ಕಾಶ್ಮೀರದಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಬಂಟ್ವಾಳದ ವ್ರತಧಾರಿ
ಕಾಶ್ಮೀರದ ವೈಷ್ಣೋದೇವಿ ಕ್ಷೇತ್ರದಿಂದ ಶಬರಿಮಲೆಗೆ ಪಾದಯಾತ್ರೆ ಹೊರಟಿರುವ ಬಂಟ್ವಾಳ ಮೂಲದ ನವೀನ್ ಎನ್ನುವ ಅಯ್ಯಪ್ಪ ವ್ರತಧಾರಿ ಮಂಗಳೂರಿನ ತೊಕ್ಕೊಟ್ಟಿಗೆ ಬಂದು ತಲುಪಿದ್ದಾರೆ.
ಮಂಗಳೂರು, ಜನವರಿ. 04 : ಬಂಟ್ವಾಳ ತಾಲೂಕಿನ ಕುರ್ನಾಡುವಿನ ನವೀನ್ ಎನ್ನುವ ಅಯ್ಯಪ್ಪ ಸ್ವಾಮಿ ವ್ರತಧಾರಿ ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ವಿವಿಧ ಪುಣ್ಯ ಕ್ಷೇತ್ರಗಳಿಂದ ಶಬರಿಮಲೆಗೆ ಪಾದಾಯಾತ್ರೆಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ.
ಶಿರಡಿ ಸಾಯಿಬಾಬಾ, ಕೊಲ್ಲೂರು ಮೂಕಾಂಬಿಕೆ, ತಿರುಪತಿ, ಸೇರಿದಂತೆ ನಾನಾ ಕಡೆಗಳಿಂದ ನಿರಂತರ 10 ವರ್ಷ ಶಬರಿಮಲೆಗೆ ಪಾದಾಯಾತ್ರೆ ನಡೆಸಿ ಅಯ್ಯಪ್ಪನ ದರ್ಶನ ಪಡೆಯುತ್ತ ಬಂದಿದ್ದಾರೆ.
ಈ ಬಾರಿ ಅಕ್ಟೋಬರ್ 29ರಿಂದ ಜಮ್ಮು ಕಾಶ್ಮೀರದ ವೈಷ್ಣೋದೇವಿಯಿಂದ ಶಬರಿಮಲೆ ಯಾತ್ರೆ ಕೈಗೊಂಡು ಸುಮಾರು 3,500 ಕಿ.ಮೀ ದಾರಿಯನ್ನು ಪಾದಾಯಾತ್ರೆ ಮುಖಾಂತರ ಕ್ರಮಿಸಲು ಮುಂದಾಗಿರುವ ಇವರು ಮಂಗಳವಾರದಂದು ತೊಕ್ಕೊಟ್ಟಿಗೆ ಬಂದು ತಲುಪಿದರು.

ಈ ವೇಳೆ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ಮಂದಿರದ ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಅನೇಕರು ನವೀನ್ ಅವರ ಆಶೀರ್ವಾದ ಪಡೆದರು. ಇನ್ನು ಗುರು ಸ್ವಾಮಿಗಳಾದ ವಿಶ್ವನಾಥ ಕಾಯರ್ ಪಳಿಕೆ ಅವರು ನವೀನ್ ಅವರ ಪಾದಪೂಜೆ ನೆರವೇರಿಸಿ ಮಂಗಳಾರತಿ ಎತ್ತಿದರು.
ನೋಟ್ ಬ್ಯಾನ್ ಸಂಕಷ್ಟದಲ್ಲಿ ನೆರವಾದರು: ನವೀನ್ ಅವರು ಕಳೆದ ಅಕ್ಟೋಬರ್ ತಿಂಗಳ 29ನೇ ತಾರೀಖಿನಂದು ವೈಷ್ಣೋದೇವಿ ಕ್ಷೇತ್ರದಿಂದ ಪಾದಾಯಾತ್ರೆ ಹೊರಟಿದ್ದು, ಯಾತ್ರೆಯ ಸಂಧರ್ಭ ಕೇಂದ್ರದ ನೋಟ್ ಬ್ಯಾನ್ ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದರು.
ದಾರಿಯಲ್ಲಿ ಸಾಗುತ್ತಿದ್ದ ವೇಳೆ ದೇವಸ್ಥಾನದ ಅರ್ಚಕರೊಬ್ಬರು ನವೀನ್ ಅವರ ಸಂಕಷ್ಟವನ್ನು ತಿಳಿದು ಎರಡು ಸಾವಿರ ರೂಪಾಯಿಯ ಚಿಲ್ಲರೆಯನ್ನು ನೀಡಿ ಸಹಕರಿಸಿದ್ದರು.
ಹಾಗೆ ಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಐನೂರು ರೂಪಾಯಿಗಳ ಚಿಲ್ಲರೆಯನ್ನು ಪಡೆಯುತ್ತಾ ಸಾಗಿದರು. ಸಮಸ್ಯೆಗಳೆಲ್ಲವೂ ಅಯ್ಯಪ್ಪ ಸ್ವಾಮಿ ಮತ್ತು ಗುರುಸ್ವಾಮಿಗಳ ದಯೆಯಿಂದ ಎಲ್ಲಾ ತೊಂದರೆಗಳು ತನ್ನಷ್ಟಕ್ಕೇ ದೂರವಾದವು ಎಂದರು.
ದೆಹಲಿಯ ಯೋಧ ತಿಲಕ್ ಎಂಬುವರು ತನಗೆ ಆರ್ಥಿಕವಾಗಿ ತುಂಬಾನೆ ಸಹಾಯ ಮಾಡಿ ಯಾತ್ರೆ ಯುದ್ಧಕ್ಕೂ ಫೋನ್ ಮೂಲಕ ಕುಶಲೋಪರಿ ವಿಚಾರಿಸುತ್ತಾ ಇದ್ದಾರೆ ಎಂದು ಯೋಧ ತಿಲಕ್ ಅವರನ್ನು ನೆನೆದರು.

ಅಪರಿಚಿತರು ನೂರರ 6 ನೋಟು ಕೊಟ್ಟರು: ವೈಷ್ಣೋದೇವಿ ಕ್ಷೇತ್ರದಿಂದ ಬೆಳಿಗಿನ ಜಾವ 5 ಗಂಟೆ ವೇಳೆ ಶಬರಿಮಲೆಗೆ ಪಾದಾಯಾತ್ರೆ ಹೊರಟ ಅಯ್ಯಪ್ಪ ಸ್ವಾಮಿ ವ್ರತದಾರಿ ನವೀನ್ ಕೇವಲ 1 ಕಿ.ಮೀ ಕ್ರಮಿಸಿದಾಗಲೇ ಇಬ್ಬರು ಸೈಕಲ್ ಸವಾರರು ಇವರನ್ನು ತಡೆದರು.
ಇದರಿಂದ ಭಯಗೊಂಡಿದ್ದ ನವೀನ್ ಸುಮ್ಮನೆ ನಿಂತು ಬಿಟ್ಟರಂತೆ.ಆಗ ಆ ಅಪರಿಚಿತ ವ್ಯಕ್ತಿ ಹತ್ತಿರಕ್ಕೆ ಬಂದು ನೂರರ ಆರು ನೋಟುಗಳನ್ನು ಕೈಯಲಿಟ್ಟು ಪಕ್ಕದಲ್ಲೇ ನನ್ನ ಕ್ಷೇತ್ರವಿದೆ ಸಂದರ್ಶಿಸು ಎಂದು ಹೇಳಿ ದಾರಿಯಲ್ಲೇ ಮುಂದೆ ಸಾಗಿದರಂತೆ.
ಕೂಡಲೇ ಅವರನ್ನು ಮತ್ತೆ ನೋಡಲೆಂದು ಅತೀ ಉತ್ಸಾಹದಿಂದ ಅವರತ್ತ ಟಾರ್ಚ್ ಹಾಕಿದೆ. ಆದರೆ ಆ ವ್ಯಕ್ತಿ ಕಣ್ಮರೆಯಾಗಿದ್ದರು. ಎಷ್ಟು ಹುಡುಕಿದರೂ ಕಣ್ಣಿಗೆ ಕಾಣಲಿಲ್ಲವೆಂದು ನವೀನ್ ಭಾವೋದ್ರೇಕದಿಂದ ಹೇಳಿದರು
ಅದೊಂದು ತನ್ನ ಶಬರಿಮಲೆ ಯಾತ್ರೆಯ ಅವಿಸ್ಮರಣೀಯ ರೋಮಾಂಚನದ ಮರೆಯಲಾರದ ಕ್ಷಣ ಎಂದು ನೆನಪಿಸಿಕೊಂಡರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications