ಕರಾವಳಿಯಲ್ಲಿ ಹಸೆಮಣೆ ಏರುವ ಮುನ್ನ ಮತ ಚಲಾಯಿಸಿದ ವಧುಗಳು
ಮಂಗಳೂರು, ಏಪ್ರಿಲ್ 18:ಲೋಕಸಭಾ ಚುನಾವಣೆಯ ಮಹಾ ಮತದಾನ ಇಂದು ನಡೆಯುತ್ತಿದೆ. ಈ ನಡುವೆ ಹಲವಾರು ಶುಭ ಕಾರ್ಯಗಳು, ಮದುವೆಗಳು ನಡೆಯುತ್ತಿದ್ದು, ನವ ವಧು-ವರರು ತಮ್ಮ ಹಕ್ಕು ಚಲಾಯಿಸಿ ಹಸೆಮಣೆ ಏರಿರುವ ಹಲವಾರು ಪ್ರಸಂಗಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ.
ನವ ವಧು ಮದುವೆ ಮಂಟಪಕ್ಕೆ ತೆರಳುವ ಮುನ್ನ ಜವಾಬ್ದಾರಿಯುತವಾಗಿ ತನ್ನ ಹಕ್ಕನ್ನು ಚಲಾಯಿಸಿ ಮದುವೆ ಮಂಟಪಕ್ಕೆ ತೆರಳಿದ ಪ್ರಸಂಗ ವಿಟ್ಲಾದಲ್ಲಿ ಬೆಳಕಿಗೆ ಬಂದಿದ್ದು, ಮದುವೆ ಮಂಟಪಕ್ಕೆ ತೆರಳುವ ಆತುರದಲ್ಲಿದ್ದರೂ ನವ ವಧು ಶೃತಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ತೆರಳಿದರು.

ಪುತ್ತೂರಿನಲ್ಲಿಯೂ ಸಹ ಮೂವರು ನವ ವಧುಗಳು ಮತ ಚಲಾವಣೆ ಮಾಡಿದ್ದಾರೆ.ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಅಕ್ಷತಾ, ಅಶ್ವಿನಿ ಮತ್ತು ಹೇಮಲತಾ ತಮ್ಮ ಮತ ಚಲಾಯಿಸಿದರು. ದಿಬ್ಬಣ ದೊಂದಿಗೆ ಬಂದ ನವ ವಧು ವರರು ಮತ ಚಲಾಯಿಸಿದ ಬಳಿಕವೇ ಮದುವೆ ಮಂಟಪಕ್ಕೆ ತೆರಳಿದರು.














Click it and Unblock the Notifications