ಮಮತಾ ಬ್ಯಾನರ್ಜಿ ಉತ್ತಮ ಪ್ರಧಾನಿಯಾಗಬಲ್ಲರು: ಯಶವಂತ್ ಸಿನ್ಹಾ
ಕೋಲ್ಕತ್ತಾ, ಡಿಸೆಂಬರ್ 10: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ, ಮಮತಾ ಬ್ಯಾನರ್ಜಿ ಅವರಿಗೆ ಉತ್ತಮ ಪ್ರಧಾನಿಯಾಗುವ ಎಲ್ಲ ಲಕ್ಷಣಗಳೂ ಇವೆ ಎಂದು ಬಿಜೆಪಿ ಮಾಜಿ ಮುಖಂಡ ಯಶವಂತ್ ಸಿನ್ಹಾ ಹೇಳಿದರು.
ಮಹಾಘಟಬಂಧನಕ್ಕೆ ಮುಹೂರ್ತ: ಇಂದು ವಿರೋಧ ಪಕ್ಷಗಳ ಸಭೆ
ಕೋಲ್ಕತ್ತಾದಲ್ಲಿ ಭಾನುವಾರ ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ 'ಐಡಿಯಾ ಆಫ್ ಬಾಂಗ್ಲಾ' ಎಂಬ ಟಾಕ್ ಶೋ ವೊಂದರಲ್ಲಿ ಪಾಲ್ಗೊಂಡಿದ್ದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಸಂಸ್ಥೆಗಳನ್ನು ಹಾಳುಗೆಡವುತ್ತಿದ್ದಾರೆ. ಕೇಂದ್ರ ಮಂತ್ರಿಮಂಡಲವನ್ನೂ ಹಾಳುಗೆಡವುತ್ತಿದ್ದಾರೆ' ಎಂದು ಆರೋಪಿಸಿದರು.
ಐದು ರಾಜ್ಯಗಳಲ್ಲಿ ಮುಂದೇನು ಎಂಬ ಚರ್ಚೆಯಲ್ಲಿ ತೊಡಗಿದ ಅಮಿತ್ ಶಾ
"ಪ್ರಧಾನಿ ಮೋದಿ ಹಲವು ಮಹತ್ವದ ನಿರ್ಧಾರಗಳನ್ನು ಸಂಪುಟದ ಗಮನಕ್ಕೆ ತರದೆ ತೆಗೆದುಕೊಂಡಿದ್ದಾರೆ. ಅದು ರಫೇಲ್ ಡೀಲ್ ಇರಬಹುದು, ಅಪನಗದೀಕರಣವಿರಬಹುದು" ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಸಿನ್ಹಾ ದೂರಿದರು.
"ಅಪನಗದೀಕರಣವೆಂಬುದು ಒಂದು ದುರಂತ" ಎಂದ ಅವರು, ನಂತರ ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿ ಅವರು ಉತ್ತಮ ಪ್ರಧಾನಿಯಾಗಬಲ್ಲ ಎಲ್ಲಾ ಲಕ್ಷಣಗಳನ್ನೂ ಹೊಂದಿದ್ದಾರೆ ಎಂದರು.
ನಾಯ್ಡು ಮುಖಕ್ಕೆ ಮಂಗಳಾರತಿ ಮಾಡಿದರೇ ಮಮತಾ, ಮಾಯಾವತಿ?!
2019 ರ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಟಿಎಂ ಸಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.