ಉತ್ತರ ಕನ್ನಡದಲ್ಲಿ ಭಾರೀ ಮಳೆ: ಜಿಲ್ಲೆಯ ಡ್ಯಾಂಗಳ ನೀರಿನ ಮಟ್ಟ
ಕಾರವಾರ, ಜುಲೈ 20: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅಂಕೋಲಾದಲ್ಲಿ ಗುಡ್ಡ ಕುಸಿದು ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ಭಾರತೀಯ ಹವಮಾನ ಇಲಾಖೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಾಂಕ 21/07/2024ರ ಬೆಳಗ್ಗೆ 8.30ರ ತನಕ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಗುಡ್ಡ ಕುಸಿತ, ಹಳ್ಳಕೊಳ್ಳಗಳು ತುಂಬಿರುವುದು, ನದಿಗಳು ತುಂಬಿ ಹರಿಯುತ್ತಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ, ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕದ್ರಾ, ಕೊಡಸಳ್ಳಿ, ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಗೇರುಸೊಪ್ಪ ಡ್ಯಾಂಗಳಿವೆ. ಜುಲೈ 20ರ ಮಾಹಿತಿಯಂತೆ ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ?, ಒಳಹರಿವು, ಹೊರ ಹರಿವು? ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಡ್ಯಾಂಗಳ ನೀರಿನ ಮಟ್ಟ
* ಕಾರವಾರ ತಾಲೂಕಿನಲ್ಲಿರುವ ಕದ್ರಾ ಡ್ಯಾಂ ಗರಿಷ್ಠ ಮಟ್ಟ 34.50. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 30.00. ಇಂದಿನ ನೀರಿನ ಮಟ್ಟ 29.32. ನೀರಿನ ಒಳಹರಿವು 42,453.0 ಕ್ಯುಸೆಕ್. ಹೊರ ಹರಿವು 44,586.0 ಕ್ಯೂಸೆಕ್ ಆಗಿದೆ.
* ಕಾರವಾರ ತಾಲೂಕಿನಲ್ಲಿರುವ ಕೊಡಸಳ್ಳಿ ಡ್ಯಾಂ ಗರಿಷ್ಠ ಮಟ್ಟ75.50. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 70.00. ಇಂದಿನ ನೀರಿನ ಮಟ್ಟ 69.75. ನೀರಿನ ಒಳಹರಿವು 24,494 ಕ್ಯುಸೆಕ್. ಹೊರ ಹರಿವು 25,937 ಕ್ಯೂಸೆಕ್ ಆಗಿದೆ.
* ಜೋಯಿಡಾ ತಾಲೂಕಿನಲ್ಲಿರುವ ಸೂಪಾ ಡ್ಯಾಂ ಗರಿಷ್ಠ ಮಟ್ಟ 564. ಇಂದಿನ ನೀರಿನ ಮಟ್ಟ 531. ನೀರಿನ ಒಳಹರಿವು 41,278.49 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.
* ಹಳಿಯಾಳ ತಾಲೂಕಿನಲ್ಲಿರುವ ತಟ್ಟಿಹಳ್ಳ ಡ್ಯಾಂ ಗರಿಷ್ಠ ಮಟ್ಟ 468.38. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 466.30. ಇಂದಿನ ನೀರಿನ ಮಟ್ಟ 458.69. ನೀರಿನ ಒಳಹರಿವು 6,560.07 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.
* ದಾಂಡೇಲಿ ತಾಲೂಕಿನಲ್ಲಿರುವ ಬೊಮ್ಮನಹಳ್ಳಿ ಡ್ಯಾಂ ಗರಿಷ್ಠ ಮಟ್ಟ 438.38. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 436.63 ಇಂದಿನ ನೀರಿನ ಮಟ್ಟ 436.28. ನೀರಿನ ಒಳಹರಿವು 5894.0 ಕ್ಯುಸೆಕ್. ಹೊರ ಹರಿವು 7287.0 ಕ್ಯೂಸೆಕ್ ಆಗಿದೆ.
* ಹೊನ್ನಾವರ ತಾಲೂಕಿನಲ್ಲಿರುವ ಗೇರುಸೊಪ್ಪ ಡ್ಯಾಂ ಗರಿಷ್ಠ ಮಟ್ಟ 55.00. ಇಂದಿನ ನೀರಿನ ಮಟ್ಟ 50.12. ನೀರಿನ ಒಳಹರಿವು 12,102 ಕ್ಯುಸೆಕ್. ಹೊರ ಹರಿವು 14,590.0 ಕ್ಯೂಸೆಕ್ ಆಗಿದೆ.
* ಲಿಂಗನಮಕ್ಕಿ ಡ್ಯಾಂ, ಸಾಗರ. ಶಿವಮೊಗ್ಗ. ಡ್ಯಾಂ ಗರಿಷ್ಠ ಮಟ್ಟ 1819.00. ಇಂದಿನ ನೀರಿನ ಮಟ್ಟ 1794.30. ನೀರಿನ ಒಳಹರಿವು 69,724.00 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.
-
Bengaluru Rain: ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಹಲವೆಡೆ ತುಂತುರು ಮಳೆ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್











Click it and Unblock the Notifications