ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ಘೋಷಿಸಿ : ಮಾದೇಗೌಡ
ಮಂಡ್ಯ, ಸೆ. 11: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ನಡೆ ಬಗ್ಗೆ ಚರ್ಚಿಸಲು ಕಾವೇರಿ ಕಣಿವೆ ರೈತ ಹಿತರಕ್ಷಣಾ ಸಮಿತಿಯಿಂದ ಭಾನುವಾರದಂದು ಮಹತ್ವ ಸಭೆ ನಡೆಸಲಾಯಿತು. ಜಿ ಮಾದೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳ ವಿವರ ಇಲ್ಲಿದೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸ೦ಸದ ಜಿ.ಮಾದೇಗೌಡ ಅವರು ಸಭೆ ಬಳಿಕ ಮಾತನಾಡಿ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ತಕ್ಷಣ, ರೈತರ ಪ್ರತಿಭಟನೆ ನಿಲ್ಲಿಸಲಾಗುತ್ತದೆ. ರೈತರ ಆಕ್ರೋಶಕ್ಕೆ ಹೆದರಿ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. [ಮಂಡ್ಯ: ರೈತರ ಜತೆ ಕುಳಿತು ಸಿಎಂಗೆ ಪ್ರಶ್ನೆ ಎಸೆದ ಯಡಿಯೂರಪ್ಪ]
ಈಗಾಗಲೇ ನೀರು ಸಿಗುವುದು ತಡವಾಗಿದೆ. ಬೆಳೆ ಕೈಗೆ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ರೈತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದರು.
ರೈತ
ಹಿತರಕ್ಷಣಾ
ಸಮಿತಿ
ಸಭೆಯಲ್ಲಿ
5
ನಿರ್ಣಯಗಳನ್ನು
ತೆಗೆದುಕೊಳ್ಳಲಾಗಿದೆ
*
ಕಾವೇರಿ
ಮೇಲುಸ್ತುವಾರಿ
ಸಮಿತಿಯ
ಮುಂದೆ
ವಾದ
ಮಂಡಿಸಬೇಕು.
*
ಕೂಡಲೇ
ತಮಿಳುನಾಡಿಗೆ
ಹರಿಸುತ್ತಿರುವ
ನೀರನ್ನು
ನಿಲ್ಲಿಸಬೇಕು
*
ರೈತರಿಗೆ
ಒಂದು
ಎಕರೆಗೆ
25
ಸಾವಿರ
ರೂ.
ಪರಿಹಾರ
ಘೋಷಿಸಿ,
ಹೋರಾಟಗಾರರ
ವಿರುದ್ಧ
ಕೇಸ್
ಗಳನ್ನು
ವಜಾಗೊಳಿಸಿ
*
ಕಾವೇರಿ
ಕಣಿವೆ
ವ್ಯಾಪ್ತಿಯ
ಎಲ್ಲಾ
ಶಾಸಕರು,
ಸಂಸದರು
ಕಡ್ಡಾಯವಾಗಿ
ಸಭೆಗೆ
ಹಾಜರಾಗಬೇಕು.
*
ಸೆಪ್ಟೆಂಬರ್
14ರಂದು
ಶಾಸಕರ
ಸಭೆ
ಕರೆಯಲು
ನಿರ್ಧಾರ.
[ದೇವೇಗೌಡರಿಂದ
ಅಣೆಕಟ್ಟುಗಳ
ವೈಮಾನಿಕ
ಸಮೀಕ್ಷೆ
ಆರಂಭ]
15 ಕ್ಯೂಸೆಕ್ಸ್ ಗಿಂತ ಅಧಿಕ ಪ್ರಮಾಣದಲ್ಲಿ ನೀರು
ಪ್ರತಿದಿನ 15 ಕ್ಯೂಸೆಕ್ಸ್ ಗಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಇದನ್ನು ಮೊದಲು ತಡೆಗಟ್ಟಲಿ. ಈ ನಿರ್ಣಯಗಳನ್ನು ತಕ್ಷಣವೇ ಪಾಲಿಸಲಿ ಇಲ್ಲದಿದ್ದರೆ ಮುಂದಿನ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಮಾದೇಗೌಡರು ಎಚ್ಚರಿಸಿದರು. ಮಾಜಿ ಶಾಸಕರಾದ ಚೌಡಯ್ಯ, ಆತ್ಮಾನಂದ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಗೆ ಜನಪ್ರತಿನಿಧಿಗಳು ಗೈರು ಹಾಜರಾಗಿದ್ರು
ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಗೆ ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೊರತುಪಡಿಸಿ, ಸಂಸದರಾದಿಯಾಗಿ ಎಲ್ಲಾ ಶಾಸಕರು ಗೈರಾಗಿದ್ದರು.
ಪಾಂಡವಪುರ, ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ರೈತರು ಹೆಚ್ಚು ಕಾವೇರಿ ನೀರನ್ನು ಬಳಸಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಮೇಲುಕೋಟೆ ಕ್ಷೇತ್ರ ಹೊರತುಪಡಿಸಿ ಕನಿಷ್ಠ ಉಳಿದ ಭಾಗದ ಜನಪ್ರತಿನಿಧಿಗಳು ಸಭೆಯಲ್ಲಿ ಗೈರು ಹಾಜರಾಗುವ ಮೂಲಕ ತಮ್ಮ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದರು.
ಮೂಡದ ಒಮ್ಮತ; ಚಳವಳಿ ವಿಫಲ
ಕಾವೇರಿ ಚಳವಳಿ ಕಳೆದ ಹಲವು ವರ್ಷಗಳಿಂದಲೂ ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಾಗಲೆಲ್ಲಾ ನಿರಂತರವಾಗಿ ಹೋರಾಟ ನಡೆಯುತ್ತಿದೆಯಾದರೂ ಜನಪ್ರತಿನಿಧಿಗಳಲ್ಲಿ ಒಮ್ಮತ ಮೂಡದ ಕಾರಣ ಚಳವಳಿ ದಿಕ್ಕು ತಪ್ಪುತ್ತಿದೆ.
ಸುನಂದಾ ಜಯರಾಂ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಮಾಡಿದರೂ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಅಥವಾ ಅನುಷ್ಠಾನಗೊಳಿಸುವ ಹಾದಿಯಲ್ಲಿ ನಾಯಕರು ಸಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಆಳುವ ಸರ್ಕಾರಗಳು ಚಳವಳಿಯನ್ನು ಹತ್ತಿಕ್ಕಲು ನೀರು ಬಿಡುವುದು, ಅಲ್ಪಸ್ವಲ್ಪ ಪರಿಹಾರದ ಆಮಿಷವೊಡ್ಡುವಂತಹ ಹುನ್ನಾರ ನಡೆಸಿ ರೈತರನ್ನು ವಂಚಿಸುತ್ತಿವೆ.ಸಮಿತಿಯಲ್ಲೇ ಭಿನ್ನಾಭಿಪ್ರಾಯ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಹಾಗೂ ಕೆಲ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ.
ಮಾದೇಗೌಡ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಅವರ ನಡುವೆ ವೈಯಕ್ತಿಕ ದ್ವೇಷ ತಾಳಿರುವುದರಿಂದ ಮಾದೇಗೌಡರು ಅಧ್ಯಕ್ಷರಾಗಿರುವ ಹಿತರಕ್ಷಣಾ ಸಮಿತಿಗೆ ತಮ್ಮಣ್ಣ ಬರುವುದಿಲ್ಲ. ಬದಲಿಗೆ ಮದ್ದೂರಿನಲ್ಲೇ ಕಾವೇರಿ ಚಳವಳಿ ಮುಂದುವರಿಸುವ ಮೂಲಕ ರೈತರನ್ನು ಒಲಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.ಉಳಿದಂತೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮುಂಚೂಣಿ ನಾಯಕತ್ವ ವಹಿಸಬೇಕಿತ್ತುಜನಪ್ರತಿನಿಧಿಗಳ ಪಕ್ಷ ನಿಷ್ಠೆ
ಜೆಡಿಎಸ್ ನಿಂದ ಅಮಾನತುಗೊಂಡಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣದಿಂದ ಚಳವಳಿಯಿಂದ ಹಿಂದೆ ಸರಿದಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರೂ ಸಹ ಕಾವೇರಿ ಚಳವಳಿಯಲ್ಲಿ ಭಾಗವಹಿಸುವುದಿರಲಿ, ಒಂದು ಹೇಳಿಕೆಯನ್ನೂ ನೀಡದೆ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.
ತೋರ್ಪಡಿಕೆಗಾಗಿ ಶಾಸಕ ಕೆ.ಸಿ.ನಾರಾಯಣಗೌಡ ಅವರು ಕಾವೇರಿ ಚಳವಳಿಯಲ್ಲಿ ಭಾಗವಹಿಸಿದ್ದರೆ, ಶಾಸಕ ಎನ್.ಚಲುವರಾಯಸ್ವಾಮಿ ವಿದೇಶ ಪ್ರವಾಸದ ನೆಪವೊಡ್ಡಿ ಕೇವಲ ಹೇಳಿಕೆಗೆ ಸೀಮಿತವಾಗಿದ್ದಾರೆ.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
5
ಟಿಎಂಸಿ
ನೀರು
ತಮಿಳುನಾಡಿಗೆ
ಹರಿದುಹೋಗಿದೆ.
ಸರ್ಕಾರ
ಈಗಲಾದರೂ
ನೀರು
ನಿಲ್ಲಿಸಲು
ಕ್ರಮ
ಕೈಗೊಳ್ಳಲಿ.
*
12ರ
ಸೋಮವಾರ
ನಡೆಯಲಿರುವ
ಉಸ್ತುವಾರಿ
ಸಮಿತಿಗೆ
ಅರ್ಜಿ
ಹಾಕಿ
ನೀರು
ನಿಲ್ಲಿಸಲು
ಕ್ರಮ
ಕೈಗೊಳ್ಳಲಿ.
*
ಕೆ.ಆರ್.ಎಸ್.
ಬಳಿ
ನಿಷೇಧಾಜ್ಞೆ
ಜಾರಿ
ಮಾಡಬಾರದು.
ಚಳವಳಿ
ಮಾಡಲು
ಅವಕಾಶ
ನೀಡಬೇಕು.
ಅಹಿಂಸಾತ್ಮಕವಾಗಿ
ಹೋರಾಟ
ಮುಂದುವರಿಸಲಾಗುವುದು.
*
ನಾಲೆಗಳಿಗೆ
ಬಿಡಲಾಗಿರುವ
ನೀರಿನ
ಮೂರು
ಪಟ್ಟು
ಹೆಚ್ಚು
ನೀರನ್ನು
ಬೆಳೆಗಳ
ರಕ್ಷಿಸಲು
ಒತ್ತಾಯ.
*
ನೀರು
ನಿಲ್ಲಿಸಲು
ಮತ್ತು
ರೈತರನ್ನು
ಉಳಿಸುವ
ನಿಟ್ಟಿನಲ್ಲಿ
ಹೋರಾಟ
ಮುಂದುವರಿಸಲಾಗುವುದು.