ಸರ್ಜಿಕಲ್ ಸ್ಟ್ರೈಕ್: ಕನ್ನಡ ಪತ್ರಿಕೆಗಳಲ್ಲಿ ಯಾವುದು ಬೆಸ್ಟ್ ಕವರೇಜ್?
ಬೆಂಗಳೂರು, ಸೆಪ್ಟೆಂಬರ್ 30: ಉರಿ ಸೇನಾ ಕ್ಯಾಂಪ್ ಮೇಲೆ ನಾಲ್ವರು ಉಗ್ರರು ದಾಳಿ ಮಾಡಿ, ಹತ್ತೊಂಬತ್ತು ಯೋಧರನ್ನು ಕೊಂದ ನಂತರದ ಬೆಳವಣಿಗೆಯಲ್ಲಿ ಭಾರತದ ನಡೆ ಏನು, ಪಾಕ್ ಗೆ ಹೇಗೆ ಎದುರೇಟು ನೀಡಬಹುದು ಎಂಬ ಬಗ್ಗೆ ಕುತೂಹಲವಿತ್ತು. ಅದಕ್ಕೆ ಭಾರತೀಯ ಸೇನೆ ಲೆಕ್ಕಾಚಾರದ ಎದುರೇಟು ನೀಡಿದೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ಉಗ್ರರ ನೆಲೆಯನ್ನು ಧ್ವಂಸ ಮಾಡಿದ 'ಸರ್ಜಿಕಲ್ ಆಪರೇಷನ್' ಬಗ್ಗೆ ಅಧಿಕೃತವಾಗಿ ಮಾಹಿತಿ ತಿಳಿಸಲಾಯಿತು. ಭಾರತೀಯ ಸೇನೆಯ ಬಗ್ಗೆ ಹಾಗೂ ಕೇಂದ್ರ ಸರಕಾರದ ನಡೆ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಕ್ಷಾತೀತವಾಗಿ ಈ ನಿರ್ಧಾರವನ್ನು ಸ್ವಾಗತಿಸಲಾಗಿದೆ.[ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]
ಈ ದಾಳಿ ಬಗ್ಗೆ ಕನ್ನಡದ ಪತ್ರಿಕೆಗಳು ಏನು ಹೆಡ್ಡಿಂಗ್ ಕೊಟ್ಟಿವೆ, ಯಾವ ವಿಚಾರಕ್ಕೆ ಮಹತ್ವ ಕೊಟ್ಟಿವೆ ಓದಿದ್ರಾ? ಓದಿದ್ದರೂ ಪರವಾಗಿಲ್ಲ, ಮತ್ತೊಮ್ಮೆ ನಿಮ್ಮ ಗಮನಕ್ಕೆ ಇರಲಿ ಎಂದು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಶೀರ್ಷಿಕೆ ಹಾಗೂ ಮಾಹಿತಿಯನ್ನು ನಿಮಗಾಗಿ ಇಲ್ಲಿ ಕೊಡಲಾಗಿದೆ.

ಗಡಿ ದಾಟಿ ಉಗ್ರರ ಬಗ್ಗುಬಡಿದ ಭಾರತ
ವಿಜಯವಾಣಿಯಲ್ಲಿ ಉರಿ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಸೇನೆ ದಾಳಿ ನಡೆಸಿರುವುದು, ಏಳು ಉಗ್ರರ ನೆಲೆ ಧ್ವಂಸ ಮಾಡಿರುವುದು, 40 ಭಯೋತ್ಪಾದಕರ ಹತ್ಯೆ ಮತ್ತಿತರ ವಿವರಗಳಿವೆ ಜತೆಗೆ ಎಲ್ಲೆಲ್ಲೆ ದಾಳಿ ನಡೆದಿತ್ತು, ಎಲ್ಲ ರಾಜಕೀಯ ಪಕ್ಷಗಳು ದಾಳಿಗೆ ಬೆಂಬಲ ಸೂಚಿಸಿರುವುದನ್ನು ಹೈಲೈಟ್ ಮಾಡಲಾಗಿದೆ.

ಉರಿದವರಿಗೆ ಸಿಡಿಗುಂಡಿನ ಉತ್ತರ
ವಿಜಯ ಕರ್ನಾಟಕ ಎರಡು ಪುಟಗಳಲ್ಲಿ ಸೇನಾ ದಾಳಿಯ ಬಗ್ಗೆ ವಿವರಣೆ ನೀಡಿದೆ. ಮೊದಲ್ನೆ ಭಾಗವಾಗಿ ಉರಿ ಮೇಲಿನ ಉಗ್ರರ ದಾಳಿಗೆ ಭಾರತ ನೀಡಿದ ಉತ್ತರ ಎಂಬಂತೆ ಇದ್ದರೆ, ಸರ್ಜಿಕಲ್ ಅಟ್ಯಾಕ್ ನ ಡೀಟೇಲ್ ರಿಪೋರ್ಟ್ ಎಂದು ಹಲವು ಮಾಹಿತಿಯನ್ನು ಪ್ರಕಟಿಸಿದೆ

ಪಾಕ್ ಗೆ ನುಗ್ಗಿ ಉಗ್ರ ಸಂಹಾರ
ಮತ್ತೊಂದು ಪುಟದಲ್ಲಿ ಕಾರ್ಯಾಚರಣೆ ಆರಂಭವಾದ ವೇಳೆ, ಕಾರ್ಯಾಚರಣೆ ಎಷ್ಟು ಕಾಲ ನಡೆಯಿತು, ಎಲ್ಲೆಲ್ಲಿ ದಾಳಿ ನದೆಯಿತು ಎಂಬುದನ್ನು ಮ್ಯಾಪ್ ಸಹಿತ ಹಾಕಲಾಗಿದೆ.

'ಉರಿ' ದಾಳಿಗೆ ಪ್ರತೀಕಾರ
ಪ್ರಜಾವಾಣಿ ಪತ್ರಿಕೆಯಲ್ಲೂ ಉರಿ ಮೇಲಿನ ಉಗ್ರದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ ಎಂಬ ಶೀರ್ಷಿಕೆಯನ್ನೇ ನೀಡಲಾಗಿದೆ. ದಾಳಿ ಕಾರ್ಯಾಚರಣೆಯ ಸಂಪೂರ್ಣ ವಿವರ, ಸಮಯ, ಸ್ಥಳದ ಬಗ್ಗೆ ಗ್ರಾಫಿಕ್ಸ್ ಮಾಡಲಾಗಿದೆ.

ಪಾಕ್ ಮೇಲೆ ಭಾರತದ ಉರಿ ಸಿಡಿಲು
ಉದಯವಾಣಿಯಲ್ಲಿ ಉಅರಿ ದಾಳಿ ಪ್ರಸ್ತಾವ ಇದ್ದರೂ ಮನ್ ಕೀ ಬಾತ್ ಮುಗಿಯಿತು ಈಗ ಗನ್ ಕೀ ಬಾತ್ ಎಂಬ ಕಿಕ್ಕರ್ ಈ ಸಂದರ್ಭಕ್ಕೆ ತುಂಬ ಸೂಕ್ತವಾಗಿದೆ. ಸೇನೆ ದಾ ಕಾರ್ಯಾಚರಣೆಯ ವಿವರದ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಷಣ ಕ್ಷಣಕ್ಕೂ ಮಾಹಿತಿ ನೀಡಲಾಗಿತ್ತು ಎಂಬ ವಿವರ ಇದೆ. ಇಂಥ ದಾಳಿಯ ಸಂಭವವನ್ನು ಹಿಂದೆಯೇ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಎಂಬುದು ಕುತೂಹಲಕರವಾಗಿದೆ.

ಸಿಡಿದೆದ್ದ ಭಾರತ
ಕನ್ನಡಪ್ರಭದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿವರಣೆ ಇದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೇಳಿಕೆಗಳನ್ನು ಪ್ರಕಟಿಸಲಾಗಿದೆ. ಹತ್ತು ಅಂಶಗಳನ್ನು ಹಾಕಿ, ಇಡೀ ದಾಳಿಯ ಬಗ್ಗೆ ವಿವರಣೆ ನೀಡಲಾಗಿದೆ.

ಮಿಷನ್ LOC
ಹೊಸ ದಿಗಂತ ಪತ್ರಿಕೆಯು ಭಾರತ ಸೇನಾ ದಾಳಿಯ ಕ್ಷಣ-ಕ್ಷಣದ ಮಾಹಿತಿ, ದಾಳಿ ನಡೆದ ಸ್ಥಳಗಳು, ಶತ್ರು ಸಂಹಾರ ನಡೆದ ಬಗ್ಗೆ.. ಹೀಗೆ ಸರ್ಜಿಕಲ್ ಅಟ್ಯಾಕ್ ನ ವಿವರಗಳನ್ನು ನೀಡಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications