ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪುನರ್‌ನಿರ್ಮಿಸಲು ಸರ್ಕಾರ ಮಾಡಿರುವ ಕಾರ್ಯಗಳಿವು

|
Google Oneindia Kannada News

Recommended Video

ಪ್ರವಾಹದಿಂದ ನಲುಗಿದ ಕೊಡಗು ಪುನರ್ ನಿರ್ಮಿಸಲು 127 ಕೋಟಿ ಕೊಟ್ಟ ಎಚ್ ಡಿ ಕೆ ಸರ್ಕಾರ | Oneindia Kannada

ಬೆಂಗಳೂರು, ಅಕ್ಟೋಬರ್ 23: ನೆರೆಗೆ ತುತ್ತಾಗಿ ಜೀವ ಹಾನಿಯ ಜೊತೆಗೆ ಭಾರಿ ಆಸ್ತಿ ಹಾನಿ ಕಂಡ ಕೊಡಗನ್ನು ಪುನರ್‌ ಕಟ್ಟುವ ಕಾರ್ಯವನ್ನು ಸರ್ಕಾರ ತ್ವರಿತವಾಗಿ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮೈತ್ರಿ ಸರ್ಕಾರಕ್ಕೆ ಐದು ತಿಂಗಳು ತುಂಬಿದ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಕೊಡಗು ಪುನರ್‌ ಕಟ್ಟಲು ಕೈಗೊಂಡಿರುವ ಕಾರ್ಯಗಳು ಮತ್ತದರ ಮಾಹಿತಿ ಬಗ್ಗೆ ಮಾತನಾಡಿದರು.

ಕುಟುಂಬವೇ ಕಷ್ಟದಲ್ಲಿದ್ದರೂ ಕೊಡಗಿನ ಡಿಸಿ ಶ್ರೀವಿದ್ಯಾ ಕೆಲಸ ಗೊತ್ತೆ?ಕುಟುಂಬವೇ ಕಷ್ಟದಲ್ಲಿದ್ದರೂ ಕೊಡಗಿನ ಡಿಸಿ ಶ್ರೀವಿದ್ಯಾ ಕೆಲಸ ಗೊತ್ತೆ?

ಪ್ರವಾಹಕ್ಕೆ ತುತ್ತಾದ ಕೊಡಗಿನ ಸಹಾಯಕ್ಕೆ ಧಾವಿಸಬೇಕು ಎಂದು ಕುಮಾರಸ್ವಾಮಿ ಅವರು ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ. ಗೃಹ ಮಂತ್ರಿಗಳು ಹಾಗೂ ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕುಮಾರಣ್ಣ ಸರ್ಕಾರಕ್ಕೆ 150 ದಿನ : ಕೇಂದ್ರದಿಂದ ಸಿಕ್ಕಿದ್ದೇನು?ಕುಮಾರಣ್ಣ ಸರ್ಕಾರಕ್ಕೆ 150 ದಿನ : ಕೇಂದ್ರದಿಂದ ಸಿಕ್ಕಿದ್ದೇನು?

ಅಷ್ಟೆ ಅಲ್ಲದೆ ವಿವಿಧ ಖಾಸಗಿ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರಿಗೂ ಕೊಡಗಿಗೆ ನೆರವಾಗಲು ಸಿಎಂ ಮನವಿ ಮಾಡಿದ್ದರು ಅದರಂತೆ ಲಕ್ಷಾಂತರ ಜನ ನೆರವು ಸಹ ನೀಡಿದ್ದರು. ಇಲ್ಲಿಯವರೆಗೆ ಕೊಡಗಿನಲ್ಲಿ ಆಗಿರುವ ಕಾರ್ಯಗಳ ಬಗ್ಗೆ ಸಿಎಂ ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಿಂದ ಕೊಡಗಿಗೆ 127 ಕೋಟಿ ಅನುದಾನ

ರಾಜ್ಯದಿಂದ ಕೊಡಗಿಗೆ 127 ಕೋಟಿ ಅನುದಾನ

ಈ ವರೆಗೆ ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರ 127 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ಪ್ರಕೃತಿಯ ಕೋಪಕ್ಕೆ ಜರ್ಜರಿತವಾಗಿರುವ ಕೊಡಗು ಜಿಲ್ಲೆಯ ಪುನರ್ ನಿಮಾಣ ಸರ್ಕಾರದ ಆದ್ಯತೆ. ಇದನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಕೊಡಗಿನ ಜನರ ಇಚ್ಚೆಗೆ ಅನುಸಾರ ಮನೆ

ಕೊಡಗಿನ ಜನರ ಇಚ್ಚೆಗೆ ಅನುಸಾರ ಮನೆ

ಕೊಡಗು ಅಭಿವೃದ್ಧಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರ ರಚನೆ ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದು, ಅವರ ಇಚ್ಛೆಗೆ ಅನುಗುಣವಾಗಿ ಮನೆ ನಿರ್ಮಿಸಿ ಕೊಡಲಾಗುವುದು.

ಪ್ರಕೃತಿ ವಿರುದ್ಧ ಚಟುವಟಿಕೆ ನಿಲ್ಲಿಸದಿದ್ದರೆ ಕೊಡಗಿಗೆ ಉಳಿಗಾಲವಿಲ್ಲ!ಪ್ರಕೃತಿ ವಿರುದ್ಧ ಚಟುವಟಿಕೆ ನಿಲ್ಲಿಸದಿದ್ದರೆ ಕೊಡಗಿಗೆ ಉಳಿಗಾಲವಿಲ್ಲ!

ಇನ್ಫೋಸಿಸ್‌ 25 ಕೋಟಿ ಕೊಟ್ಟಿದೆ

ಇನ್ಫೋಸಿಸ್‌ 25 ಕೋಟಿ ಕೊಟ್ಟಿದೆ

ಕೊಡಗು ಜಿಲ್ಲೆಯ ಸಂಕಷ್ಟಕ್ಕೆ ಸಾರ್ವಜನಿಕರು ಅಭೂತಪೂರ್ವ ಬೆಂಬಲ ನೀಡಿದ್ದು, ಈ ವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 187.16 ಕೋಟಿ ರೂ. ಗಳ ದೇಣಿಗೆ ಹರಿದುಬಂದಿದೆ. ಇನ್ಫೋಸಿಸ್‌ ಪ್ರತಿಷ್ಠಾನವು 25 ಕೋಟಿ ರೂ. ಗಳ ನೆರವು ನೀಡುವುದಾಗಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಅವರು ಘೋಷಿಸಿದ್ದಾರೆ.

ಡಬಲ್‌ ಬೆಡ್‌ರೂಮ್‌ ಮನೆ

ಡಬಲ್‌ ಬೆಡ್‌ರೂಮ್‌ ಮನೆ

ಮಡಿಕೇರಿಯಲ್ಲಿ ಮನೆ ಕಳೆದುಕೊಂಡವರಿಗೆಂದು ಈಗಾಗಲೇ ಮನೆಗಳನ್ನು ತ್ವರಿತಗತಿಯಲ್ಲಿ ನಿರ್ಮಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಸಿಂಗಲ್‌ ಬೆಡ್‌ರೂಮ್ ಮನೆಯ ಬದಲಿಗೆ ಡಬಲ್‌ ಬೆಡ್‌ರೂಮ್‌ ಮನೆ ನೀಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ: ಕುಮಾರಸ್ವಾಮಿಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ: ಕುಮಾರಸ್ವಾಮಿ

ಕೊಡಗು ಸಂಬಂಧ ಮೋದಿಗೆ ಮನವಿ

ಕೊಡಗು ಸಂಬಂಧ ಮೋದಿಗೆ ಮನವಿ

ಕೊಡಗು ನೆರೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನೆರವು ನೀಡಬೇಕೆಂದು ಕುಮಾರಸ್ವಾಮಿ ಅವರು ನಿಯೋಗವೊಂದನ್ನು ಕರೆದುಕೊಂಡು ಹೋಗಿ ಮೋದಿ ಅವರನ್ನು ಭೇಟಿ ಆಗಿದ್ದರು. ಅಲ್ಲದೆ ಗೃಹ ಸಚಿವ ರಾಜನಾಥ ಸಿಂಗ್, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಆಗಿದ್ದರು.

English summary
State government given 127 crore to flood affected Kodagu district. Kumaraswamy said government giving double bedroom houses to people of Kodagu who lost their house in flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X