ಪುತ್ತೂರಿನಲ್ಲಿ ಬೆಕ್ಕು ಕಚ್ಚಿ ಉಪನ್ಯಾಸಕಿ ಸಾವು..!
ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ರೋಗಕ್ಕೆ ತುತ್ತಾದ ಉಪನ್ಯಾಸಕಿಯೊಬ್ಬರು ಸಾವಿಗೀಡಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮಂಗಳೂರು, ಮಾರ್ಚ್ 25: ಬೆಕ್ಕು ಕಚ್ಚಿ ಪುಷ್ಪಾವತಿ(56) ಎಂಬ ಉಪನ್ಯಾಸಕಿ ಮೃತಪಟ್ಟ ವಿಚಿತ್ರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಬಂಧು ಪುಷ್ಪಾವತಿ ಎಂಬುವವರಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಮನೆಯಲ್ಲಿ ಬೆಕ್ಕೊಂದು ಕಚ್ಚಿತ್ತು. ಈ ಬಗ್ಗೆ ಆರಂಭದಲ್ಲಿ ಪುಷ್ಪಾವತಿ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಬೆನ್ನು ನೋವಿಗೆ ಒಳಗಾಗಿ ಆಸ್ಪತ್ರೆ ಸೇರಿದ ಪುಷ್ಪಾವತಿಯವರಲ್ಲಿ ರೇಬಿಸ್ ಅಂಶಗಳು ಪತ್ತೆಯಾಗಿತ್ತು. ವರ್ತನೆಯಲ್ಲೂ ಅಸಹಜತೆ ಕಾಣಿಸಿತ್ತು.[ಮಂಗಳೂರು: ಮದುವೆಗೆ ಹೋಗುವರು ಮಸಣ ಸೇರಿದರು!]

ತಕ್ಷಣ ಬೆಂಗಳೂರಿನ ನಿಮಾನ್ಸ್ ಮತ್ತು ಅಪೊಲೊ ಆಸ್ಪತ್ರೆ ಗೆ ಸೇರಿಸಿದರೂ ಚೇತರಿಕೆ ಕಾಣದೆ ಪುಷ್ಪಾವತಿ ಮೃತಪಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಉಪ್ಪಿನಂಗಡಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪುಷ್ಪಾವತಿ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ.












Click it and Unblock the Notifications