ಶಾಸಕ-ನಟ ಅಂಬರೀಶ್ ಮೇಲೆ ಲೋಕಾಯುಕ್ತಕ್ಕೆ ದೂರು
ಮಂಡ್ಯ, ಮೇ 31: ಶಾಸಕ-ನಟ ಅಂಬರೀಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ವಿಧಾನಸಭಾ ಕಲಾಪಕ್ಕೆ ಹಾಜರಾಗುವುದಿಲ್ಲ, ಕ್ಷೇತ್ರದ ಜನರ ಸಮಸ್ಯೆಯನ್ನು ಕೇಳೋದಿಲ್ಲ ಎಂದು ಆರೋಪಿಸಿ, ಮಂಡ್ಯ ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಬಿಎಸ್ ಗೌಡ ಮಂಗಳವಾರ ದೂರು ನೀಡಿದ್ದಾರೆ.
ಕ್ಷೇತ್ರದ ಜನರು ನೀಡಿದ ಅವಕಾಶದ ಉಪಯೋಗ ಮಾಡದೆ ಅಂಬರೀಶ್ ಬೇಜವಾಬ್ದಾರಿ ತೋರಿದ್ದಾರೆ. ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದಲೇ ಕ್ಷೇತ್ರದ ಕಡೆಗೆ ತಲೆ ಹಾಕುತ್ತಿಲ್ಲ. ವಿಧಾನಸೌಧ ಕಲಾಪಕ್ಕೂ ಹಾಜರಾಗುತ್ತಿಲ್ಲ. ಅಂಬರೀಶ್ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹ ಮಾಡಿದ್ದಾರೆ.[ಅಂಬರೀಶ್ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಮನವಿ]

ಅಂಬರೀಶ್ ಅವರಿಗೆ ವಿಧಾನಸಭೆ ಅಧ್ಯಕ್ಷರು ನೋಟಿಸ್ ಕೊಟ್ಟಿದ್ದರು. ಆರೋಗ್ಯ ಸಮಸ್ಯೆ ಇರುವುದರಿಂದ ಕಲಾಪಕ್ಕೆ ಬಂದಿಲ್ಲ. ಇನ್ನು ವಿಧಾನಸೌಧದಲ್ಲಿ ಇರುವ ಏಸಿಯಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂಬ ಉತ್ತರ ನೀಡಿದ್ದರು. ಕಾರಿನಲ್ಲಿ ಸಂಚರಿಸುವಾಗ ಅಂಬರೀಶ್ ಸದಾ ಏಸಿ ಹಾಕಿಕೊಂಡಿರುತ್ತಾರೆ. ಅದರಿಂದ ಆರೋಗ್ಯ ಸಮಸ್ಯೆ ಆಗೋದಿಲ್ವ ಎಂದು ದೂರುದಾರ ಬಿಎಸ್ ಗೌಡ ಪ್ರಶ್ನಿಸಿದ್ದಾರೆ.












Click it and Unblock the Notifications