಂದ ಸಿದ್ಧಾರ್ಥ ಅವರಿಗೆ ಶ್ರದ್ಧಾಂಜಲಿ
Jul 31, 2019, 12:32 pm IST
ಕಾಫಿ ಡೇ ಷೇರು ಶೇ. 20 ರಷ್ಟು ಕುಸಿತ, ಮಂಗಳವಾರ ಶೇ. 18 ರಷ್ಟು ಕುಸಿತ ಕಂಡಿತ್ತು, ಒಟ್ಟು 800 ಕೋಟಿಗೂ ಅಧಿಕ ನಷ್ಟವಾಗಿತ್ತು.
Jul 31, 2019, 12:27 pm IST
ಐಡಿ ಕಾರ್ಡ್, ಹಣ, ಸಿದ್ಧಾರ್ಥ್ ಜೇಬಿನಲ್ಲಿ ಪತ್ತೆಯಾಗಿದೆ, ಆದರೆ ಶರ್ಟ್ ಮಾತ್ರ ಇರಲಿಲ್ಲ.ಮೊಬೈಲ್ನಿಂದ ಮಾತನಾಡುತ್ತಾ ಕಾರಿನಿಂದ ಕೆಳಗಿಳಿದಿದ್ದರು.
READ MORE
8:22 AM, 31 Jul
ಮೃತ ದೇಹ ಪರೀಕ್ಷಿಸಿದ್ದೇನೆ. ಕುಟುಂಬಸ್ಥರು ಫೋಟೋ ನೋಡಿ ಸಿದ್ದಾರ್ಥ ಎಂದು ದೃಡಪಡಿಸಿದ್ದಾರೆ. ಸಂಬಂಧಿಕರು ಬಂದು ಮೃತದೇಹ ದೃಡಪಡಿಸಿದ್ದಾರೆ, ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ, ನಂತರ ಸಂಬಂಧಿಕರ ತೀರ್ಮಾನದಂತೆ ಮೃತ ದೇಹ ರವಾನೆಯಾಗಲಿದೆ. 11 ಗಂಟೆಗೆ ಸುಮಾರಿಗೆ ಮೃತದೇಹ ರವಾನೆ ಮಾಡುತ್ತೇವೆ. ಚಿಕ್ಕಮಗಳೂರಿನ ಚೇತನಹಳ್ಳಿಗೆ ರವಾನೆಗೆ ತೀರ್ಮಾನ ಕೈಗೊಳ್ಳಲಾಗಿದೆ.-ಶಾಸಕ ಯು ಟಿ ಖಾದರ್ ಹೇಳಿಕೆ
8:24 AM, 31 Jul
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಸಿದ್ಧಾರ್ಥ ನಾಪತ್ತೆಯಾಗಿದ್ದರ., ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆ ಬಳಿ ಕಣ್ಮರೆಯಾಗಿದ್ದರು. ಮಂಗಳವಾರ ಬೆಳಗ್ಗಿನಿಂದ ರಾತ್ರಿ ವರೆಗೂ ಹುಡುಕಾಟ ನಡೆಸಲಾಗಿತ್ತು.ನೇತ್ರಾವತಿ ಸಮುದ್ರ ಸೇರುವ ಮೊದಲೇ ದಂಡೆಯಲ್ಲಿ ಶವ ಪತ್ತೆಯಾಗಿದೆ.
8:25 AM, 31 Jul
ಚಿಕ್ಕಮಗಳೂರು, ಹಾಸನ, ಮಡೀಕೆರಿಯ ಕಾರ್ಮಿಕರಿಗೆ ರಜೆ ಘೋಷಣೆ ಮಾಡಿದ ಬೆಳೆಗಾರರ ಸಂಘ, ಮೂರು ಜಿಲ್ಲೆಯಲ್ಲೂ ಕಾಫಿ ಕೆಲಸ ಸಂಪೂರ್ಣ ಸ್ಥಬ್ಧ, ಕೆಜಿಎಫ್ ಅಧ್ಯಕ್ಷ ತೀರ್ಥ ಮಲ್ಲೇಶ್ ಸ್ಪಷ್ಟನೆ
8:28 AM, 31 Jul
ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಿಧನ ಹಿನ್ನಲೆ, ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲು ನಿರ್ಧಾರ, ಕಾಫಿ ಬೆಳೆಗಾರರ ಒಕ್ಕೂಟದಿಂದ ತುರ್ತು ಸಭೆ ಕರೆದಿದ್ದಾರೆ. ಚಿಕ್ಕಮಗಳೂರು ಕ್ಲಬ್ ನಲ್ಲಿ ತುರ್ತು ಸಭೆ ನಡೆಸುತ್ತಿರುವ ಕಾಫಿ ಬೆಳೆಗಾರರ ಒಕ್ಕೂಟ, ಕಾಫಿ ಮಾರುಕಟ್ಟೆಯ ಎಲ್ಲಾ ಚಟುವಟಿಕೆಗಳು ಬಂದ್.
8:34 AM, 31 Jul
ಎರಡು ಕಡೆ ಪಾರ್ಥಿಕ ಶರೀರ ದರ್ಶನಕ್ಕೆ ವ್ಯವಸ್ಥೆ, ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ, ಎಬಿಸಿ ಕಾಫಿ ಕ್ಯೂರಿಂಗ್,ಚೇತನಹಳ್ಳಿ ಎಸ್ಟೇಟ್ನಲ್ಲಿ ಅಂತಿಮ ದರ್ಶನ,ವೆನ್ಲಾಕ್ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
8:35 AM, 31 Jul
ಸಿದ್ದಾರ್ಥ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ ಯಾರೂ ನಂಬಲು ತಯಾರಿರಲಿಲ್ಲ. ಸ್ಥಳೀಯ ಮೀನುಗಾರರು ಬುಧವಾರ ಬೆಳಗ್ಗೆ ನದಿ ನೀರಿನಲ್ಲಿ ಮೀನಿಗಾಗಿ ಬಲೆ ಬೀಸಲು ಮುಂದಾದಾಗ, ಶವ ಪತ್ತೆಯಾಗಿದೆ, ತಕ್ಷಣವೇ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ ತಿಳಿಸಿದ್ದಾರೆ.
8:42 AM, 31 Jul
ವೆನ್ಲಾಕ್ ಆಸ್ಪತ್ರೆಯಿಂದ ರಸ್ತೆ ಮೂಲಕವೇ ಚಿಕ್ಕಮಗಳೂರಿಗೆ ಸಿದ್ಧಾರ್ಥ ಮೃತದೇಹ ರವಾನೆಯಾಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
8:50 AM, 31 Jul
ಮರಣೋತ್ತರ ಪರೀಕ್ಷೆ ಆರಂಭವಾಗಿದೆ, ಇನ್ನೂ ಅರ್ಧಗಂಟೆ ಬೇಕು ಎಂದು ವೈದ್ಯರು ಹೇಳಿದ್ದಾರೆ. ಬಳಿಕ ಇಲ್ಲಿಯೇ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಚಿಕ್ಕಮಗಳೂರಿಗೆ ಮೃತದೇಹ ರವಾನೆ ಮಾಡಲಾಗುತ್ತದೆ- ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯ
8:51 AM, 31 Jul
ಸಿದ್ಧಾರ್ಥ ಅವರ ಸಾವು ನಮಗೆ ಆಘಾತ, ನೋವನ್ನು ತಂದಿದೆ, ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
8:56 AM, 31 Jul
ಸಿದ್ಧಾರ್ಥ ಅವರ ದಾರುಣ ಸಾವಿಗೆ ಸೂಕ್ತ ತನಿಖೆ ನಡೆಸಬೇಕು, ಅವರನ್ನು ನಾನು 35 ವರ್ಷಗಳಿಂದ ಬಲ್ಲೆ, ಅವರ ಸಾವು ಆಘಾತ ತಂದಿದೆ- ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ
9:10 AM, 31 Jul
ಮಧ್ಯಾಹ್ನ 3.30ರ ನಂತರ ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ ಅವರ ಅಂತ್ಯಕ್ರಿಯೆ
9:12 AM, 31 Jul
ಎಷ್ಟು ಸಾಲ ಮಾಡಿದದ್ದಾರೆ, ಅದಕ್ಕಿಂತ ಆಸ್ತಿ ಅವರ ಬಳಿ ಇತ್ತು. ಆ ಸಂದರ್ಭದಲ್ಲಿ ಅವರ ಜೊತೆ ಯಾರಾದರೂ ಒಬ್ಬರು ಇದ್ದಿದ್ದರೂ ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ. ಮಳೆ ವಾತಾವರಣ, ಸಮುದ್ರಕ್ಕೆ ಹೋಗುತ್ತಿತ್ತು ನೀರು,ಮನಸ್ಸು ಕೂಡ ಹಾಳಾಗಿದ್ದ ಕಾರಣ ಇಂತಹ ಘಟನೆ ನಡಡೆದು ಹೋಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ- ಸಿಎಂ ಯಡಿಯೂರಪ್ಪ
9:13 AM, 31 Jul
15-20 ನಿಮಿಷ ವೆನ್ಲಾಕ್ ಹೊರಭಾಗದಲ್ಲಿ ಸಿದ್ಧಾರ್ಥ ಅವರ ಮೃತದೇಹ ಇರಿಸಲಾಗುತ್ತದೆ. ಬಳಿಕ ಚಿಕ್ಕಮಗಳೂರಿನತ್ತ ಮೃತದೇಹ.ಬಿ.ಸಿ.ರೋಡ್, ಉಜಿರೆ ಬೆಳ್ತಂಗಡಿ,ಚಾರ್ಮಾಡಿ, ಮೂಡಿಗೆರೆ ಮೂಲಕ ಮೃತದೇಹ ಚಿಕ್ಕಮಗಳೂರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ.
9:22 AM, 31 Jul
ಚೇತನಹಳ್ಳಿ ಎಸ್ಟೇಟ್ನಲ್ಲಿ ಸಿದ್ಧಾರ್ಥ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
9:25 AM, 31 Jul
ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ, 25 ವರ್ಷಗಳ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ- ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ
9:37 AM, 31 Jul
ಸಿದ್ಧಾರ್ಥ ನಿಧನದಿಂದ ಕರ್ನಾಟಕ ಉದ್ಯಮಕ್ಕೇ ತುಂಬಲಾರದ ನಷ್ಟ ಉಂಟಾಗಿದೆ,ಈ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ನೀಡಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ
9:45 AM, 31 Jul
ಆಂಬುಲೆನ್ಸ್ ಬದಲಾವಣೆಗೆ ನಿರ್ಧಾರಿಸಲಾಗಿದೆ. ಎಸಿ ಆಂಬುಲೆನ್ಸ್ ಬದಲಾಯಿಸಲು ವೈದ್ಯರ ಸೂಚನೆ, ಫ್ರೀಜರ್ ಇರುವ ಆಂಬುಲೆನ್ಸ್ ಸೂಚಿಸಿದ ವೈದ್ಯರು .ಮಂಗಳೂರಿಂದ ಚಿಕ್ಕಮಗಳೂರು ರವಾನೆಯಾಗಲಿರುವ ಸಿದ್ಧಾರ್ಥ್ ಮೃತದೇಹ, ಮೂರು ದಿನ ಮೃತದೇಹ ನೀರಲ್ಲಿದ್ದ ಕಾರಣ, ಮರಣೋತ್ತರ ಪರೀಕ್ಷೆ ನಂತರ ಮತ್ತಷ್ಟು ಕ್ಷೀಣವಾಗುತ್ತದೆ, ಸಂಜೆ ತನಕ ಅಂತಿಮ ದರ್ಶನ ಇದೆ, ಮೃತದೇಹ ಕೊಳೆಯದಂತೆ ಇಡಲು ಫ್ರೀಜರ್ ವ್ಯವಸ್ಥೆ ಮಾಡಲಾಗುತ್ತಿದೆ.
9:49 AM, 31 Jul
ವಿಜಿ ಸಿದ್ಧಾರ್ಥ ಅವರ ದೇಹ 36 ಗಂಟೆಗಳ ಕಾಲ ನೀರಿನಲ್ಲಿದ್ದ ಕಾರಣ ದೇಹವು ಕೊಳೆಯಲು ಆರಂಭಿಸುತ್ತದೆ ಹಾಗಾಗಿ ಅವರ ದೇಹವನ್ನು ಮಣ್ಣು ಮಾಡುವುದಿಲ್ಲ, ದಹನ ಕ್ರಿಯೆ ನೆರವೇರಿಸಲಾಗುತ್ತದೆ ಎಂಬುದು ವೈದ್ಯರ ಮಾಹಿತಿ.
9:58 AM, 31 Jul
ಮೃತದೇಹದಲ್ಲಿ ಪ್ಯಾಂಟ್ ಮಾತ್ರ ಇದೆ , ಸಿದ್ಧಾರ್ಥ ಧರಿಸಿದ್ದ ಅಂಗಿ ನಾಪತ್ತೆ, ನೀರಿನ ಸೆಳೆತಕ್ಕೆ ಜಾರಿ ಹೋಗಿರಬಹುದೇ. ಸಾಧ್ಯತೆ ಕಡಿಮೆ ಎನ್ನುತ್ತಿವೆ ಮೂಲಗಳು, ಅಂಗಿ ಕಳಚಿ ನದಿಗೆ ಹಾರಿದ್ದಾರಾ ಸಿದ್ದಾರ್ಥ ಅಷ್ಟು ಸಿದ್ಧತೆ ಮಾಡಿಕೊಂಡಿದ್ರಾ ಸಿದ್ಧಾರ್ಥ , ಹೀಗೆ ಸಿದ್ಧಾರ್ಥ ಅವರ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ.
10:00 AM, 31 Jul
ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಸಾವಿನ ಹಿನ್ನೆಲೆ, ತನಿಖೆ ನಡೆಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಪ್ರತಿಭಟನೆಗೆ ಕಾಂಗ್ರೆಸ್, ಜೆಡಿಎಸ್ ನಿರ್ಧಾರ.
10:03 AM, 31 Jul
ಎಸ್ಎಂ ಕೃಷ್ಣ ಅವರ ಕುಟುಂಬಸ್ಥರು ಚಿಕ್ಕಮಗಳೂರಿಗೆ ಕಾರಿನ ಮೂಲಕ ತೆರಳುತ್ತಿದ್ದಾರೆ, ಚಿಕ್ಕಮಗಲೂರಿನಲ್ಲಿರುವ ಚೇತನ ಎಸ್ಟೇಟ್ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗುತ್ತಿದೆ. ಸಿದ್ಧಾರ್ಥ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
10:15 AM, 31 Jul
ಮಲ್ಯ ಆಸ್ಪತ್ರೆ ಬಳಿ ಸಿದ್ಧಾರ್ಥ ಕಚೇರಿಯಲ್ಲಿ ಪೊಲೀಸರ ಪರಿಶೀಲನೆ, ಕಾಫಿ ಡೇ ಮುಖ್ಯ ಕಚೇರಿಯಲ್ಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅವರ ಸಾವಿಗೆ ಏನಾದರೂ ಕಾರಣಗಳು ಸಿಗಬಹುದಾ ಎಂದು ಪತ್ತೆ ಮಾಡುತ್ತಿದ್ದಾರೆ.
10:21 AM, 31 Jul
ಮೀನು ಹಿಡಿಯಲು ಮೂವರು ದೋಣಿಯಲ್ಲಿ ಬೆಳಗ್ಗೆ 6 ಗಂಟೆ ಆಸುಪಾಸಿನಲ್ಲಿ ಹೋಗುತ್ತಿದ್ದೆವು. ನದಿ ಮಧ್ಯದಲ್ಲಿ ದೇಹವೊಂದು ತೇಲುತ್ತಿರುವುದು ಕಂಡು ಬಂತು ಬಳಿಕ ನಿನ್ನೆಯಿಂದ ಸಿದ್ಧಾರ್ಥ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದುದರಿಂದ ಅವರದ್ದೇ ದೇಹವಿರಬಹುದು ಅಂದುಕೊಂಡೆವು.-ರಿತೇಶ್, ಮೀನುಗಾರ
10:29 AM, 31 Jul
ಹೆಲಿಕಾಪ್ಟರ್ ಮೂಲಕ ಎಸ್ಎಂ ಕೃಷ್ಣ ಕುಟುಂಬ ಚಿಕ್ಕಮಗಳೂರಿಗೆ ತೆರಳಲಿದ್ದಾರೆ.
10:33 AM, 31 Jul
ಸಿದ್ಧಾರ್ಥ ಅವರು ಯಾರ ಮನಸ್ಸಿಗೆ ನೋವು ಮಾಡಿದವರಲ್ಲ, ಜನರ ಒಳಿತಿಗಾಗಿ ಎಂದೂ ಯೋಚನೆ ಮಾಡಿದ್ದವರು, ಉತ್ತಮ ಉದ್ಯಮಿಯನ್ನು ಕರ್ನಾಟಕ ಕಳೆದುಕೊಂಡಿದೆ. ಸಿದ್ಧಾರ್ಥ್ ಅವರು ನಮ್ಮ ರಾಜ್ಯದ ಆಸ್ತಿ, ಯಾವ ಕನ್ನಡಿಗನೂ ಇಷ್ಟು ಜನರಿಗೆ ಕೆಲಸ ಕೊಟ್ಟು , ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ, ಆದರೆ ಅವರು ಕೊನೆಯುಸಿರೆಳೆದಿರುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಆದರೂ ನಂಬಲೇಬೇಕು- ಡಿಕೆ ಶಿವಕುಮಾರ್
10:39 AM, 31 Jul
ಸಿದ್ಧಾರ್ಥ ಅವರದು ಸರಳ ವ್ಯಕ್ತಿತ್ವ,ಅಂತಹ ವ್ಯಕ್ತಿ ಇನ್ನು ಸಿಗಲು ಸಾಧ್ಯವಿಲ್ಲ, ಸಣ್ಣ ಬಾಲಕನಾದರೂ ಕೂಡ ಅವರಿಗೆ ಗೌರವ ಕೊಟ್ಟು ಎದ್ದು ನಿಂತು ಮಾತನಾಡಿಸುತ್ತಿದ್ದ ವ್ಯಕ್ತಿ ಅವರು, ದೇಶದ ಬೆಳವಣಿಗೆ ಬಗ್ಗೆ ಸಾಕಷ್ಟು ಕನಸು ಹೊತ್ತವರಾಗಿದ್ದರು. ಶಾಸಕ ಟಿ.ಡಿ. ರಾಜೇಗೌಡ
10:46 AM, 31 Jul
ಸಿದ್ಧಾರ್ಥ ಅವರ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕೆಲವೇ ಕ್ಷಣಗಳಲ್ಲಿ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಅಂತಿಮ ದರ್ಶನಕ್ಕಿಡಲಾಗುತ್ತದೆ. ಬಳಿಕ ಚಿಕ್ಕಮಗಳೂರಿಗೆ ರವಾನಿಸಲಾಗುತ್ತದೆ.
10:55 AM, 31 Jul
ಮೃತದೇಹ ಆಂಬುಲೆನ್ಸ್ ಗೆ ವರ್ಗಾವಣೆ, ಮಂಗಳೂರಿನಿಂದ ಹೊರಟ ಸಿದ್ಧಾರ್ಥ ಮೃತದೇಹ ಹೊತ್ತ ವಾಹನ, ಸಾರ್ವಜನಿಕ ದರ್ಶನ ದ ಬಳಿಕ ಚಿಕ್ಕಮಂಗಳೂರಿಗೆ ಹೊರಟ ಆಂಬುಲೆನ್ಸ್
11:04 AM, 31 Jul
ಮಧ್ಯಾಹ್ನ 2 ಗಂಟೆ ವೇಳೆಗೆ ಚಿಕ್ಕಮಗಳೂರಿಗೆ ತಲುಪಬಹುದು, ಅಲ್ಲಿಂದ ಮೂಡಿಗೆರೆ ಮಾರ್ಗವಾಗಿ ಎಸಿಬಿ ಕಾಫಿ ಕ್ಯೂರಿಂಗ್ ಗೆ ರವಾನಿಸಲಾಗುತ್ತದೆ. ಕೊನೆಗೆ 3 ಗಂಟೆ ಬಳಿಕ ಚೇತನ ಎಸ್ಟೇಟ್ಗೆ ಪಾರ್ಥಿವ ಶರೀರ ಕರೆದೊಯ್ಯಲಾಗುತ್ತದೆ. ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.
11:13 AM, 31 Jul
ಫ್ರೀಜರ್ ಆಂಬ್ಯುಲೆನ್ಸ್ನಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತಿದೆ. ಚಿಕ್ಕಮಗಳೂರಿನತ್ತ ಆಂಬ್ಯುಲೆನ್ಸ್ ಹೊರಟಿದೆ.