ದೀಪಾವಳಿ: ಬೆಂಗಳೂರು-ಮೈಸೂರು-ಹುಬ್ಬಳ್ಳಿ ರೈಲು ಪ್ರಯಾಣೀಕರೇ ಗಮನಿಸಿ
ಬೆಂಗಳೂರು, ಅಕ್ಟೋಬರ್ 28: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬಕ್ಕೆ ಕರ್ನಾಟಕದ ಬೇರೆ ಬೇರೆ ಕಡೆಗಳಿಂದ ತಮ್ಮ ಊರುಗಳತ್ತ ತೆರಳುವವರಿಗೆ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುತ್ತಿದೆ. ಅಲ್ಲದೇ ಒಂದಷ್ಟು ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ. ದೀಪಾವಳಿ ಮತ್ತು ಛತ್ ಪೂಜಾ ಹಬ್ಬದ ಸಮಯದಲ್ಲಿ ಜನ ಸಂದಣಿ ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ದೀಪಾವಳಿ ಹಬ್ಬದ ವೇಳೆ ಹೆಚ್ಚಾಗಲಿರುವ ಸಂಭವನೀಯ ಪ್ರಯಾಣಿಕರ ದಟ್ಟಣೆಗೆ ನಿಯಂತ್ರಣಕ್ಕೆ ರೈಲ್ವೆ ಅಧಿಕಾರಿಗಳು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗಗಳಾದ್ಯಂತ ಸುಗಮ ಕಾರ್ಯಾಚರಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಅವುಗಳ ಸಂಕ್ಷಿಪ್ತ ಅಂಶಗಳು/ಮಾಹಿತಿ ಇಲ್ಲಿದೆ. ರೈಲ್ವೆ ಪ್ರಯಾಣಿಕರು ಇದನ್ನು ಗಮನಿಸಬೇಕು.

ಪ್ರಯಾಣಿಕರಿಗಾಗಿ ನೈಋತ್ಯ ರೈಲ್ವೆ ಕೈಗೊಂಡ ಕ್ರಮಗಳು
* ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಒಟ್ಟು 55 ರೈಲುಗಳು ಕಾರ್ಯಾಚರಣೆ ನಡೆಸಲಿವೆ.
* ಸಾಮಾನ್ಯ ರೈಲುಗಳ ದಟ್ಟಣೆಯನ್ನು ನಿವಾರಣೆಗೆ, ವೇಟಿಂಗ್ ಲಿಸ್ಟ್ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ.
* ಬೆಳಗಾವಿ, ವಾಸ್ಕೋ ಡ ಗಾಮಾ, ಹುಬ್ಬಳ್ಳಿ, ಧಾರವಾಡ, ಗದಗ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ತುಮಕೂರು, ಬೆಂಗಳೂರು ಕಂಟೋನ್ಮೆಂಟ್, ಮಂಡ್ಯ, ಹಾಸನ, ದಾವಣಗೆರೆ ಮತ್ತು ನೈಋತ್ಯ ರೈಲ್ವೆಯ ಇತರ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಅಧಿಕಾರಿಗಳು, ವಾಣಿಜ್ಯ ಸಿಬ್ಬಂದಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಭದ್ರತಾ ಸಿಬ್ಬಂದಿ ಕೆಲಸ ಮಾಡಲಿದ್ದಾರೆ.
* ಸುವ್ಯವಸ್ಥೆ ಮತ್ತು ಭದ್ರತಾ ದೃಷ್ಟಿಯಿಂದ ರೈಲ್ವೆ ಸುರಕ್ಷತಾ ಬಲ (ರೈಲ್ವೆ ಪ್ರೊಟೆಕ್ಷನ್ ಫೋರ್ಸ್) ಉಪಸ್ಥಿತಿಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬ್ಯಾಗೇಜ್ ಸ್ಕ್ಯಾನರ್ ಗಳ ಸ್ಥಾಪನೆಯೊಂದಿಗೆ ಭದ್ರತೆ ಸಹ ಹೆಚ್ಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಸಂಭಾವ್ಯ ತಾಂತ್ರಿಕ ಅಡೆತಡೆಗಳನ್ನು ನಿರ್ವಹಿಸಲು ಹೆಚ್ಚುವರಿ ವಿದ್ಯುತ್ ಬ್ಯಾಕಪ್ ಇಟ್ಟುಕೊಳ್ಳಲಾಗಿದೆ.
* ನೈಋತ್ಯ ರೈಲ್ವೆಯ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಟಿಕೆಟಿಂಗ್, ನಿರ್ದೇಶನಗಳು ಮತ್ತು ವೇಳಾಪಟ್ಟಿ ಮಾಹಿತಿಯೊಂದಿಗೆ ಸಹಾಯ ಮಾಡಲು ತಾತ್ಕಾಲಿಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
* ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಹೆಚ್ಚುವರಿ ಟಿಕೆಟಿಂಗ್ ಕೌಂಟರ್ ಗಳನ್ನು ಒದಗಿಸಲಾಗಿದೆ.
* ಕಾಯುವ ಸಮಯವನ್ನು ಕಡಿಮೆ ಮಾಡಲು ಮೊಬೈಲ್ ಟಿಕೆಟಿಂಗ್, ಸ್ಮಾರ್ಟ್ ಕಾರ್ಡ್ ಗಳು ಅಥವಾ ಕ್ಯೂಆರ್ ಆಧಾರಿತ ಟಿಕೆಟಿಂಗ್ ಅನ್ನು ಪ್ರೋತ್ಸಾಹಿಸಲಾಗಿದೆ.
* ನಿರಂತರ ಎಟಿವಿಎಂ ಟಿಕೆಟಿಂಗ್ ನ ಅನುಕೂಲಕ್ಕಾಗಿ ಎಲ್ಲಾ ಎಟಿವಿಎಂ ಆಯೋಜಕರಿಗೆ ಹೆಚ್ಚುವರಿ ಸ್ಮಾರ್ಟ್ ಕಾರ್ಡ್ ಗಳನ್ನು ಮುಂಚಿತವಾಗಿ ನೀಡಲಾಗಿದೆ.
* ಕಾಯುವ ಸಮಯವನ್ನು ಕಡಿಮೆ ಮಾಡಲು ಮೊಬೈಲ್ ಟಿಕೆಟಿಂಗ್, ಸ್ಮಾರ್ಟ್ ಕಾರ್ಡ್ ಗಳು ಅಥವಾ ಕ್ಯೂಆರ್ ಆಧಾರಿತ ಟಿಕೆಟಿಂಗ್ ಅನ್ನು ಪ್ರೋತ್ಸಾಹಿಸಲಾಗಿದೆ.
* ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಹೆಚ್ಚುವರಿ ಟಿಕೆಟಿಂಗ್ ಕೌಂಟರ್ ನೀಡಲಾಗಿದೆ. ಪ್ರಯಾಣಿಕರು ಟಿಕೆಟ್ ಪಡೆಯುವುದನ್ನು ಮತ್ತು ಕ್ರಮಬದ್ಧವಾಗಿ ರೈಲು ಹತ್ತುವುದನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಕೇಂದ್ರಗಳಲ್ಲಿ ಮತ್ತು ಸಾಮಾನ್ಯ ಕೋಚ್ ಪ್ರವೇಶ ದ್ವಾರಗಳಲ್ಲಿ ವಿಶೇಷ ವ್ಯವಸ್ಥಾಪಕರನ್ನು ನಿಯೋಜಿಸಲಾಗಿದೆ.
* ನೈಋತ್ಯ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಆಂಬ್ಯುಲೆನ್ಸ್ ಜೊತೆಗೆ ವೈದ್ಯಕೀಯ ಬೂತ್ ಗಳಿಗೆ ವ್ಯವಸ್ಥೆ ಮಾಡಲಾಗಿದೆ.
* ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಹೆಚ್ಚುವರಿ ಟಿಕೆಟಿಂಗ್ ಕೌಂಟರ್ ಗಳನ್ನು ಒದಗಿಸಲಾಗಿದೆ. ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳ ಬಗ್ಗೆ ಬುಕಿಂಗ್ ಕಚೇರಿ ಮತ್ತು ನಿಲ್ದಾಣದ ಪ್ರವೇಶದ್ವಾರದಲ್ಲಿ ಮೆಗಾ ಫೋನ್ ಪ್ರಕಟಣೆ ಮಾಡಲಾಗಿದೆ.
* ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಲಭ್ಯತೆ ಮತ್ತು ಜನಸಂದಣಿಯ ಒತ್ತಡದಿಂದಾಗಿ ಆರೋಗ್ಯ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಿಬ್ಬಂದಿ ಸನ್ನದ್ಧರಾಗಿದ್ದಾರೆ ಎಂದು ರೈಲ್ವೆ ವಲಯ ಖಚಿತಪಡಿಸಿದೆ.
* ಇನ್ನೂ ವಿಶೇಷ ರೈಲುಗಳ ಲಭ್ಯತೆಯ ಬಗ್ಗೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ನಿಲ್ದಾಣಗಳಲ್ಲಿ ಹೆಚ್ಚುವರಿ ಟಿಕೆಟ್ ತಪಾಸಣಾ ಸಿಬ್ಬಂದಿ ಇರಲಿದ್ದಾರೆ. ಅಸ್ತಿತ್ವದಲ್ಲಿರುವ ರೈಲುಗಳ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ.
* ನಿಲ್ದಾಣಗಳಲ್ಲಿ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕ್ಯಾಟರಿಂಗ್ ಸ್ಟಾಲ್ ಗಳು ಸಾಕಷ್ಟು ನೀರಿನ ಬಾಟಲಿಗಳಿಂದ ತುಂಬಿವೆ. ಹೆಚ್ಚುವರಿಯಾಗಿ, ರೈಲು-ಬದಿಯ ಮಾರಾಟಗಾರರು ಮತ್ತು ಟ್ರಾಲಿ ಸೇವೆಗಳು ಬೋಗಿಗಳ ಒಳಗೆ ಅಥವಾ ಹತ್ತಿರ ನೀರಿನ ಬಾಟಲಿ ನೀಡಲು ಕ್ರಮವಹಿಸಲಾಗುತ್ತದೆ.
* ಪಾದಚಾರಿ ಮೇಲ್ಸೇತುವೆಗಳು (ಎಫ್ ಒಬಿಗಳು), ಎಸ್ಕಲೇಟರ್ ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಪ್ಲಾಟ್ ಫಾರ್ಮ್ ಗಳಲ್ಲಿ ಪ್ರಯಾಣಿಕರಿಗೆ ಸೂಕ್ತ ನಿರ್ದೇಶನಕ್ಕಾಗಿ ಹೆಚ್ಚುವರಿ ಸಂಕೇತ/ಟೈಮ್ ಟೇಬಲ್ ಬೋರ್ಡ್ ಅಳವಡಿಸಲಾಗಿದೆ.
ದೀಪಾವಳಿ ಮತ್ತು ಛತ್ ಪೂಜಾ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರು ಆರಾಮದಾಯಕ ಪ್ರಯಾಣ ಮಾಡಬೇಕು ಎಂಬುದು ನೈಋತ್ಯ ರೈಲ್ವೆ ವಲಯದ ಉದ್ದೇಶ. ವಿಶೇಷ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರು ಸುರಕ್ಷತೆಯೇ ನಮಗೆ ಆದ್ಯತೆ ಯಾಗಿದೆ. ರೈಲುಗಳಲ್ಲಿ ಸ್ವಚ್ಚತೆ ಕಾಯ್ದು ಕೊಳ್ಳುವಂತೆ ಕೋರಲಾಗಿದೆ.












Click it and Unblock the Notifications