ಬಿಬಿಎಂಪಿ ವಿಭಜನೆ ವಿಧೇಯಕ ರಾಷ್ಟ್ರಪತಿ ಭವನಕ್ಕೆ
ಬೆಂಗಳೂರು, ಜುಲೈ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಉಭಯ ಸದನಗಳಲ್ಲಿ ಅಂಗೀಕಾರಗೊಂಡ ವಿಧೇಯಕವನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತ್ತು.
ಬಿಬಿಎಂಪಿಯನ್ನು
ವಿಭಜನೆ
ಮಾಡುವ
ಕರ್ನಾಟಕ
ನಗರ
ಪಾಲಿಕೆಗಳ
(ತಿದ್ದುಪಡಿ)
ವಿಧೇಯಕ
2015
ಕಳೆದ
ವಾರ
ವಿಧಾನಮಂಡಲದ
ಉಭಯ
ಸದನಗಳಲ್ಲಿ
ಅನುಮೋದನೆಗೊಂಡಿತ್ತು.
ಸರ್ಕಾರ
ರಾಜ್ಯಪಾಲರ
ಒಪ್ಪಿಗೆಗಾಗಿ
ವಿಧೇಯಕವನ್ನು
ಕಳುಹಿಸಿತ್ತು.
[ವಿಧೇಯಕಕ್ಕೆ
ಸಹಿ
ಹಾಕಬೇಡಿ]
ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ವಿಧೇಯಕಕ್ಕೆ ಸಹಿ ಹಾಕದೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ವಿಧೇಯಕಕ್ಕೆ ಏಕೆ ಸಹಿ ಹಾಕುತ್ತಿಲ್ಲ? ಎಂಬುದಕ್ಕೆ ಅವರು 4 ಕಾರಣಗಳನ್ನು ನೀಡಿ, ವಿವರಣೆ ಸಹಿತ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ]
ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎಂದು ಹಠ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ಬಾರಿ ವಿಧಾನಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿಧೇಯಕವನ್ನು ಮಂಡನೆ ಮಾಡಿ ಪ್ರತಿಪಕ್ಷಗಳ ವಿರೋಧದ ನಡುವೆಯೇ ಅನುಮೋದನೆ ಪಡೆದುಕೊಂಡಿತ್ತು. [ಬಿಬಿಎಂಪಿಯನ್ನು 5 ಭಾಗ ಮಾಡಿ]
ಈ ವಿಧೇಯಕಕ್ಕೆ ಅಂಕಿತ ಹಾಕಬಾರದು ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಮನವಿ ಮಾಡಿದ್ದವು. ಸದ್ಯ, ರಾಜ್ಯಪಾಲರು ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ವಿಧೇಯಕಕ್ಕೆ ಒಪ್ಪಿಗೆ ಸಿಗುವುದೇ? ಎಂದು ಕಾದು ನೋಡಬೇಕಾಗಿದೆ.