ದಕ್ಷಿಣ ಕನ್ನಡ ಮೂಲದ ಪರ್ವತಾರೋಹಿ ಅಮೇರಿಕಾದಲ್ಲಿ ಸಾವು
ಮಂಗಳೂರು ಆಗಸ್ಟ್ 27 : ಅಮೆರಿಕದಲ್ಲಿ ದಕ್ಷಿಣ ಕನ್ನಡ ಮೂಲದ ಪರ್ವತಾರೋಹಿಯೊಬ್ಬರು ಮೃತಪಟ್ಟಿದ್ದಾರೆ. ಪರ್ವತಾರೋಹಣ ಮಾಡುವಾಗ ಈ ಘಟನೆ ನಡೆದಿರಬಹುದು ಎಂದು ತಿಳಿದುಬಂದಿದೆ.
ಅಮೆರಿಕದಲ್ಲಿ ನೆಲೆಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಂಜೆ ನಿವಾಸಿ ಚೈತನ್ಯ ಸಾಠೆ (36) ಮೃತಪಟ್ಟವರು. ಪರ್ವತ ಏರುವ ಸಂದರ್ಭದಲ್ಲಿ ಕಾಲುಜಾರಿ ಪ್ರಪಾತಕ್ಕೆ ಬಿದ್ದಿದ್ದು, ಮೃತಪಟ್ಟಿದ್ದಾರೆ.
ಶನಿವಾರ ಮೌಂಟ್ ಹುಡ್ ಲೋವರ್ ಜಾರ್ಜ್ನ ಟೆರ್ರಾಬಾನ್ ವ್ಯಾಪ್ತಿಯ ಸ್ಮಿತ್ ರಾಕ್ ಸ್ಟೇಟ್ ಪಾರ್ಕ್ ಎಂಬಲ್ಲಿ ಸುಮಾರು 100 ಅಡಿ ಆಳದ ಪ್ರಪಾತಕ್ಕೆ ಚೈತನ್ಯ ಬಿದ್ದಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚೈತನ್ಯ ತಂದೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವಿಜ್ಞಾನಿಯಾಗಿರುವ ರಮೇಶ್ ಸಾಠೆ ಅವರ ಪುತ್ರ ಚೈತನ್ಯ ಸಾಠೆ ಪೋರ್ಟ್ ಲ್ಯಾಂಡ್ ಮೂಲದ ಮಾಝಾಮಾಸ್ ಎಂಬ ಪರ್ವತಾರೋಹಿಗಳ ಸಂಘಟನೆಯಲ್ಲಿದ್ದರು. ಇದುವರೆಗೂ ಅನೇಕ ಸಾಹಸಮಯ ಚಾರಣಗಳಲ್ಲಿ ಚೈತನ್ಯ ಪಾಲ್ಗೊಂಡಿದ್ದರು.












Click it and Unblock the Notifications