ಯಲ್ಲಾಪುರ ದೇವಸ್ಥಾನದ ಪ್ರಧಾನ ಅರ್ಚಕನಿಗೆ ಚಪ್ಪಲಿ ಏಟು
ಕಾರವಾರ, ಜನವರಿ 31: ಕಾರವಾರ ಜಿಲ್ಲೆಯ ಯಲ್ಲಾಪುರದ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಚುನಾವಣೆ ಹಿನ್ನಲೆಯಲ್ಲಿ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ.
ಯಲ್ಲಾಪುರ ಪ್ರಸಿದ್ಧ ದೇವಿ ದೇವಸ್ಥಾನದ ಅರ್ಚಕರಿಗೆ ಚಪ್ಪಲಿಯಿಂದ ವಿರೋಧಿ ಬಣ ಹೊಡೆದಿದೆ. ಜನವರಿ 31 ರಂದು ನಡೆಯಬೇಕಾಗಿದ್ದ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದ ಗಲಾಟೆಯಾಗಿದೆ.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಎದುರೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ಶಾಸಕರೊಂದಿಗೆ ಪರಶುರಾಮ ಅವರ ಬಣ ಮಾತುಕತೆ ಮುಗಿಸಿ ವಾಪಸ್ ಆಗುತ್ತಿದಾಗ ಘಟನೆ ನಡೆದಿದೆ.

ಬಾಬು ಬಾಂದೇಕರ ಬಣದವರಿಂದ ಪರಶುರಾಮ ಆಚಾರ್ಯ ಮೇಲೆ ಹಲ್ಲೆ ಮಾಡಲಾಗಿದ್ದು, ಪರಶುರಾಮ ಬಣ ಶಾಸಕಶಿವರಾಮ ಹೆಬ್ಬಾರ ಜೊತೆ ಮಾತುಕತೆಗೆ ಬಂದಾಗ ಚಪ್ಪಲಿಯಿಂದ ಹೊಡೆಯಲಾಗಿದೆ.
ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಬಾಬು ಬಾಂದೇಕರ ಹಿಂದೂಗಳ ಪವಿತ್ರ ದೇವಿ ದೇವಾಲಯದ ಪ್ರಧಾನ ಅರ್ಚನರಾದ ಪರಶುರಾಮ ಆಚಾರಿಯವರ ಮೇಲೆ ಚಪ್ಪಲಿಯಿಂದ ಹೊಡೆದ ಪ್ರಕರಣ ಒಂದೇ ದಿನದಲ್ಲಿ ತಣ್ಣಗಾಗಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಯಲ್ಲಾಪುರ ಶಾಸಕರ ಕಚೇರಿ ಮೆಟ್ಟಿಲುಗಳ ಮುಂದೆ ಚಪ್ಪಲಿಯಿಂದ ಹೊಡೆದಾಡಿಕೊಂಡರರೂ ಶಾಸಕರಾದಿಯಾಗಿ ಬಿಜೆಪಿ ಪ್ರಮುಖರು ಮೌನವಾಗಿರುವುದು ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.












Click it and Unblock the Notifications