ಮಮತಾ ಬ್ಯಾನರ್ಜಿ ಹೆಸರು ಬರೆದು ನಿವೃತ್ತ ಐಪಿಎಸ್ ಅಧಿಕಾರಿ ಆತ್ಮಹತ್ಯೆ
ಕೋಲ್ಕತಾ, ಫೆಬ್ರವರಿ 23: ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ, ತಮ್ಮ ಸಾವಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿದ್ದು ಪತ್ತೆಯಾಗಿದೆ.
ಚುನಾವಣೆ ಬಂದಾಗಲೇ ಉಗ್ರರ ದಾಳಿ ನಡೆದಿದ್ದು ಹೇಗೆ?: ಮಮತಾ ಬ್ಯಾನರ್ಜಿ ಮತ್ತೆ ವಿವಾದ
1986ರ ಬ್ಯಾಚ್ನ ಪೊಲೀಸ್ ಅಧಿಕಾರಿಯಾಗಿದ್ದ ಗೌರವ್ ದತ್ ಅವರ ದೇಹ ಮೊಣಕೈ ಕತ್ತರಿಸಿಕೊಂಡ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಫೆ 19ರಂದು ಪತ್ತೆಯಾಗಿತ್ತು. ಗೌರವ್ ಅವರು ಕಳೆದ ವರ್ಷವಷ್ಟೇ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು.
ಮೋದಿ ಸರ್ಕಾರ ಕಿತ್ತೆಸೆಯಲು ಗಾಂಧೀಜಿ ಬಳಿ ದೀದಿ ಪ್ರಾರ್ಥನೆ!
'ನನ್ನ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಮೂಲಕ ಮುಖ್ಯಮಂತ್ರಿ ಅವರೇ ನನ್ನ ಸಾವಿಗೆ ನೇರ ಹೊಣೆ' ಎಂದು ಅವರು ಆತ್ಮಹತ್ಯೆ ನೋಟ್ನಲ್ಲಿ ಬರೆದಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಅವರು, ನನ್ನ ಎರಡು ಬಾಕಿ ಪ್ರಕರಣಗಳನ್ನು ಪೂರ್ಣಗೊಳಿಸಲು ಅವರು ನಿರಾಕರಿಸಿದ್ದರು. ಒಂದು ಪ್ರಕರಣದ ಕಡತವನ್ನು ಪಶ್ಚಿಮ ಬಂಗಾಳ ಸರ್ಕಾರ ಉದ್ದೇಶಪೂರ್ವಕವಾಗಿ ಕಳೆದುಹಾಕಿತು. ಎರಡನೆಯ ಪ್ರಕರಣದಲ್ಲಿ ಭ್ರಷ್ಟಾಚಾರ ಪ್ರಕರಣವನ್ನು ಕೈಬಿಡಬಹುದಾಗಿತ್ತು. ಆದರೆ, ಡಿಜಿ ಮನವಿ ಮಾಡಿದ್ದರೂ ಮುಖ್ಯಮಂತ್ರಿ ಅದನ್ನು ನಿರಾಕರಿಸಿದ್ದರು ಎಂದು ಆರೋಪಿಸಿದ್ದಾರೆ.
Ex IPS officer Gaurav Dutt committed Suicide, mentions Mamata Banerjee in his suicide note stating that she victimzed him for 10 years, blocked his savings & didn't drop 2 pending cases against him which had no substantial proofs
— Anshul Saxena (@AskAnshul) 23 February 2019
And, Mamata Banerjee talks about saving Democracy
ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿ ನನಗೆ ಹತ್ತು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂಬ ಕಾರಣಕ್ಕೆ ನನ್ನನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ನಡೆಸಿದರು ಎಂದು ಹೇಳಿದ್ದಾರೆ.
ಅಕ್ರಮ ಆಸ್ತಿ ಆರೋಪ: ರಾಬರ್ಟ್ ವಾದ್ರಾ ಬೆಂಬಲಕ್ಕೂ ಬಂದ ಮಮತಾ ಬ್ಯಾನರ್ಜಿ
ಗೌರವದಿಂದ ಬದುಕಲು ಸಾಧ್ಯವಾಗದೆ ಇದ್ದರೆ ಗೌರವಯುತವಾಗಿ ಸಾಯುವುದು ಒಳಿತು ಎಂದು ಅವರು ಹೇಳಿಕೊಂಡಿದ್ದಾರೆ.
ಗೌರವ್ ಅವರ ತಂದೆ ಗೋಪಾಲ್ ದತ್, ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.