ರಾಜ್ಯದಲ್ಲೇ ಪ್ರಥಮ, ಮಠಾಧೀಶರಿಗಾಗಿ ವಿಶ್ರಾಂತಿ ಗೃಹ
ಬೆಂಗಳೂರು, ನ.25: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಮಠಾಧೀಶರಿಗೆಂದೇ ವಿಶೇಷ ವಿಶ್ರಾಂತಿ ಗೃಹ ಸಿದ್ಧವಾಗಿದೆ.ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ನಿರ್ಮಾಣವಾಗಿರುವ ಈ ವಿಶ್ರಾಂತಿ ಗೃಹಗಳು ವೀರಶೈವ, ಲಿಂಗಾಯತ ಮಠಾಧೀಶರ ಅನುಕೂಲಕ್ಕಾಗಿ ಸಜ್ಜಾಗಿವೆ.
ಬೆಂಗಳೂರಿನಿಂದ ನಾಡಿನ ವಿವಿಧೆಡೆ ಮಠಾಧೀಶರು ಆಗಾಗ ಪ್ರವಾಸ ಕೈಗೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು. ವಿಶ್ರಾಂತಿ ಗೃಹಗಳನ್ನು ಅವರ ಆಗತ್ಯಕ್ಕೆ ವಿನ್ಯಾಸಗೊಳಿಸಲಾಗಿದ್ದು, ಸ್ವಾಮೀಜಿಗಳ ವ್ರತ ನೇಮ ನಿಷ್ಠೆ, ಪೂಜಾ ಕೈಂಕರ್ಯಗೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವಿಶ್ರಾಂತಿಗೃಹದಲ್ಲಿ ಸಿಗಲಿರುವ ವ್ಯವಸ್ಥೆಗಳು:
* ವಿಶೇಷ ಪೂಜಾ ಕೊಠಡಿ
* ಸಂಪೂರ್ಣ ಹವಾ ನಿಯಂತ್ರಿತ
* ಪ್ರಸಾದ ವ್ಯವಸ್ಥೆ
* ಗ್ರಂಥಾಲಯ ವ್ಯವಸ್ಥೆ
* ಲ್ಯಾಪ್ ಟಾಪ್ ಸಹಿತ ಇಂಟರ್ನೆಟ್ ಸೌಲಭ್ಯ
* ಸುರಕ್ಷಿತ ಲಾಕರ್ ವ್ಯವಸ್ಥೆ
* ಲಾಂಡ್ರಿ ಸೇವೆ
* ನಿರಂತರ ವಿದ್ಯುತ್ ಪೂರೈಕೆ
ಇದರ ಜೊತೆಗೆ ಸ್ವಾಮೀಜಿ ಹಾಗೂ ಅವರ ಜೊತೆ ತಂಗಲಿರುವ ವ್ಯಕ್ತಿಗಳಿಗೆ ರೈಲು,ವಿಮಾನ ಹಗೂ ಬಸ್ ನಿಲ್ದಾಣಗಳಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಎಲ್ಲಾ ಸೇವೆಗಳನ್ನು ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ ಎಂದು ವೇದಿಕೆಯ ಮುಖ್ಯಸ್ಥ ಪ್ರಶಾಂತ್ ಕಲ್ಲೂರ ಅವರು ಒನ್ ಇಂಡಿಯಾಗೆ ತಿಳಿಸಿದ್ದಾರೆ.

ನಾಡಿನ ಪ್ರಮುಖ ವೀರಶೈವ ಮುಖಂಡರು, ರಾಜಕಾರಣಿಗಳು ಆದ ಬಿ.ಎಸ್ ಯಡಿಯೂರಪ್ಪ, ವಿಜಯ ಸಂಕೇಶ್ವರ್, ಅಶೋಕ್ ಖೇಣಿ, ಪ್ರಭಾಕರ್ ಕೋರೆ, ಜಗದೀಶ್ ಶೆಟ್ಟರ್, ಜಿ.ಎಂ. ಸಿದ್ದೇಶ್, ಯು ಎಸ್ ಶೇಖರ್ ಇವರ ಸಾಧನೆಯನ್ನು ಸ್ಮರಿಸಿ ಇವರುಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ "ಬಸವಜ್ಯೋತಿ" ವಿದ್ಯಾರ್ಥಿವೇತನ ನೀಡುತ್ತಿದೆ ಎಂದು ಪ್ರಶಾಂತ್ ಕಲ್ಲೂರ್ ಹೇಳಿದ್ದಾರೆ. ಸ್ವಾಮೀಜಿಗಳು ತಂಗಲು ಮಾಡಲಾಗಿರುವ ಈ ವಿನೂತನ ವಿಶ್ರಾಂತಿ ಗೃಹಗಳ ಮೊದಲ ಲುಕ್ ಚಿತ್ರಗಳು ಇಲ್ಲಿವೆ ನೋಡಿ
ಶರಣ ಪ್ರಶಾಂತ್ ಕಲ್ಲೂರ್, ರಾಜ್ಯ ಅಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ (ರಿ.) 92424 44444 / 080 6455 5554
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications