ಆಗಸ್ಟ್ 29 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೀಗೆ ಕಳೆದ ಕೆಲವು ದಿನಗಳಿಂದ ಪದೇ ಪದೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಶಾಲಾ & ಕಾಲೇಜುಗಳ ಮಕ್ಕಳು, ವಿದ್ಯಾರ್ಥಿಗಳು ಈಗಷ್ಟೇ ಗೌರಿ & ಗಣೇಶ ಹಬ್ಬ ಮಾಡಿ ಬಂದಿದ್ದಾರೆ. ಹಬ್ಬದ ಸಿಹಿ ಊಟ & ಪದಾರ್ಥ ಇನ್ನೂ ಖಾಲಿ ಆಗಿಲ್ಲ, ಹೇಗಪ್ಪಾ ಮತ್ತೆ ಶಾಲಾ & ಕಾಲೇಜುಗಳಿಗೆ ವಾಪಸ್ ಹೋಗುವುದು?? ಅಂತಾ ಯೋಚನೆ ಮಾಡ್ತಿದ್ದಾರೆ ಬಹುತೇಕ ವಿದ್ಯಾರ್ಥಿಗಳು. ಹೀಗಿದ್ದಾಗಲೇ, ಆಗಸ್ಟ್ 29 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಹಿಂದೂಗಳ ಪವಿತ್ರ ಮಾಸ ಎಂದು ಕರೆಯುವ ಶ್ರಾವಣದಲ್ಲಿ ಸಾಲು, ಸಾಲು ಹಬ್ಬಗಳು & ಪೂಜೆ ಹಾಗೂ ವ್ರತ ಬರುತ್ತವೆ. ಈ ಕಾರಣಕ್ಕೆ ಶಾಲಾ, ಕಾಲೇಜುಗಳಿಗೆ ಶ್ರಾವಣ ಮಾಸದಲ್ಲಿ ಸಾಲು ಸಾಲು ರಜೆ ಘೋಷಣೆ ಮಾಡಲಾಗುತ್ತದೆ. ಅದರಲ್ಲೂ ಇದೇ ತಿಂಗಳಲ್ಲಿ ಅಂದ್ರೆ 2025 ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಭರ್ಜರಿ ರಜೆ ಘೋಷಣೆ ಆಗಿದ್ದು ವಿದ್ಯಾರ್ಥಿಗಳಿಗೆ ಖುಷಿ ನೀಡಿತ್ತು. ಇದೇ ಸಮಯದಲ್ಲಿ ಲಾಟರಿ ಎನ್ನುವಂತೆ, ಆಗಸ್ಟ್ 29 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಆಗಸ್ಟ್ 29 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ?
ಹೌದು, ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಮಳೆರಾಯ ಮತ್ತೆ ಅಬ್ಬರ ತೋರಿಸುತ್ತಿರುವ ಹಿನ್ನೆಲೆ ಆತಂಕದ ವಾತಾವರಣ ಕೂಡ ನಿರ್ಮಾಣ ಆಗಿದೆ. ಅಂದಹಾಗೆ ಭೀಕರ ಬರ ಇದ್ದ ಕಾರಣಕ್ಕೆ 2 ವರ್ಷಗಳ ಹಿಂದೆ ಕನ್ನಡಿಗರು ಪರದಾಡಿದ್ದರು. ಆದರೆ ಈ ಬಾರಿ ಭೀಕರ ಮಳೆ ಹಿನ್ನೆಲೆ ಹೊಸ ಹೊಸ ಸಮಸ್ಯೆ ಸೃಷ್ಟಿಯಾಗುತ್ತಿವೆ. ಅದರಲ್ಲೂ, ಆಗಸ್ಟ್ 29 ಶುಕ್ರವಾರ ನಂತರ ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಕೂಡ ಸೃಷ್ಟಿ ಆಗುವ ಭಯ ಆವರಿಸಿದೆ. ಹಾಗಾದರೆ, ಆಗಸ್ಟ್ 29 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?
ಮಳೆ.. ಮಳೆ.. ಮಳೆ..
ಹೌದು, ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಕರಾವಳಿ ಜಿಲ್ಲೆ ಉತ್ತರ ಕನ್ನಡ & ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆಯು ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಈ ಹಿನ್ನೆಲೆ ಭಾರಿ ಕಟ್ಟೆಚ್ಚರ ಕೈಗೊಳ್ಳಲಾಗಿದ್ದು, ಕರಾವಳಿ ಮಾತ್ರವಲ್ಲ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಕೂಡ ಮಳೆ ಕಾಟ ಇರಲಿದೆ ಎಂದು ಈಗ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ & ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಆಗಸ್ಟ್ 29 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ?
ಮಲೆನಾಡು ಜಿಲ್ಲೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಭಾಗದಲ್ಲೂ ಭಾರಿ ಮಳೆ ಕಾಟ ಸೃಷ್ಟಿ ಆಗಲಿದೆ ಎಂದು ಈಗ ಮುನ್ನೆಚ್ಚರಿಕೆ ನೀಡಿರುವುದು ಆತಂಕ ಮೂಡಿಸಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆ ಸುರಿವ ಬಗ್ಗೆ ಮುನ್ಸೂಚನೆ ಇದೆ. ರಾಯಚೂರು, ವಿಜಯಪುರ ಸೇರಿ ಯಾದಗಿರಿ ಜಿಲ್ಲೆಗಳಲ್ಲೂ ಭಾರಿ ಮಳೆ ಕುರಿತು ಮುನ್ನೆಚ್ಚರಿಕೆ ಇದೆ. ಹೀಗಾಗಿ ಭಾರಿ ಮಳೆ ಹಿನ್ನೆಲೆಯಲ್ಲಿ ಇದೀಗ ಆಗಸ್ಟ್ 29 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದ್ದು, ಇಂದು ಸಂಜೆಯ ಒಳಗೆ ಅಧಿಕೃತ ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ.












Click it and Unblock the Notifications