ಉಪ್ಪಾರ ಸಮುದಾಯಕ್ಕೊಂದು ಸಚಿವ ಸ್ಥಾನ ನೀಡಿ
ಚಾಮರಾಜನಗರ, ಸೆಪ್ಟೆಂಬರ್ 23 : ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಮಾಡಿದಲ್ಲಿ ರಾಜ್ಯದಲ್ಲಿ ಉಪ್ಪಾರ ಸಮಾಜದ ಏಕೈಕ ಶಾಸಕರಾಗಿರುವ ಚಾಮರಾಜನಗರ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ಉಪ್ಪಾರ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಉಪ್ಪಾರ
ಸಮಾಜದ
ಯುವ
ಮುಖಂಡ
ಮಲ್ಲಿಕಾರ್ಜುನ
ಚೌಕಶಿ
ಅವರು
ಈ
ಕುರಿತು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರನ್ನು
ಆಗ್ರಹಿಸಿದ್ದು,
ಪುಟ್ಟರಂಗಶೆಟ್ಟಿ
ಅವರು
ಸತತ
ಎರಡನೇ
ಬಾರಿಗೆ
ಶಾಸಕರಾಗಿ
ಆಯ್ಕೆಯಾಗಿದ್ದಾರೆ.
ತಮ್ಮ
ವಿದ್ಯಾರ್ಥಿ
ಜೀವನದಿಂದಲೇ
ಕಾಂಗ್ರೆಸ್
ಪಕ್ಷದ
ಕಟ್ಟಾ
ಅಭಿಮಾನಿ
ಹಾಗೂ
ಸಕ್ರಿಯ
ಕಾರ್ಯಕರ್ತರಾಗಿದ್ದಾರೆ
ಎಂದು
ಪ್ರಕಟಣೆಯಲ್ಲಿ
ಮಲ್ಲಿಕಾರ್ಜುನ
ಚೌಕಶಿ
ಹೇಳಿದ್ದಾರೆ.
['ಸಂಪುಟದಿಂದ
ನನ್ನನ್ನು
ಕೈ
ಬಿಟ್ಟರೆ
ಒಳ್ಳೆಯದು']
ಸ್ವತಂತ್ರ ದೊರಕಿ 61 ವರ್ಷಗಳ ನಂತರ ಉಪ್ಪಾರ ಸಮಾಜದ ಒಬ್ಬರು ವಿಧಾನಸಭಾ ಸದಸ್ಯರಾಗಿದ್ದಾರೆ. ಇದುವರೆಗೂ ಸಮಾಜದ ಯಾರೊಬ್ಬರು ಸಚಿವರಾಗಿಲ್ಲ. ಸಿ.ಪುಟ್ಟರಂಗಶೆಟ್ಟಿ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದರಿಂದ ಸಚಿವ ಸ್ಥಾನ ನೀಡಿದರೆ ಉಪ್ಪಾರರನ್ನು ಗೌರವಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. [ಹಾಸನ ಜಿಲ್ಲೆಗೊಂದು ಸಚಿವ ಸ್ಥಾನ ನೀಡಿ]
ಎಸ್ಸಿ, ಎಸ್ಟಿ, ಒಬಿಸಿ ಎಂದು ಗುಂಪಿನಲ್ಲಿ ಬಿಟ್ಟು ಕೇವಲ ಜಾತಿಗಳನ್ನು ಮಾತ್ರವೇ ಗಣನೆಗೆ ತೆಗೆದು ಕೊಳ್ಳುವುದಾದರೆ ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ ಸಮಾಜದ ನಂತರ ಅತಿ ಹೆಚ್ಚಿನ 30 ಲಕ್ಷ ಜನಸಂಖ್ಯೆ ಹೊಂದಿರುವುದು ಉಪ್ಪಾರ ಸಮುದಾಯ.
ತುಳಿತಕ್ಕೊಳಗಾಗಿರುವ ಮತ್ತು ಅಸಂಘಟಿತರಿಗಿರುವ ಈ ದೊಡ್ಡ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತಮ್ಮ ತತ್ವದಡಿ ಅಹಿಂದ ವರ್ಗದ ಹಿತ ಚಿಂತಕರೆಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಪುಟ್ಟರಂಗಶೆಟ್ಟಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಂದಹಾಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಸಿ.ಮಹದೇವಪ್ರಸಾದ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದಾರೆ. ಈಗ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಕೇಳಿಬಂದಿದೆ.
ಸಂಪುಟ ವಿಸ್ತರಣೆ/ಪುನಾರಚನೆ ಬಗ್ಗೆ ಚರ್ಚೆ ನಡೆಸಲು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಿ.ಪುಟ್ಟರಂಗಶೆಟ್ಟಿ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ 54,440 ಮತಗಳನ್ನು ಪಡೆದು ಕೆಜೆಪಿಯ ಕೆ.ಆರ್.ಮಲ್ಲಿಕಾರ್ಜುನಪ್ಪ ಅವರ ವಿರುದ್ಧ ಜಯಗಳಿಸಿದ್ದಾರೆ. [ಮಾಹಿತಿ : ಇಂಡಿಯಾ ವೋಟ್ಸ್]