ಉತ್ತರ ಕನ್ನಡದಲ್ಲಿ ಭಾರೀ ಮಳೆ: ಜಿಲ್ಲೆಯ ಡ್ಯಾಂಗಳ ನೀರಿನ ಮಟ್ಟ
ಕಾರವಾರ, ಜುಲೈ 20: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅಂಕೋಲಾದಲ್ಲಿ ಗುಡ್ಡ ಕುಸಿದು ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ಭಾರತೀಯ ಹವಮಾನ ಇಲಾಖೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಾಂಕ 21/07/2024ರ ಬೆಳಗ್ಗೆ 8.30ರ ತನಕ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಗುಡ್ಡ ಕುಸಿತ, ಹಳ್ಳಕೊಳ್ಳಗಳು ತುಂಬಿರುವುದು, ನದಿಗಳು ತುಂಬಿ ಹರಿಯುತ್ತಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ, ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕದ್ರಾ, ಕೊಡಸಳ್ಳಿ, ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಗೇರುಸೊಪ್ಪ ಡ್ಯಾಂಗಳಿವೆ. ಜುಲೈ 20ರ ಮಾಹಿತಿಯಂತೆ ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ?, ಒಳಹರಿವು, ಹೊರ ಹರಿವು? ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಡ್ಯಾಂಗಳ ನೀರಿನ ಮಟ್ಟ
* ಕಾರವಾರ ತಾಲೂಕಿನಲ್ಲಿರುವ ಕದ್ರಾ ಡ್ಯಾಂ ಗರಿಷ್ಠ ಮಟ್ಟ 34.50. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 30.00. ಇಂದಿನ ನೀರಿನ ಮಟ್ಟ 29.32. ನೀರಿನ ಒಳಹರಿವು 42,453.0 ಕ್ಯುಸೆಕ್. ಹೊರ ಹರಿವು 44,586.0 ಕ್ಯೂಸೆಕ್ ಆಗಿದೆ.
* ಕಾರವಾರ ತಾಲೂಕಿನಲ್ಲಿರುವ ಕೊಡಸಳ್ಳಿ ಡ್ಯಾಂ ಗರಿಷ್ಠ ಮಟ್ಟ75.50. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 70.00. ಇಂದಿನ ನೀರಿನ ಮಟ್ಟ 69.75. ನೀರಿನ ಒಳಹರಿವು 24,494 ಕ್ಯುಸೆಕ್. ಹೊರ ಹರಿವು 25,937 ಕ್ಯೂಸೆಕ್ ಆಗಿದೆ.
* ಜೋಯಿಡಾ ತಾಲೂಕಿನಲ್ಲಿರುವ ಸೂಪಾ ಡ್ಯಾಂ ಗರಿಷ್ಠ ಮಟ್ಟ 564. ಇಂದಿನ ನೀರಿನ ಮಟ್ಟ 531. ನೀರಿನ ಒಳಹರಿವು 41,278.49 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.
* ಹಳಿಯಾಳ ತಾಲೂಕಿನಲ್ಲಿರುವ ತಟ್ಟಿಹಳ್ಳ ಡ್ಯಾಂ ಗರಿಷ್ಠ ಮಟ್ಟ 468.38. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 466.30. ಇಂದಿನ ನೀರಿನ ಮಟ್ಟ 458.69. ನೀರಿನ ಒಳಹರಿವು 6,560.07 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.
* ದಾಂಡೇಲಿ ತಾಲೂಕಿನಲ್ಲಿರುವ ಬೊಮ್ಮನಹಳ್ಳಿ ಡ್ಯಾಂ ಗರಿಷ್ಠ ಮಟ್ಟ 438.38. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 436.63 ಇಂದಿನ ನೀರಿನ ಮಟ್ಟ 436.28. ನೀರಿನ ಒಳಹರಿವು 5894.0 ಕ್ಯುಸೆಕ್. ಹೊರ ಹರಿವು 7287.0 ಕ್ಯೂಸೆಕ್ ಆಗಿದೆ.
* ಹೊನ್ನಾವರ ತಾಲೂಕಿನಲ್ಲಿರುವ ಗೇರುಸೊಪ್ಪ ಡ್ಯಾಂ ಗರಿಷ್ಠ ಮಟ್ಟ 55.00. ಇಂದಿನ ನೀರಿನ ಮಟ್ಟ 50.12. ನೀರಿನ ಒಳಹರಿವು 12,102 ಕ್ಯುಸೆಕ್. ಹೊರ ಹರಿವು 14,590.0 ಕ್ಯೂಸೆಕ್ ಆಗಿದೆ.
* ಲಿಂಗನಮಕ್ಕಿ ಡ್ಯಾಂ, ಸಾಗರ. ಶಿವಮೊಗ್ಗ. ಡ್ಯಾಂ ಗರಿಷ್ಠ ಮಟ್ಟ 1819.00. ಇಂದಿನ ನೀರಿನ ಮಟ್ಟ 1794.30. ನೀರಿನ ಒಳಹರಿವು 69,724.00 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.
-
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ? -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rain: ಬೆಂಗಳೂರಿನಲ್ಲಿ ತಾಪಮಾನ ಕುಸಿತ: ಸುಡುಬಿಸಿಲಿಗೆ ಬ್ರೇಕ್ ಹಾಕಿದ ವರ್ಷದ ಮೊದಲ ಮಳೆ, ತಂಪಾದ ಸಿಲಿಕಾನ್ ಸಿಟಿ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications