Get Updates
Get notified of breaking news, exclusive insights, and must-see stories!

ಮಂಡ್ಯದಲ್ಲಿ ಆನ್‌ಲೈನ್ ಮೂಲಕವೇ ಪಿತೃತರ್ಪಣ ಕಾರ್ಯ

ಮಂಡ್ಯ, ಸೆಪ್ಟೆಂಬರ್ 17: ಅಗಲಿದ ಪಿತೃಗಳಿಗೆ ಶ್ರೀರಂಗಪಟ್ಟಣದ ಕಾವೇರಿ ದಂಡೆಯಲ್ಲಿ ಪ್ರತಿ ವರ್ಷ ತರ್ಪಣ ನೀಡಲು ಪಿಂಡ ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭಯ ಎಲ್ಲಾ ಕಾರ್ಯಗಳಿಗೂ ಅಡ್ಡಿಯಾಗಿದೆ. ಹೀಗಾಗಿ ಈ ಬಾರಿ ತರ್ಪಣವನ್ನೂ ಆನ್ ಲೈನ್ ನಲ್ಲಿ ನೀಡುವ ಕಾರ್ಯ ನಡೆಯುತ್ತಿದೆ.

ಶ್ರೀರಂಗಪಟ್ಟಣದ ಶಾಶ್ವತಿ ಕ್ರಿಯಾ ಸಮಿತಿ ಆನ್‌ಲೈನ್ ನಲ್ಲೇ ಪೂಜೆಯನ್ನು ಆರಂಭಿಸಿದೆ.

ಪ್ರತಿ ವರ್ಷ ಕಾವೇರಿ ದಂಡೆಯಲ್ಲಿ ತರ್ಪಣ ನೀಡಿ ಪಿಂಡಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಭಯ ಇದಕ್ಕೆಲ್ಲ ಅಡ್ಡಿಯಾಗಿದೆ. ಹೀಗಾಗಿ ಪ್ರಸಿದ್ಧ ಪುರೋಹಿತರಾದ ಡಾ. ಭಾನುಪ್ರಕಾಶ್ ಶರ್ಮಾ ತಮ್ಮ 30 ಜನ ಶಿಷ್ಯರ ಜೊತೆಗೂಡಿ ಆನ್​ಲೈನ್​ ಮೂಲಕ ಶ್ರಾದ್ಧ ಕಾರ್ಯ ಮಾಡಿಸುತ್ತಿದ್ದಾರೆ.

Mandya: Special Online pitru Paksha Puja By Shashwathi Kriya Samithi

ಈ ಆನ್ ಲೈನ್ ಪೂಜೆಗೆ ಒಳ್ಳೆ ಪ್ರತಿಕ್ರಿಯೆಯೂ ಸಿಕ್ಕಿದೆಯಂತೆ. ಆನ್‌ಲೈನ್‌ ಮೂಲಕ ಪೂಜೆ ಮಾಡಿಸುವವರ ಮಾಹಿತಿ ಪಡೆದು ಪಿಂಡಪ್ರದಾನ, ತಿಲತರ್ಪಣ, ನಾರಾಯಣ ಬಲಿಯಂತಹ ಪೂಜೆ ನೆರವೇರಿಸಲಾಗುತ್ತಿದೆ. ಕೊರೊನಾ ಕಾರಣದಿಂದ ಬರಲಾಗದವರು ಆನ್​ಲೈನ್ ಮೂಲಕವೇ ಪೂಜೆ ಮಾಡಿಸಿ ಅಗಲಿದ ತಮ್ಮ ಪಿತೃಗಳಿಗೆ ಸದ್ಗತಿ ಕೋರುತ್ತಿದ್ದಾರೆ. ಇದ್ದಲ್ಲಿಂದಲೇ ಪೂಜೆಯನ್ನು ನೆರವೇರಿಸುತ್ತಿದ್ದಾರೆ.

Recommended Video

      Modi ಹುಟ್ಟಿದ ಹಬ್ಬಕ್ಕೆ ಯಾರೆಲ್ಲಾ ಶುಭಾಶಯ ಕೋರಿದ್ದಾರೆ ನೋಡಿ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+