ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು

Recommended Video

      Mandya Bus Incident:ಮಂಡ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ | Oneindia Kannada

      ಮಂಡ್ಯ, ನವೆಂಬರ್ 24: ಮಂಡ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದೆ.

      ಈಗಾಗಲೇ ಸುಮಾರು 22 ಮೃತದೇಹಗಳನ್ನು ಬಸ್ಸಿನಿಂದ ಹೊರತೆಗೆಯಲಾಗಿದೆ. ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ.

      ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ರಾಜಕುಮಾರ್ ಎಂಬ ಖಾಸಗಿ ಬಸ್ಸೊಂದು ನಾಲೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

      Madhya bus accident: Live updates

      ಈ ಘಟನೆಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್ಡೇಟ್ಸ್ ಅನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

      Nov 24, 2018, 6:35 pm IST

      ದುರಸ್ತಿ ಆಗಿದ್ದ ಬಸ್‌ ಅನ್ನು ರಸ್ತೆಯಲ್ಲಿ ಓಡಾಡಲು ಅವಕಾಶ ಕೊಟ್ಟ ತಾಲ್ಲೂಕಿನ ಆರ್‌ಟಿಓ ಅಧಿಕಾರಿಯನ್ನು ಅಮಾನತು ಗೊಳಿಸಿ ಸಂಚಾರಿ ಇಲಾಖೆ ಆದೇಶ ಹೊರಡಿಸಿದೆ.
      Nov 24, 2018, 6:02 pm IST

      30 ವೈದ್ಯರಿಂದ ಶವಗಳ ಮರಣೋತ್ತರ ಪರೀಕ್ಷೆ. ಪರೀಕ್ಷೆ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ.
      Nov 24, 2018, 5:36 pm IST

      ಮೃತಪಟ್ಟವರ ಹೆಸರುಗಳು ಇಂತಿವೆ: ಪವಿತ್ರ, ಈರಯ್ಯ, ಕಲ್ಪನ, ಚಂದ್ರು, ದೇವರಾಜ್, ಸಿದ್ದಯ್ಯ, ಚಿಕ್ಕಯ್ಯ, ಪ್ರೀತಿ, ಜಯಲಕ್ಷೀ, ಶಶಿಕಲಾ, ಪಾಪಯ್ಯ, ಸಾವಿತ್ರಮ್ಮ, ಮಂಜುಳಾ, ಅನುಷಾ, ಕಮಲಮ್ಮ, ಸುಮಾ, ಯಶೋಧ, ರತ್ನಮ್ಮ, ಸೌಮ್ಯ, ಪ್ರಶಾಂತ್, ಕೆಂಪಯ್ಯ, ನಿಂಗಮ್ಮ, ರಾಧಾ, ಪ್ರೇಕ್ಷಾ ಹಾಗೂ ಲಿಖಿತ್
      Nov 24, 2018, 5:29 pm IST

      ಘಟನೆ ನಡೆದ ಸ್ಥಳದಲ್ಲಿಯೇ ಶವಗಳ ಮರಣೋತ್ತರ ಪರೀಕ್ಷೆಗೆ ನಿರ್ಧಾರ. ಆಸ್ಪತ್ರೆಗೆ ಕೊಂಡೊಯ್ದರೆ ಸ್ಥಳದ ಅಭಾವ ಮತ್ತು ಜನರ ಸೇರುವಿಕೆ ಹೆಚ್ಚಾಗುವ ಆತಂಕ.
      Nov 24, 2018, 4:23 pm IST

      ಸುಮಾರು 12 ಅಡಿ ಆಳದ ಕಾಲುವೆಗೆ ಉರುಳಿದ್ದ ಬಸ್
      Nov 24, 2018, 4:18 pm IST

      ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ಅಪಘಾತವಾಗುತ್ತಿದ್ದಂತೆಯೇ ಬಸ್ಸಿನಿಂದ ಹಾರಿ ಪರಾರಿಯಾಗಿದ್ದಾರೆ ಎಂದು ಬದುಕುಳಿದ ಬಾಲಕ ಲೋಹಿತ್ ಹೇಳಿದ್ದಾನೆ.
      Nov 24, 2018, 4:16 pm IST

      KA: 19, A: 5676 ನಂಬರಿನ ಖಾಸಗೀ ಬಸ್
      Nov 24, 2018, 3:51 pm IST

      ವದೇಸಮುದ್ರದ ಒಂದೇ ಕುಟುಂಬದ ನಾಲ್ವರು ಸಾವು
      Nov 24, 2018, 3:37 pm IST

      ಸ್ಟೀರಿಂಗ್ ಲಾಕ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಭವಿಸಿದೆ ಎನ್ನಲಾಗುತ್ತಿದೆ.
      Nov 24, 2018, 3:34 pm IST

      ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
      Nov 24, 2018, 3:33 pm IST

      ಘಟನೆ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
      Nov 24, 2018, 2:47 pm IST

      50 ಕಿಮೀ ವೇಗದಲ್ಲಿದ್ದ ಬಸ್
      Nov 24, 2018, 2:46 pm IST

      ತಿರುವಿನಲ್ಲಿ ಬಸ್ಸನ್ನು ಎಡಕ್ಕೆ ತಿರುಗಿಸುವಾಗ ಈ ಘಟನೆ
      Nov 24, 2018, 2:42 pm IST

      ಘಟನೆಯಲ್ಲಿ ಗಿರೀಶ್ ಎಂಬ ಇನ್ನೊಬ್ಬರೂ ಬದುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
      Nov 24, 2018, 2:36 pm IST

      ಈ ದುರ್ಘಟನೆಯಲ್ಲಿ ಓರ್ವ ಚಿಕ್ಕ ಬಾಲಕನೂ ಬದುಕಿದ್ದಾನೆ ಎನ್ನಲಾಗಿದೆ.
      Nov 24, 2018, 2:34 pm IST

      5 ಮಕ್ಕಳು ಸೇರಿದಂತೆ 25 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
      Nov 24, 2018, 2:32 pm IST

      ಮಂಡ್ಯ, ಮೈಸೂರಿನಿಂದ ಆರು ಅಗ್ನಿಶಾಮಕ‌ ಸಿಬ್ಬಂದಿ ಕಾರ್ಯಾಚರಣೆ
      Nov 24, 2018, 2:31 pm IST

      ಸುತ್ತ ಮುತ್ತಲ ಗ್ರಾಮಸ್ಥರಿಂದ ಕಾರ್ಯಾಚರಣೆ
      Nov 24, 2018, 2:20 pm IST

      ಇಂದು ನಡೆಯಬೇಕಿದ್ದ ಚಲನಚಿತ್ರ ಪ್ರಶಸ್ತಿ ಸಮಾರಂಭ ಸೇರಿದಂತೆ ಮುಖ್ಯಮಂತ್ರಿಯವರು ಭಾಗವಹಿಸಲಿದ್ದ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ.
      Nov 24, 2018, 2:11 pm IST

      ಈಗಾಗಲೇ ನಾಲೆಯಿಂದ 22 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
      Nov 24, 2018, 2:10 pm IST

      ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೆರಳಲಿದ್ದು, ಈಗಾಗಲೇ ಅವರು ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ.
      Nov 24, 2018, 2:10 pm IST

      ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಚಾಲಕನ ಕುರಿತು ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+