Get Updates
Get notified of breaking news, exclusive insights, and must-see stories!

ಟೋಲ್‌ಗಳಲ್ಲಿ ವಿಐಪಿಗೆ ಪ್ರತ್ಯೇಕ ಲೇನ್ ಬೇಕು ಎಂದು ಟೀಕೆಗೊಳಗಾದ ಸ್ಪೀಕರ್ ಯುಟಿ ಖಾದರ್

ಬೆಂಗಳೂರು, ಜುಲೈ. 06: ಸ್ಪೀಕರ್ ಯುಟಿ ಖಾದರ್ ಅವರು ಇತ್ತೀಚೆಗೆ ಟೋಲ್ ಪ್ಲಾಜಾಗಳಲ್ಲಿ ಶಾಸಕರು ಮತ್ತು ಮಾಜಿ ಶಾಸಕರಿಗೆ ಪ್ರತ್ಯೇಕ ಮಾರ್ಗ ಬೇಕು ಎಂಬ ವಿಶಿಷ್ಟ ಬೇಡಿಕೆಯನ್ನು ಮುಂದಿಟ್ಟರು. ಆದರೆ, ಅವರು ನಂತರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಶಾಸಕರಿಂದ ಈ ಬೇಡಿಕೆಯನ್ನು ಮುಂದಿಡಲಾಗಿದೆ ಮತ್ತು ಪ್ರತ್ಯೇಕ ಲೇನ್ "ಸಾಧ್ಯವಿಲ್ಲ" ಎಂದಿದ್ದಾರೆ.

ಟೋಲ್ ಗೇಟ್‌ಗಳಲ್ಲಿ ಶಾಸಕರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಇಬ್ಬರು ಶಾಸಕರು ದೂರು ನೀಡಿದ ನಂತರ ಯು ಟಿ ಖಾದರ್, ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜೊತೆ ಮಾತನಾಡುವಂತೆ ಕೇಳಿಕೊಂಡರು. ಟೋಲ್ ಪ್ಲಾಜಾ ಅಧಿಕಾರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆರೋಪಿಸಿದ ನಂತರ ಈ ವಿಷಯ ಚರ್ಚೆಗೆ ಕಾರಣವಾಯಿತು.

Speaker UT Khader Demands Separate Lanes

ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಹೇಳಿಕೆಯನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ (ಡಿಎಚ್) ವರದಿ ಮಾಡಿದೆ. "ಜೂನ್ 17 ರಂದು ನಾನು ಮೈಸೂರು ರಸ್ತೆಯಲ್ಲಿ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ನಿಲ್ಲಿಸಿದೆ. ಎಂಎಲ್ಎ ಪಾಸ್ ಹೊಂದಿದ್ದರೂ, ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿ ಶಾಸಕರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರು. ಪೊಲೀಸ್ ತನಿಖೆ ವೇಳೆ ಪಾಸ್ ಅನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು. ಸಿಬ್ಬಂದಿ ಗೂಂಡಾಗಳಂತೆ ವರ್ತಿಸುತ್ತಾರೆ ಮತ್ತು ನಿಂದನೀಯ ಪದಗಳನ್ನು ಬಳಸುತ್ತಾರೆ. ಈ ವಿಷಯ ಎಲ್ಲಾ ಶಾಸಕರಿಗೆ ಸಂಬಂಧಿಸಿದೆ" ಎಂದು ಶಾಸಕ ನರೇಂದ್ರಸ್ವಾಮಿ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ಶಾಸಕರ ಆತಂಕಗಳಿಗೆ ಸ್ಪಂದಿಸಿದ್ದು, ಈ ಕುರಿತು ಚರ್ಚಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜೊತೆ ಸಭೆ ಕರೆಯುವುದಾಗಿ ಹೇಳಿರುವುದಾಗಿ ಡಿಎಚ್ ವರದಿ ತಿಳಿಸಿದೆ. ಸ್ಪೀಕರ್ ಯುಟಿ ಖಾದರ್ ಅವರು ನರೇಂದ್ರಸ್ವಾಮಿ ಅವರಿಗೆ ಸವಲತ್ತು ಉಲ್ಲಂಘನೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ.

Speaker UT Khader Demands Separate Lanes

ಸತೀಶ್ ಜಾರಕಿಹೊಳಿ ಅವರಿಗೆ ಸ್ಪೀಕರ್ ಯುಟಿ ಖಾದರ್, "ನೀವು ಸಭೆ ಕರೆದಾಗ ಪ್ರತ್ಯೇಕ ವಿಐಪಿ ಲೇನ್‌ಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಕೇಳಿ. ಅಲ್ಲದೆ, ಅವರ ನೀತಿಯು ಮಾಜಿ ಶಾಸಕರನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಅವರನ್ನೂ ಸೇರಿಸಿಕೊಳ್ಳಬೇಕು" ಎಂದಿದ್ದಾರೆ. ಆದರೆ, ಸ್ಪೀಕರ್ ಅವರ ಬೇಡಿಕೆಯು ವಿವಾದವನ್ನು ಉಂಟುಮಾಡಿದ ಕಾರಣ, ಅವರು ಗುರುವಾರ ತಮ್ಮ ಬೇಡಿಕೆಯನ್ನು ಸ್ಪಷ್ಟಪಡಿಸಿದ್ದಾರೆ. "ಪ್ರತ್ಯೇಕ ವಿವಿಐಪಿ ಲೇನ್ ಪ್ರಾಯೋಗಿಕವಾಗಿಲ್ಲ" ಎಂದು ಹೇಳಿದ್ದಾರೆ.

"ಪ್ರತಿ ಟೋಲ್‌ನಲ್ಲಿ ಈಗಾಗಲೇ ಪ್ರತ್ಯೇಕ ಲೇನ್ ಇದೆ. ಆದರೆ, ಇದು ಮೈಸೂರು - ಬೆಂಗಳೂರು ಟೋಲ್‌ನಲ್ಲಿ ಇರಲಿಲ್ಲ. ಪ್ರತ್ಯೇಕ ವಿವಿಐಪಿ ಲೇನ್ ಪ್ರಶ್ನೆಯೇ ಇಲ್ಲ, ಇದು ಪ್ರಾಯೋಗಿಕವಾಗಿಲ್ಲ" ಎಂದು ಯುಟಿ ಖಾದರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಲಹೆಯನ್ನು ಶಾಸಕರೊಬ್ಬರು ಮಾಡಿದ್ದಾರೆಯೇ ಹೊರತು ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+