ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿ
ಮಂಡ್ಯ, ಫೆಬ್ರವರಿ 17: ಇಡೀ ದೇಶವೇ ಸೆಲ್ಯೂಟ್ ಹೊಡೆಯಬೇಕಾದಂತಹ ಕೆಲಸ ನನ್ನ ಗಂಡ ಮಾಡಿದ್ದಾರೆ. ಅವರು ಬದುಕಿದ್ದಾಗ ಮುಂದಿನ ಹತ್ತುವರ್ಷಗಳ ಕಾಲ ಸೇನೆಯಲ್ಲಿರುತ್ತೇನೆ ಎಂದಿದ್ರು. ಆದರೆ ಅವರ ಆಸೆ ಈಡೇರಲಿಲ್ಲ. ಅವರ ಕನಸನ್ನು ನಾನು ಈಡೇರಿಸುತ್ತೇನೆ. ನಾನು ಸೈನ್ಯಕ್ಕೆ ಸೇರಿ ಪಾಪಿ ಉಗ್ರರ ರುಂಡ ಚೆಂಡಾಡ್ತಿನಿ ಎಂದು ಪುಲ್ವಾಮದಲ್ಲಿ ವೀರ ಯೋಧನಾಗಿ ಮಡಿದ ಗುರು ಪತ್ನಿ ಕಲಾವತಿ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.
ಶನಿವಾರ (ಫೆ.16) ಪತಿಯ ಮೃತದೇಹಕ್ಕಾಗಿ ಕಾಯುತ್ತಿರುವಾಗ ಬಿಕ್ಕಿ - ಬಿಕ್ಕಿ ಅಳುತ್ತಾ ಕಲಾವತಿ ಆಡಿದ ಈ ಮಾತುಗಳು ಎಂಥಹವರನ್ನು ಸೇನೆಗೆ ಸೇರುವಂತೆ ತುಡಿತಕೊಳ್ಳಗಾಗುವಂತೆ ಮಾಡಿತು. "ನನ್ನ ಗಂಡನಿಗೆ ಪೊಲೀಸ್ ಡ್ರೆಸ್ ಅಂದ್ರೆ ತುಂಬಾ ಇಷ್ಟ. ಕೊನೆಗೂ ಅವರಿಷ್ಟದಂತೆ ಆ ಪೊಲೀಸ್ ಡ್ರೆಸ್ ಹಾಕೊಂಡೆ ಪ್ರಾಣ ಕೊಟ್ರು. ದೇಶಕ್ಕಾಗಿ ಹುಟ್ಟಿ, ದೇಶಕ್ಕಾಗಿ ಹೋರಾಡಿ, ದೇಶಕ್ಕಾಗಿ ಪ್ರಾಣ ಬಿಟ್ಟರು ನನ್ನ ಗಂಡ ಎಂಬ ಹೆಮ್ಮೆ ಇದೆ " ಎಂದು ಕಣ್ಣೀರಲ್ಲೇ ಪತಿಯ ಭಾವಚಿತ್ರದ ಮುಂದೆ ದುಃಖ ಉಮ್ಮಳಿಸಿ ಬರುವಂತೆ ರೋಧಿಸುತ್ತಿದ್ದರು.
"ಮೊನ್ನೆ ಕೆಲಸಕ್ಕೆ ಹೋಗುವಾಗಲೂ ನಾನು ಡ್ಯೂಟಿಗೆ ಹೋಗ್ತಿನಿ. ನನಗೇನು ಆಗೊಲ್ಲ ಎನ್ನುತ್ತಿದ್ದರು. ಟಿವಿಯಲ್ಲಿ ಯಾರಾದರೂ ಯೋಧರು ಪ್ರಾಣ ಬಿಟ್ರು ಎಂಬ ಸುದ್ದಿ ಕೇಳಿ ಫೋನ್ ಮಾಡಿದ್ರೆ ಸಾಕು, ನನಗೆ ಆ ವಿಚಾರವನ್ನೆಲ್ಲಾ ಹೇಳ್ಬೇಡಿ. ನನ್ನ ಮುಂದೆ ಅಳಬೇಡಿ ಅಂತಿದ್ರು. ಅಲ್ಲಿ ಏನಾಗುತ್ತೆ ಅನ್ನೋದನ್ನು ಯಾವುದೇ ಕಾರಣಕ್ಕೂ ಹೇಳ್ತಿರಲಿಲ್ಲ. ನಾವು ಭಯಪಡ್ತಿವಿ ಅಂತ ಯಾವುದನ್ನು ಹೇಳುತ್ತಿರಲಿಲ್ಲ" ಎಂದು ಕಲಾವತಿ ರೋಧಿಸಿದರು.

"ಅವರು ಫೋನ್ ಮಾಡಿದಾಗ ಕೊನೆಯದಾಗಿ ಏನೋ ಹೇಳೋಕೆ ಬಂದ್ರು ಗೊತ್ತಾಗಲಿಲ್ಲ. ಆಗ ಫೋನ್ ರಿಸೀವ್ ಮಾಡಲಿಲ್ಲ. ನಾನು ದೇವರು ಪೂಜೆ ಮಾಡ್ತಿದ್ದೆ. ಆದರೆ ದೇವರು ಕಣ್ಣು ಬಿಡದೇ ನನ್ನ ದೇವರನ್ನೇ ಕಿತ್ತುಕೊಂಡು ಬಿಟ್ಟ. ಬುಧವಾರ ಸಾಯಂಕಾಲ ಮಾತನಾಡಿದೆ. ಇನ್ನೆರಡು ತಿಂಗಳಿಗೆ ನಮ್ಮ ಮದುವೆಯಾದ ವರ್ಷ ಆಗುತ್ತೆ. ಬರ್ತಿನಿ ಎಂದು ಹೇಳಿದ್ರು. ನನಗೆ ಧೈರ್ಯ ತುಂಬುವವರೇ ಇಲ್ಲ" ಎಂದು ಅಳುವಾಗ ಮಮ್ಮಲ ಮರುಗುವಂತಿತ್ತು ಎದುರಿಗಿರುವವರ ಪರಿಸ್ಥಿತಿ.
"ಅವರನ್ನು ಕೊಂದವರನ್ನು ಬಿಡ್ಬೇಡಿ. ನನ್ನ ಗಂಡನನ್ನು ಹೆಂಗೆ ಸಾಯ್ಸಿದ್ರೋ ಹಂಗೇ ಸಾಯ್ಸಿ. ನರೇಂದ್ರ ಮೋದಿಯವರು ಪಾಕ್ ಅನ್ನು ಹೊಡೆದು ಬಿಸಾಕಿ ಅಂತಾ ಆರ್ಡರ್ ಮಾಡ್ಲಿ. ಆ ತರ ಮಾಡಿದ್ರೆ, ನಮ್ಮ ಸೈನಿಕರಿಗೆ ನೆಮ್ಮದಿ ಸಿಗುತ್ತೆ. ನನ್ನನ್ನು ಸೇನೆಗೆ ಸೇರ್ಸಿಕೊಳ್ಳಿ. ನನ್ನ ಗಂಡನಿಗೆ ಹೊಡೆದವರಿಗೆ ಸುಮ್ನೆ ಬಿಡೋಲ್ಲ. ರುಂಡಾ ಚೆಂಡಾಡ್ತಿನಿ" ಎಂದು ಪಾಪಿ ಪಾಕ್ ಗೆ ಹಿಡಿ ಶಾಪ ಹಾಕಿದರು ಕಲಾವತಿ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications