Get Updates
Get notified of breaking news, exclusive insights, and must-see stories!

ಸಿದ್ದರಾಮಯ್ಯನವರ ಸಮಸ್ಯೆ ಏನು: ಕಾಗೋಡು ತಿಮ್ಮಪ್ಪ ಬಿಡಿಸಿಟ್ಟ ರಹಸ್ಯ

ಬೆಂಗಳೂರು, ಜ 30: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಈ ಹಿಂದೆ, ಬಹಿರಂಗವಾಗಿಯೇ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಅಸಮಾಧಾನ ಹೊರಹಾಕಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.

ಈಗ ಮತ್ತೋರ್ವ ಹಿರಿಯ ಮುಖಂಡ, ಮಾಜಿ ಸ್ಪೀಕರ್ ಕೂಡಾ, ಸಿದ್ದರಾಮಯ್ಯ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. "ಯಾರಿಗೂ ಅಹಂ ಒಳ್ಳೆಯದಲ್ಲ" ಎನ್ನುವ ಮಾತನ್ನು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

"ಸಿದ್ದರಾಮಯ್ಯನವರೇನೂ ಎಲ್ಲಾ ಬೆಳೆದು ನಿಂತವರಲ್ಲ. ಚುನಾವಣೆಯಲ್ಲಿ ಗೆದ್ದು, ಅಧಿಕಾರವನ್ನು ಪಡೆದು, ಎಲ್ಲಾ ಸೌಭಾಗ್ಯವನ್ನು ಪಡೆದಂತವರು" ಎಂದು ಕಾಗೋಡು, ಸಿದ್ದರಾಮಯ್ಯನವರ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Senior Congress Leader And Former Speaker Kagodu Thimmappa On Siddaramaiah

"ಪರಮೇಶ್ವರ್ ಅವರೇನೂ ಹಿಂದಿನಿಂದಲೂ ರಾಜಕೀಯದಲ್ಲಿ ಇದ್ರಾ" ಎಂದು ಪ್ರಶ್ನಿಸಿರುವ ಕಾಗೋಡು, "ಸಂಸ್ಥೆಗಳನ್ನು ಕಟ್ಟಿಕೊಂಡು ವ್ಯವಹಾರ ಮಾಡಿಕೊಂಡಿದ್ದಾರೆ" ಎಂದು ಕಾಗೋಡು ಹೇಳಿದ್ದಾರೆ.

"ಒಂದು ರಾಜಕೀಯ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇರುವಂತಹ ಸಂದರ್ಭದಲ್ಲಿ, ಅವರ ದುರ್ಬಲತೆ ಎದ್ದು ಕಾಣುತ್ತಿರುವಾಗ ಹೆಚ್ಚು ಕೆಲಸ ಮಾಡಬೇಕಾದಂತಹ ಅವಶ್ಯಕತೆಯಿದೆ. ರಾಜಕೀಯ ನಾಯಕರಿಗೆ ಅಹಂ ಪ್ರವೃತ್ತಿ ಬೆಳೆದಿದೆ" ಎಂದು ಪರೋಕ್ಷವಾಗಿ, ಸಿದ್ದರಾಮಯ್ಯನವರ ಬಗ್ಗೆ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.

"ಎಲ್ಲರಿಂದಗಿಯೇ ಸಿದ್ದರಾಮಯ್ಯ ಅಧಿಕಾರ ಪಡೆದುಕೊಂಡಿದ್ದು. ನಾನೇ ಎನ್ನುವ ಪ್ರವೃತ್ತಿ ಬೆಳೆದರೆ ಅದು ಒಳ್ಳೆಯ ಲಕ್ಷಣವಲ್ಲ" ಎಂದು ಹಿರಿಯ ಮುಖಂಡ, ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+