ಕರಾವಳಿಯ ಪುಟಾಣಿ ಲಿಪಿಕಾ ಶೆಟ್ಟಿ 'ಲಿಟಲ್ ಮಿಸ್ ಏಷ್ಯಾ'
ಮಂಗಳೂರು, ಮೇ 25 : ಕುಂದಾಪುರ ತಾಲೂಕಿನ ಗೋಪಾಡಿಯ ಮೂಲದ ಪುಟಾಣಿ ಲಿಪಿಕಾ ಶೆಟ್ಟಿ 'ಫೆಸ್ಟಿವೆಲ್ ಮಾಡೆಲ್ ಆಂಡ್ ಟ್ಯಾಲೆಂಟ್' ಎಂಬ ಜಾಗತಿಕ ಸ್ಪರ್ಧೆಯಲ್ಲಿ 'ಲಿಟಲ್ ಮಿಸ್ ಏಷ್ಯಾ' ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.
ಟರ್ಕಿ ದೇಶದ ಅಂತಾಲಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಇನ್ನು ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿಪಿಕಾ, ವಿಶ್ವದ 20 ರಾಷ್ಟ್ರಗಳ ಸ್ಪರ್ಧಿಗಳ ಜತೆ ಪೈಪೋಟಿ ನಡೆಸಿ ಈ ಪ್ರಶಸ್ತಿ ಗೆದ್ದು ಎಲ್ಲರ ಗಮನಸೆಳೆದಿದ್ದಾಳೆ.

ವಿಶ್ವದ ಪ್ರಬಲ ರಾಷ್ಟ್ರಗಳಾದ ಅಲ್ಬೇನಿಯಾ, ಟರ್ಕಿ, ಯುಎಸ್ಎ, ಕೀನ್ಯಾ, ಪೋರ್ಚ್ ಗಲ್, ಬಲ್ಗೇರಿಯಾ, ಕ್ಯಾಮರೂನ್, ಉಕ್ರೇನ್, ಹಂಗೇರಿಯ, ರೋಮಾನಿಯಾ, ಜೋರ್ಜಿಯಾ, ಖಜಕಿಸ್ತಾನದ ಸ್ಪರ್ಧಿಗಳು ಲಿಪಿಕಾಳಿಗೆ ಪೈಪೋಟಿ ನೀಡಿದ್ದರು.
ಮುಂಬಯಿ ಅಂಧೇರಿಯ ಪಶ್ಚಿಮದಲ್ಲಿ ವಾಸವಾಗಿರುವ ಉದ್ಯಮಿ ವಿಠಲ ಶೆಟ್ಟಿ ಹಾಗೂ ಸಾಂಚಿ ಶೆಟ್ಟಿ ದಂಪತಿಗಳ ಪುತ್ರಿ ಲಿಪಿಕಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ಸ್ಪರ್ಧೆಯನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾಳೆ.

ಪ್ರಶಸ್ತಿ ಗೆದ್ದ ಬಗ್ಗೆ ಸಂತೋಷವನ್ನು ಹಂಚಿಕೊಂಡಿರುವ ಲಿಪಿಕಾ, "ವಿಶ್ವ ಮಟ್ಟದಲ್ಲಿ ಗೆಲುವು ದಾಖಲಿಸುವುದು ಖುಷಿ ಕೊಟ್ಟಿದೆ. ಸ್ಪರ್ಧೆಯಲ್ಲಿ ಪ್ರಬಲ ರಾಷ್ಟ್ರಗಳ ಸ್ಪರ್ಧಿಗಳು ಇದ್ದರು. ಆದರೆ, ಭಾರತದ ವೈಶಿಷ್ಟ್ಯಕುರಿತು ನಿರ್ಣಾಯಕರಿಗೆ ಮನವರಿಕೆ ಮಾಡಿಕೊಟ್ಟೆ.
ದೇಶಿಯ ಉಡುಗೆ- ತೊಡುಗೆ ಅವರಿಗೆ ಸಾಕಷ್ಟು ಇಷ್ಟವಾಯಿತು. ಕೆಲವೊಂದು ಪ್ರಶ್ನೆಗಳನ್ನು ಕೇಳಿದರು ಉತ್ತರಿಸಿದೆ. ಕೊನೆಗೆ ನಾನು ವಿಜಯಿ ಎಂದು ಅನೌನ್ಸ್ ಮಾಡಿ ಬಿಟ್ಟರು" ಎಂದು ಲಿಪಿಕಾ ಅಲ್ಲಿನ ಅನುಭವಗಳನ್ನು ಹಂಚಿಕೊಂಡಳು.

ಭಾರತದಿಂದ ಮೂರು ಪುಟಾಣಿಗಳು ಈ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಮುಖ್ಯವಾಗಿ ನಿವೇದಿತಾ ಮೊಗರಟ್ಟಿ, ಕಶೀಶ್ ಮುಖಿಯಾ ಹಾಗೂ ಲಿಪಿಕಾ ಶೆಟ್ಟಿ ಅವರು ಆಯ್ಕೆಯಾಗಿದ್ದರು.
ಆದರೆ, ಇದರಲ್ಲಿ ಲಿಪಿಕಾ ಶೆಟ್ಟಿ ಮಾತ್ರ ಫೈನಲ್ ಪ್ರವೇಶ ಪಡೆದು ಕೊನೆಗೆ ವಿಜೇತಳಾಗಿದ್ದಾಳೆ ಎಂದು ವೆಲಿಂಟೀನಾ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ವ್ಯಾಲೆಂಟೀನಾ ಮಿಶ್ರಾ ತಿಳಿಸಿದ್ದಾರೆ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ












Click it and Unblock the Notifications