ದಬ್ಬಾಳಿಕೆ, ಗೂಂಡಾಗಿರಿ ಪ್ರದರ್ಶಿಸುವ ಜೆಡಿಎಸ್ ಶಾಸಕರಿಗೆ ಅಭಿವೃದ್ಧಿ ಬೇಕಿಲ್ಲ:ಸುಮಲತಾ ಕಿಡಿ
ಮಂಡ್ಯ, ಸೆಪ್ಟೆಂಬರ್ 17: ದಬ್ಬಾಳಿಕೆ, ದೌರ್ಜನ್ಯ, ದುರಹಂಕಾರ, ಗೂಂಡಾಗಿರಿ ಪ್ರದರ್ಶನ ಬಿಟ್ಟರೆ ಜಿಲ್ಲೆಯ ಜೆಡಿಎಸ್ ಶಾಸಕರು ಅಭಿವೃದ್ಧಿ ಪರ ಅಥವಾ ಜನಸಾಮಾನ್ಯರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹರಿಹಾಯ್ದಿದ್ದಾರೆ.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಜಿಲ್ಲೆಯ ಜನರ ಪರವಾಗಿ ಒಂದೇ ಒಂದು ಸಮಸ್ಯೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ, ಅವರನ್ನು ಜನ ಆಯ್ಕೆ ಮಾಡಿರುವುದು ಸುಮಲತಾರನ್ನ ಟಾರ್ಗೆಟ್ ಮಾಡಿ ಮಾತನಾಡುವುದಕ್ಕೆ ಬಂದಿದ್ದಾರೆ. ದಿಶಾ ಸಭೆಗೆ ಮೂರು ವರ್ಷಗಳಿಂದ ಎಷ್ಟು ಸಾರಿ ಬಂದಿದ್ದಾರೆ, ಇವರು ನನಗೆ ಮಾಹಿತಿ ನೀಡದೇ ಇವರ ತಾಲ್ಲೂಕಿನಲ್ಲಿ ಸಭೆ ಮಾಡಿದಾಗಲೂ ನಾನು ಪ್ರಶ್ನೆ ಮಾಡಿದಿನಾ ಎಂದು ಟೀಕಿಸಿದರು.
ನಾನೇನು ಕದ್ದು ಮುಚ್ಚಿ ಯಾವುದೇ ಸಭೆ ಮಾಡುವುದಿಲ್ಲ, ಒಂದೇ ಸಭೆಯಲ್ಲಿ ಎಲ್ಲರ ಹಾಜರಾಗಿದ್ದರು, ಅದಯ ಅಕ್ರಮ ಗಣಿಗಾರಿಕೆ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದಾಗ ಎಲ್ಲರು ಸೇರಿದ್ದರು. ಏಕೆಂದರೆ ಆಗ ಅವರಿಗೆ ಅಕ್ರಮ ಗಣಿಗಾರಿಕೆ ಬಿಸಿ ತಟ್ಟಿದ್ದರಿಂದ ಭಾಗವಹಿಸಿ ಕೂಗಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಮಾತನಾಡುವುದಕ್ಕೆ ಬಿಟ್ಟಿಲ್ಲ, ಅಕ್ರಮ ಗಣಿಗಾರಿಗೆ ಮಾಡುವುದಕ್ಕೆ ಬಿಟ್ಟಿಲ್ಲ, ಬಂದಾಗಲೆಲ್ಲಾ ಗಲಾಟೆ ಮಾಡುತ್ತಾರೆ.

ಸಭೆಯನ್ನು ಒಂದು ರಾಜಕಾರಣದ ವೇದಿಕೆ ರೀತಿಯಲ್ಲಿ ನೋಡುತ್ತಾರೆ. ಇಂತಹ ಗಂಭೀರವಾದ ಸಭೆ, ಜನರ ಸಮಸ್ಯೆಗಳನ್ನು ಎತ್ತಿ ಪರಿಹಾರ ಕೊಡಿಸುವ ಯಾವುದೇ ವಿಚಾರ ಅವರಲ್ಲಿಲ್ಲ. ಸದನ ನಡೆಯುತ್ತಿದೆ ನಿಜಾ ಹಾಗಂತಾ ಜಿಲ್ಲೆಯ ಪರವಾಗಿ ಅಥವಾ ಸಮಸ್ಯೆ ಬಗ್ಗೆ ಯಾವಾಗಲಾದರೂ ಚರ್ಚೆ ನಡೆಸಿದ್ದರಾ? ಪಾರ್ಲಿಮೆಂಟ್ನಲ್ಲಿ ನಾನು ಮಾತಾಡ್ತೀನಿ, ಇವರು ಸದನದಲ್ಲಿ ಮಾತಾಡ್ತಾರಾ, ಇವರು ರಾಜಕಾರಣ ಮಾಡಿಕೊಂಡೇ ಇದ್ದಾರೆ. ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ದಿಶಾ ಸಭೆಗೆ ನೀವು ಶಾಸಕರಿಗೆ ಮಾಹಿತಿ ನೀಡಿಲ್ಲವಾ ಎಂದು ಕೇಳಿದ್ದಕ್ಕೆ, ನಾವು ಎಲ್ಲಾ ಗೈಡ್ಲೈನ್ಸ್ ಪ್ರಕಾರ ನಡೆಸಿದ್ದೇವೆ. ಇಲ್ಲಾ ಅಂದರೆ ಯಾವುದೇ ಅಧಿಕಾರಿಗಳು ಬರಲ್ಲ ಎಂದು ಶಾಸಕರಿಗೆ ಮಾಹಿತಿ ನೀಡಿಲ್ಲವಾ ಎಂಬ ಪ್ರಶ್ನೆ ಗೆ ಉತ್ತರಿಸಿದರು. ಮಳೆ ಬಂದು ರಸ್ತೆ, ಮನೆಗಳು ನಾಶವಾಗಿದೆ, ಈ ನಿಟ್ಟಿನಲ್ಲಿ ತುರ್ತಾಗಿ ದಿಶಾ ಸಭೆ ನಡೆಸಿ ಜನರಿಗೆ ಪರಿಹಾರ ಕೊಡುವುದಕ್ಕಾಗಿ ಸಭೆ ನಡೆಸಲಾಗಿದೆ ಎಂದರು.

ಅಧಿವೇಶನ ಇದ್ದ ಮಾತ್ರಕ್ಕೆ ಸಭೆಗೆ ಬರಬಾರದು ಎಂದು ಎಲ್ಲೂ ಹೇಳಿಲ್ಲ. ಅಧಿವೇಶನ ಇದ್ದಾಗ ಸಭೆ ಮಾಡಬಾರದು ಎಂದಿದೆ ಎಂದು ಕೇಳಿದ್ದಕ್ಕೆ ನಾವು ಗೈಡ್ಲೈನ್ಸ್ ಪ್ರಕಾರ ಸಭೆ ಕರೆದಿದ್ದೇವೆ. ಅಲ್ಲದೆ 3 ವರ್ಷಗಳಲ್ಲಿ ಎಷ್ಟು ಸಭೆಗೆ ಜೆಡಿಎಸ್ ಶಾಸಕರು ಬಂದಿದ್ದಾರೆ. ಅಧಿವೇಶನದಲ್ಲಿ ಭಾಗಿಯಾದ ಮಾತ್ರಕ್ಕೆ ಅವರು ದಿಶಾ ಸಭೆಗೆ ಬರಬಾರದು ಎಂದೇನೂ ಇಲ್ಲ. ಇನ್ನು ಅವರು ಸದನದಲ್ಲಿ ಭಾಗಿಯಾದರೆ ಜಿಲ್ಲೆಯ ಸಮಸ್ಯೆ ಬಗೆಗೆ ಎಷ್ಟು ಪ್ರಶ್ನೆ ಮಾಡುತ್ತಾರೆ, ಎಷ್ಟು ಮಾತಾಡಿದ್ದಾರೆ. ನಾನೂ ಸಹ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿ ಜಿಲ್ಲೆಯ ಬಗ್ಗೆ ಮಾತಾಡಿದ್ದೀನಿ. ಇವರು ಎಷ್ಟು ಪ್ರಶ್ನೆ ಮಾಡಿದ್ದಾರೆ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್ ಶಾಸಕರ ವಿರುದ್ಧ ಗುಡುಗಿದರು.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications