ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಮನೂರು ಶಿವಶಂಕರಪ್ಪಗೆ ಮತಿಭ್ರಮಣೆ, ಮಾಜಿ ಸಚಿವರ ಆರೋಪಕ್ಕೆ ಆಕ್ರೋಶ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: "ಲಿಂಗಾಯತ ಪ್ರತ್ಯೇಕ ಧರ್ಮದ ಬೆಂಬಲಕ್ಕೆ ಸೆಳೆಯಲು ಕೆಲವು ಮಠಾಧೀಶರಿಗೆ ಹಣ, ಕಾರು ಕೊಡಲಾಗಿದೆ" ಎಂದು ಹೇಳಿಕೆ ನೀಡಿರುವ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಮತಿಭ್ರಮಣೆಯಾಗಿದೆ ಎಂದು ಲಿಂಗಾಯತ ಸ್ವತಂತ್ರ ಧರ್ಮದ 99 ಉಪಪಂಗಡಗಳ ಒಕ್ಕೂಟದ ಪ್ರಮುಖರು ಟೀಕಿಸಿದ್ದಾರೆ.

ಲಿಂಗಾಯಿತರು ಎಡಬಿಡಂಗಿಗಳು: ಚಂದ್ರಶೇಖರ ಪಾಟೀಲ್ಲಿಂಗಾಯಿತರು ಎಡಬಿಡಂಗಿಗಳು: ಚಂದ್ರಶೇಖರ ಪಾಟೀಲ್

"ಕೂಡಲಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿಗೆ ಲಕ್ಷಾಂತರ ರುಪಾಯಿ ನಗದು, ಕಾರು ನೀಡಿದ್ದು, ಸರ್ಕಾರದಿಂದ 2.50 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ" ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದರು.

Shamanur Shivashankarappa mentally not stable, alleged by Lingayat leaders

ಕೂಡಲೇ ಈ ಆರೋಪವನ್ನು ಅವರು ಸಾಬಿತುಪಡಿಸಬೇಕು. ಇಲ್ಲದಿದ್ದರೆ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಕುರ್ಚಿ ಖಾಲಿ ಮಾಡಬೇಕು. ಅಲ್ಲದೇ ಕೂಡಲಸಂಗಮ ಸ್ವಾಮೀಜಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಎಲ್ಲೆಡೆ ಶಾಮನೂರು ಶಿವಶಂಕರಪ್ಪ ಪ್ರತಿಕೃತಿ ದಹನ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಲಿಂಗಾಯತರ ಮೇಲೆ ಪ್ರೀತಿಯಿದೆ, ನಾನೇನೂ ಚುನಾವಣೆ ನಿಲ್ಲಬೇಕಿಲ್ಲ : ಪೇಜಾವರ ಶ್ರೀಲಿಂಗಾಯತರ ಮೇಲೆ ಪ್ರೀತಿಯಿದೆ, ನಾನೇನೂ ಚುನಾವಣೆ ನಿಲ್ಲಬೇಕಿಲ್ಲ : ಪೇಜಾವರ ಶ್ರೀ

ಶಿವಶಂಕರಪ್ಪ ಅವರು ರಾತ್ರಿ 12ಕ್ಕೆ ಮಲಗಿ, ಮಧ್ಯಾಹ್ನ 12ಕ್ಕೆ ಏಳುವಂಥವರು. ಇವರಿಗೆ ವೀರಶೈವವು ಗೊತ್ತಿಲ್ಲ, ಲಿಂಗಾಯತವು ಗೊತ್ತಿಲ್ಲ. ಇನ್ನಾದರೂ ನಾಲಗೆ ಬಿಗಿ ಹಿಡಿದು ಮಾತನಾಡಲಿ. 80 ವರ್ಷ ದಾಟಿದ ಈ ವೃದ್ಧರು ಇನ್ನೂ ಅಧಿಕಾರದ ಆಸೆಯನ್ನು ಬಿಟ್ಟಿಲ್ಲ ಎಂದು ಟೀಕಿಸಲಾಗಿದೆ.

ವೀರಶೈವ ಮಹಾಸಭಾ ಅಧ್ಯಕ್ಷ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸೌಲಭ್ಯಕ್ಕಾಗಿ ತಮ್ಮನ್ನು ಪರಿಶಿಷ್ಠ ಜಾತಿಯಲ್ಲಿ ಸೇರಿಸಿ ಎಂದು ಬೀದಿಗಿಳಿದು ಹೋರಾಟ ಮಾಡಿದ್ದ ಸ್ವಾಮೀಜಿಯನ್ನು ತಿಂಗಳ ಬಾಡಿಗೆಗೆ ತೆಗೆದುಕೊಂಡಿರುವ ಇವರು ತಮ್ಮ ಜೀವನ ಪೂರ್ತಿ ಹಣದ ಬಲದಿಂದಲೇ ಎಲ್ಲರನ್ನೂ ಕೊಂಡುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನವೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶನವೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ

ಸ್ವಾಭಿಮಾನಿ ಲಿಂಗಾಯತ ಸಮುದಾಯ ಇವರಿಗೆ ತಲೆ ಬಾಗದ ಕಾರಣ ಇದೀಗ ತಲೆ ಕೆಟ್ಟವರಂತೆ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಯುವ ಉಪಾಧ್ಯಕ್ಷ ಸಂಗಮೇಶ ಬಬಲೇಶ್ವರ, ಶಂಕರ ಗುಡಸ ಬೆಳಗಾವಿ, ವಿಠ್ಠಲ ಕೋಳೂರು ಸಿಂದಗಿ, ಭೀಮನಗೌಡ ಪರಗೊಂಡ ಕಲಬುರಗಿ, ರಾಜಣ್ಣ ಮರಳಪ್ಪನವರ ಧಾರವಾಡ, ಮಲ್ಲಿಕಾರ್ಜುನ ಕೊಟಗಿ ಬೀಳಗಿ, ಶೇಖರಗೌಡ ಗೌಡರ ಕೂಡಲಸಂಗಮ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
All India Veerashaiva Mahasabha president Shamanur Shivashankarappa mentally not stable, alleged by Lingayat leaders. This is the reaction to the allegation made by Shamanur Shivashankarappa that, some of Lingayat seers are attracted by leaders by giving money and car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X