Get Updates
Get notified of breaking news, exclusive insights, and must-see stories!

ಪುತ್ತೂರಿನ ಶ್ರಾವ್ಯ ಪತ್ರಕ್ಕೆ ಪ್ರಧಾನಿ ಸಚಿವಾಲಯ ಸ್ಪಂದನೆ

ಮಂಗಳೂರು, ಡಿಸೆಂಬರ್. 31 : ಈಕೆಗಿನ್ನು 13 ನೇ ವಯಸ್ಸು. ಶಾಲೆಗೆ ಹೋಗುತ್ತಾ ಆಟವಾಡಬೇಕಾದ ವಯಸ್ಸು. ಆದರೆ ಈಕೆ ಎಲ್ಲರಂತಲ್ಲ. ಶಾಲೆಗೆ ಹೋಗುತ್ತಾ ತನ್ನ ಊರಿನ ಅಭಿವೃದ್ಧಿ ಬಗ್ಗೆ ಯೋಚಿಸುವವಳು. ಈಕೆಯ ಊರಿನ ರಸ್ತೆಯೊಂದು ಅಭಿವೃದ್ಧಿ ಕಾಣದೆ ಅನೇಕ ವರ್ಷಗಳಾಗಿತ್ತು. ಇದಕ್ಕೆ ಈ ಹುಡುಗಿ ಮಾಡಿದ್ದೇನು ಗೊತ್ತಾ?

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿ ಆರ್.ಬಿ. ಸುವರ್ಣರ ಪುತ್ರಿ 8ನೇ ತರಗತಿಯಲ್ಲಿ ಓದುತ್ತಿರುವ ಶ್ರಾವ್ಯ ತನ್ನ ಊರಿನ ರಸ್ತೆ ದುರಸ್ತಿಗೊಳಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು ಭೇಷ್ ಎನ್ನಿಸಿಕೊಂಡಿದ್ದಾಳೆ.

ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಸಚಿವಾಲಯ, ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ದೂರನ್ನು ತುರ್ತಾಗಿ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ನೀಡುವಂತೆ ಆದೇಶಿಸಿದೆ.

13-year-old Puttur girle writes a letter to PM Narendra Modi, gets a response

ಪತ್ರ ಬರೆಯಲು ಕಾರಣ ಏನು?: ಪುತ್ತೂರು ನಗರದಿಂದ ಪಾಣಾಜೆ ಮೂಲಕ ಕೇರಳಕ್ಕೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯೊಂದನ್ನು ನಿರ್ಮಿಸಿ ಅನೇಕ ವರ್ಷಗಳಾಗಿತ್ತು.

ಈ ರಸ್ತೆಯು ಪುತ್ತೂರಿನಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಈ ಹಾದಿಯಲ್ಲಿ ಬರುವ ದೇವಸ್ಯದಿಂದ ಚೆಲ್ಯಡ್ಕ ತನಕ ಸುಮಾರು 4 ಕಿ.ಮೀ ರಸ್ತೆ ತೀರಾ ಹದೆಗೆಟ್ಟಿದೆ.

ಬಳ್ಳೇರಿ ರಕ್ಷಿತಾರಣ್ಯ ಪ್ರದೇಶದಲ್ಲಿ ಸಾಗುವ ಕಾರಣ ಮಳೆ ನೀರಿನ ಹರಿಯುವಿಕೆಯಿಂದ ರಸ್ತೆ ಕೆಟ್ಟು ಹೋಗಿದೆ. ಅಲ್ಲದೇ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಹೀಗಾಗಿ ರಸ್ತೆಯಲ್ಲಿನ ಟಾರು ಕಿತ್ತು ಹೋಗಿದೆ.

ಅಲ್ಲದೇ ಈ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳು ಮಾತ್ರ ಓಡಾಡುತ್ತವೆ.

ಸರ್ಕಾರಿ ಬಸ್ಸುಗಳ ಓಡಾಟ ಇಲ್ಲವೇ ಇಲ್ಲ. ಹೀಗಾಗಿ ನಗರವನ್ನ ಸಂಪರ್ಕಿಸಲು ಈ ರಸ್ತೆಯನ್ನು ದುರಸ್ಥಿ ಮಾಡಿ ಎಂದು ಗ್ರಾಮಸ್ಥರು ಕಳೆದ ವರ್ಷ ಪ್ರತಿಭಟನೆಯನ್ನು ಸಹ ಮಾಡಿದ್ದರು.

ಆದರೆ, ಯಾವ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದನ್ನು ಕಂಡ ಬಾಲಕಿ ಶ್ರಾವ್ಯ ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.

ಪತ್ರದಲ್ಲಿ ಶ್ರಾವ್ಯ ಬರೆದಿದ್ದೇನು?: 'ನಮ್ಮ ಊರಿನ ರಸ್ತೆ ತೀರಾ ಹದಗೆಟ್ಟಿದೆ. ಕಳೆದ ಕೆಲ ವರ್ಷಗಳಿಂದ ರಸ್ತೆ ದುರಸ್ತಿ ಕಂಡಿಲ್ಲ. ರಸ್ತೆ ದುರಸ್ಥಿ ಮಾಡಿ ಎಂದು ನಾವೆಲ್ಲರೂ ಸೇರಿ ಪ್ರತಿಭಟನೆಯನ್ನು ಮಾಡಿದ್ದೇವು.

ಆದರೆ, ಅನುದಾನ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡುತ್ತಾರೆಯೇ ವಿನಹ ರಸ್ತೆಯನ್ನು ದುರಸ್ಥಿ ಮಾಡುತ್ತಿಲ್ಲ. ಹೊಂಡ- ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಮಗೆ ಓಡಾಡಲು ಕಷ್ಟವಾಗುತ್ತಿದೆ.

ಬಸ್ಸು ನಿಧಾನಕ್ಕೆ ಚಲಿಸುವ ಕಾರಣ ಹಾಗೂ ರಸ್ತೆಯ ದುಸ್ಥಿತಿ ಕಂಡು ಬಸ್ಸುಗಳು ಬಾರದೇ ಇರುವುದರಿಂದ ನಮಗೆ ತೀವ್ರ ತೊಂದರೆಯಾಗಿದೆ. ದಯವಿಟ್ಟು ನಮ್ಮ ದೇವಸ್ಯ- ಚೆಲ್ಯಡ್ಕ ರಸ್ತೆಯನ್ನು ದುರಸ್ಥಿ ಮಾಡಿಸಿ ಎಂದು ಶ್ರಾವ್ಯ ಪ್ರಧಾನಿಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಸಚಿವಾಲಯ, ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ದೂರನ್ನು ತುರ್ತಾಗಿ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ನೀಡುವಂತೆ ಆದೇಶಿಸಿದೆ.

ಈ ಕುರಿತು ಸಂತಸ ವ್ಯವ್ಯಕ್ತಪಡಿಸಿದ ಬಾಲಕಿ ಶ್ರಾವ್ಯ, 'ನನ್ನ ಪತ್ರಕ್ಕೆ ಪ್ರಧಾನಿಯವರು ಉತ್ತರಿಸಿದ್ದು ನನಗೆ ಮಾತ್ರವಲ್ಲ, ಊರಿನ ಜನರಿಗೆ ಸಹ ಖುಷಿ ನೀಡಿದೆ' ಎಂದು ಹರ್ಷ ವ್ಯಕ್ತಪಡಿಸಿದ್ದಾಳೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+