ಕರ್ನಾಟಕದ ಬರೋಬ್ಬರಿ 17 ಜಿಲ್ಲೆಗಳಲ್ಲಿ ನೀರಿನ ಕೊರತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಉತ್ತರ ಕರ್ನಾಟಕದ ಶುಷ್ಕ ಜಿಲ್ಲೆಗಳಿಗಿಂತ ಹೆಚ್ಚು ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಬೆಂಗಳೂರು, ಮಾರ್ಚ್ 17: ಕರ್ನಾಟಕದ ಬರೋಬ್ಬರಿ 17 ಜಿಲ್ಲೆಗಳಲ್ಲಿ ಬೆಂಗಳೂರಿನಿಂದ ಹಿಡಿದು ಉತ್ತರದ ನೀರಾವರಿ ಜಿಲ್ಲೆಗಳವರೆಗೆ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ) ವರದಿ ಎಚ್ಚರಿಸಿದೆ.
ಸಂಶೋಧನಾ ಸಂಸ್ಥೆ ಇಎಂಪಿಆರ್ಐ ಸರ್ಕಾರಿ ಮೂಲಗಳಿಂದ ಜಿಲ್ಲಾ ಮಟ್ಟದ ಅಂಕಿಅಂಶಗಳನ್ನು ಪರಿಶೀಲನೆ ನಡೆಸಿದ್ದು ನೀರಿನ ಕೊರೆತೆ ಕಂಡುಹಿಡಿಯಲು 20 ಸೂಚಕಗಳನ್ನು ಬಳಸಿದ್ದಾರೆ. ಈ ಸೂಚಕಗಳು ಮೇಲ್ಮೈ ಮತ್ತು ಅಂತರ್ಜಲ ಲಭ್ಯತೆ, ಅರಣ್ಯ ಪ್ರದೇಶ, ಜನಸಾಂದ್ರತೆ, ದೇಶೀಯ, ಕೃಷಿ, ಜಾನುವಾರು ಮತ್ತು ಕೈಗಾರಿಕೆಗಳಿಗೆ ನೀರಿನ ಬೇಡಿಕೆ, ಸರಾಸರಿ ವಾರ್ಷಿಕ ಮಳೆ ಮತ್ತು ಹಲವಾರು ದಶಕಗಳ ತಾಪಮಾನದ ದತ್ತಾಂಶಗಳನ್ನು ಒಳಗೊಂಡಿವೆ ಎಂದು ಡಿಎಚ್ ವರದಿ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಉತ್ತರ ಕರ್ನಾಟಕದ ಶುಷ್ಕ ಜಿಲ್ಲೆಗಳಿಗಿಂತ ಹೆಚ್ಚು ದುರ್ಬಲ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದರ ನಂತರ ರಾಯಚೂರು, ಚಿಕ್ಕಬಳ್ಳಾಪುರ, ಕಲಬುರಗಿ, ಗದಗ, ಕೊಪ್ಪಳ, ಬಳ್ಳಾರಿ, ಬಿಜಾಪುರ, ಬೀದರ್ ಮತ್ತು ಬೆಳಗಾವಿ. ಬೆಂಗಳೂರು ನಗರ 12ನೇ ಸ್ಥಾನದಲ್ಲಿದ್ದು, ಕೇವಲ ಒಂದು ಸ್ಥಾನ ಕೆಳಗೆ ಕೋಲಾರ, ಬಾಗಲಕೋಟೆ, ದಾವಣಗೆರೆ, ಯಾದಗಿರಿ, ಚಿತ್ರದುರ್ಗ ಮತ್ತು ತುಮಕೂರು ಕೂಡ ಪಟ್ಟಿಯಲ್ಲಿವೆ.
'ಮ್ಯಾಪಿಂಗ್ ಕ್ಲೈಮೇಟ್ ಚೇಂಜ್ ವಲ್ನರಬಿಲಿಟಿ: ಕರ್ನಾಟಕದ ವಿವಿಧ ಜಿಲ್ಲೆಗಳಾದ್ಯಂತ ಜಲಸಂಪನ್ಮೂಲ ವಲಯದ ಮೌಲ್ಯಮಾಪನ' ಎಂಬ ಶೀರ್ಷಿಕೆಯ ವರದಿಯು ಮುಂಬರುವ ಅಪಾಯಗಳ ಬಗ್ಗೆ ನೀತಿ ನಿರೂಪಕರಿಗೆ ಎಚ್ಚರಿಕೆ ನೀಡಿದೆ. ಈ ಸೂಚ್ಯಂಕಗಳ ಆಧಾರದ ಮೇಲೆ ಉಡುಪಿಯು ಕಡಿಮೆ ಬಾಧಿಸಲ್ಪಟ್ಟ ಜಿಲ್ಲೆಯಾಘಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಮತ್ತು ಶಿವಮೊಗ್ಗ ನಂತರದ ಸ್ಥಾನದಲ್ಲಿದೆ. ಉಳಿದವುಗಳನ್ನು ಮಧ್ಯಮವಾಗಿ ಬಾಧಿಸಲ್ಪಟ್ಟಿವೆ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಹವಾಮಾನ ಬದಲಾವಣೆಯು ಈ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಹೊಸ ಸವಾಲುಗಳನ್ನು ತಂದೊಡ್ಡಬಹುದು ಎಂದು ತಿಳಿಸಿದೆ.
ಕರ್ನಾಟಕದ ಹವಾಮಾನ ಕ್ರಿಯಾ ಯೋಜನೆಯು ಮಳೆ ಮತ್ತು ನದಿಯ ಹರಿವುಗಳಲ್ಲಿ ಗಮನಾರ್ಹ ಬದಲಾವಣೆಯ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದೆ ಎಂದು ವರದಿ ತಿಳಿಸಿದೆ. ಜಾಗತಿಕ ಹೊರಸೂಸುವಿಕೆಯ ಸನ್ನಿವೇಶವನ್ನು (RCP 4.5) ಅನುಕರಿಸಿದ ಮಾದರಿಗಳು ದೊಡ್ಡ ಪ್ರಮಾಣದ ಬದಲಾವಣೆಗಳ ಸುಳಿವು ನೀಡಿವೆ. ಜಲಾನಯನ ಪ್ರದೇಶದ ಅಪ್ಸ್ಟ್ರೀಮ್ (ಪ್ರಾಥಮಿಕವಾಗಿ ಪಶ್ಚಿಮ ಘಟ್ಟಗಳಲ್ಲಿ) ಗಮನಾರ್ಹ ಇಳಿಕೆಯ ಪ್ರವೃತ್ತಿಯನ್ನು ತೋರಿಸುತ್ತದೆ ಮತ್ತು ಕೆಳಭಾಗದ ವಿಸ್ತರಣೆಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತವೆ ಎಂದು ಅದು ಹೇಳಿದೆ.

ನೀರಿನ ಲಭ್ಯತೆಯಲ್ಲಿ ಕುಸಿತ
ಇಲ್ಲಿ ತೊಂದರೆಯೆಂದರೆ ಭಾರೀ ಮಳೆಯಿಂದ ಹರಿವ ನೀರಿನ್ನು ಹಿಡಿದಿಡಲು ಸಜ್ಜುಗೊಳಿಸದ ಪ್ರದೇಶಗಳಲ್ಲಿ ಸಮಸ್ಯೆಯಾಗಿದೆ. ಇದರಿಂದ ಧಾರಾಕಾರ ಮಳೆಯನ್ನು ಕಾಣುವ ಘಟ್ಟಗಳು ನೀರಿನ ಲಭ್ಯತೆಯಲ್ಲಿ ಕುಸಿತವನ್ನು ಕಾಣಲು ಪ್ರಾರಂಭಿಸುತ್ತವೆ. ಉದಾಹರಣೆಗೆ, ಸಕಲೇಶಪುರ ಬಳಿಯ ಹೇಮಾವತಿ ನದಿಯಲ್ಲಿ ಹೊಳೆ ಹರಿವು ಶೇ.60.11 ರಷ್ಟು ಕಡಿಮೆಯಾದರೆ ಕೊಳ್ಳೇಗಾಲದ ಕಾವೇರಿ ಹೊಳೆ ಶೇ.40.98 ರಷ್ಟು ಮತ್ತು ತೊರೆಕಾಡನಹಳ್ಳಿ ಬಳಿಯ ಶಿಂಷಾ ಹೊಳೆ ಶೇ.27.61 ರಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದೆ.

ಬಿಕ್ಕಟ್ಟಿನಿಂದ ಪಾರು ಮಾಡಲು ಕ್ರಮ
ಎನ್ ಹೇಮಾ, ಪ್ರಧಾನ ತನಿಖಾಧಿಕಾರಿ ಮತ್ತು ಪ್ರಮುಖ ಲೇಖಕಿ, ಈ ಅಧ್ಯಯನವು ಪ್ರಾಥಮಿಕ ವರದಿಯಾಗಿದ್ದು, ವಿವಿಧ ಹೊಸ ಸನ್ನಿವೇಶಗಳಿಗಾಗಿ ಜಿಲ್ಲಾ ಮಟ್ಟದ ಮಾದರಿಗಳೊಂದಿಗೆ ಅನುಸರಿಸಬೇಕಾಗಿದೆ. ಪ್ರಸ್ತುತ ಅಧ್ಯಯನವು ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಕ್ರಮಗಳ ಅಗತ್ಯವನ್ನು ಒತ್ತಿಹೇಳಲು ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಜಿಲ್ಲಾ ಮಟ್ಟದ ಮಾದರಿಗಳು ಜನರನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಅಗತ್ಯವಾದ ನಿರ್ದಿಷ್ಟ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಕರ್ನಾಟಕದ ಜಲನೀತಿ ಪೂರಕ
ಎಂಪಿಆರ್ಐ ಡಿಜಿ ಜಗಮೋಹನ್ ಶರ್ಮಾ ಮಾತನಾಡಿ, ಕರ್ನಾಟಕದ ಜಲನೀತಿ ಈಗಾಗಲೇ ಅದನ್ನು ಸರಿಯಾದ ಹಾದಿಯಲ್ಲಿ ಇರಿಸಿದೆ. ನೀರನ್ನು ಸಂರಕ್ಷಿಸಲು ಪೂರೈಕೆ ಮತ್ತು ಬೇಡಿಕೆಯ ಬದಿಯ ನಿರ್ವಹಣೆಯ ಅವಶ್ಯಕತೆಯಿದೆ. ಹನಿ ನೀರಾವರಿ, ಮಳೆ ನೀರು ಕೊಯ್ಲು ಮತ್ತು ಸಂಸ್ಕರಿಸಿದ ನೀರಿನ ಮರುಬಳಕೆಯಂತಹ ಕ್ರಮಗಳ ಆಕ್ರಮಣಕಾರಿ ಅಳವಡಿಕೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಮಧ್ಯಸ್ಥಿಕೆಗಳೊಂದಿಗೆ ನಿಭಾಯಿಸಿ
ಕಾರ್ಬನ್ ಕ್ರೆಡಿಟ್ಗಳಂತಹ ದೊಡ್ಡ ಸಾಧನಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿರುವಾಗಲೂ ನೀರಿನ ಕೊರತೆಯನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸಬೇಕು ಮತ್ತು ಸ್ಥಳೀಯ ಮಧ್ಯಸ್ಥಿಕೆಗಳೊಂದಿಗೆ ಈ ಸಮಸ್ಯೆಯನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು.
-
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications